ನವದೆಹಲಿ: ಕೊರೊನಾ ಸೋಂಕು ಹರಡದಂತೆ ದೇಶದಾದ್ಯಂತಲಾಕ್ಡೌನ್ಜಾರಿಯಲ್ಲಿರುವಕಾರಣ ರಂಜಾನ್ ಸಂದರ್ಭದ ಪ್ರಾರ್ಥನೆ ಹಾಗೂ 'ಸಹಾರಿ'ಯನ್ನು ಜನರು ತಮ್ಮ ತಮ್ಮ ಮನೆಯಲ್ಲೇಸಲ್ಲಿಸಿದ್ದಾರೆ.
ರಂಜಾನ್ ಸಮಯದಲ್ಲಿ ಅಂತರ ಕಾಯ್ದುಕೊಳ್ಳುವುದು, ಕೊರೊನಾ ಹರಡದಂತೆ ತಡೆಯುವುದುಅನಿವಾರ್ಯವಾಗಿರುವ ಕಾರಣ ಗುಂಪುಗೂಡಿ ಪ್ರಾರ್ಥನೆ ಸಲ್ಲಿಸದಂತೆ ಸರ್ಕಾರ ಆದೇಶದಲ್ಲಿ ತಿಳಿಸಿದೆ. ಈ ಕಾರಣದಿಂದಾಗಿ ಎಲ್ಲಾ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧಿಸಲಾಗಿದೆ.
ದೆಹಲಿಯ ಇಂದರ್ ಲೋಕದ ನಿವಾಸಿ ಮಹಮದ್ ಸಲೀಮ್, ಕೊರೊನಾ ಸೋಂಕು ಹರಡದಂತೆ ಲಾಕ್ ಡೌನ್ ಜಾರಿಗೆ ತಂದಿರುವ ಕಾರಣ ನಾವು ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿದ್ದೇವೆ, ಸೋಂಕು ಹರಡದಂತೆ ಜಾಗೃತೆ ವಹಿಸುವುದು ಮುಖ್ಯವಾಗಿರುವುದರಿಂದ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.
ದೆಹಲಿಯಲ್ಲಿ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿದ ಸಲೀಂ
Delhi: People offered 'Namaz' and performed 'sahari' rituals at their homes as all mosques remain closed amid the #CoronaLockdown."If we step outdoors it can lead to the spread of Coronavirus. So,I prayed along with my family at home",Md Salim, a resident of Inderlok said.#Ramzanhttps://t.co/rBosgSErMUpic.twitter.com/M4AOjrO7dO