<figcaption>""</figcaption>.<p><strong>ಚೆನ್ನೈ: </strong>ಮದ್ರಾಸ್ ಹೈಕೋರ್ಟ್ ಶುಕ್ರವಾರ ಲಾಕ್ಡೌನ್ ನಿರ್ಬಂಧ ಸಂಪೂರ್ಣ ತೆರವು ಮಾಡುವವರೆಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಆದರೆ, ಆನ್ಲೈನ್ ಮಾರಾಟಕ್ಕೆ ಅನುಮತಿ ನೀಡಿದೆ.</p>.<p>ನ್ಯಾಯಮೂರ್ತಿಗಳಾದ ವಿನೀತ್ ಕೊಠಾರಿ ಮತ್ತು ಪುಷ್ಪಾ ಸತ್ಯನಾರಾಯಣ ಅವರಿದ್ದ ವಿಶೇಷ ವಿಭಾಗೀಯ ಈ ಆದೇಶ ಹೊರಡಿಸಿದೆ. ಮದ್ಯದ ಅಂಗಡಿಗಳನ್ನು ತೆರೆಯಲು ನ್ಯಾಯಾಲಯ ವಿಧಿಸಿದ್ದ ನಿರ್ಬಂಧಗಳು ಸಾರಾಸಗಟಾಗಿ ಉಲ್ಲಂಘನೆಯಾದ ಕಾರಣ ಇಂಥ ಆದೇಶ ಹೊರಡಿಸಬೇಕಾಯಿತು ಎಂದು ನ್ಯಾಯಪೀಠ ಹೇಳಿದೆ.</p>.<p>ಅಂಗಡಿಗಳ ಎದುರು ಅಂತರ ಕಾಪಾಡುವುದೂ ಸೇರಿದಂತೆ ಸುರಕ್ಷತೆಯ ನಿಯಮಗಳು ಉಲ್ಲಂಘನೆಯಾಗುತ್ತಿವೆ ಎಂದು ಹಲವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.</p>.<div style="text-align:center"><figcaption><em><strong>ತಮಿಳುನಾಡಿನಲ್ಲಿ ಮದ್ಯ ಸಿಕ್ಕವರ ಸಂಭ್ರಮ</strong></em></figcaption></div>.<p>ಮೇ 4ರಂದು ತಮಿಳುನಾಡು ಸರ್ಕಾರವು ಸರ್ಕಾರಿ ಆದೇಶವೊಂದನ್ನು ಹೊರಡಿಸಿ ಮೇ 7ರಿಂದ ಮದ್ಯದ ಅಂಗಡಿಗಳನ್ನು ತೆರೆಯುವುದಾಗಿ ಹೇಳಿತ್ತು. ಮದ್ಯದ ಅಂಗಡಿಗಳಿಗೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಬೇಕು, ಅಂತರ ಕಾಪಾಡಿಕೊಳ್ಳುವುದೂ ಸೇರಿದಂತೆ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು ಎಂದು ನ್ಯಾಯಾಲಯ ಸೂಚಿಸಿತ್ತು.</p>.<p>ಸರ್ಕಾರದ ಆದೇಶವನ್ನು ಹಲವು ವಕೀಲರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಮೇ 6ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯವು ಮದ್ಯ ಮಾರಾಟ ಆದೇಶಕ್ಕೆ ತಡೆನೀಡಲು ನಿರಾಕರಿಸಿ, ಹಲವು ನಿಯಮಗಳನ್ನು ವಿಧಿಸಿತ್ತು.</p>.<p>ನಗದು ರೂಪದಲ್ಲಿ ಹಣ ಪಾವತಿಸುವ ಗ್ರಾಹಕನಿಗೆ ಒಂದು ದಿನಕ್ಕೆ ಕೇವಲ 750 ಎಂಎಲ್ ಮದ್ಯ ಮಾರಬೇಕು ಎಂದೂ ನ್ಯಾಯಲಯ ಸರ್ಕಾರಕ್ಕೆ ಆದೇಶಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p><strong>ಚೆನ್ನೈ: </strong>ಮದ್ರಾಸ್ ಹೈಕೋರ್ಟ್ ಶುಕ್ರವಾರ ಲಾಕ್ಡೌನ್ ನಿರ್ಬಂಧ ಸಂಪೂರ್ಣ ತೆರವು ಮಾಡುವವರೆಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಆದರೆ, ಆನ್ಲೈನ್ ಮಾರಾಟಕ್ಕೆ ಅನುಮತಿ ನೀಡಿದೆ.</p>.<p>ನ್ಯಾಯಮೂರ್ತಿಗಳಾದ ವಿನೀತ್ ಕೊಠಾರಿ ಮತ್ತು ಪುಷ್ಪಾ ಸತ್ಯನಾರಾಯಣ ಅವರಿದ್ದ ವಿಶೇಷ ವಿಭಾಗೀಯ ಈ ಆದೇಶ ಹೊರಡಿಸಿದೆ. ಮದ್ಯದ ಅಂಗಡಿಗಳನ್ನು ತೆರೆಯಲು ನ್ಯಾಯಾಲಯ ವಿಧಿಸಿದ್ದ ನಿರ್ಬಂಧಗಳು ಸಾರಾಸಗಟಾಗಿ ಉಲ್ಲಂಘನೆಯಾದ ಕಾರಣ ಇಂಥ ಆದೇಶ ಹೊರಡಿಸಬೇಕಾಯಿತು ಎಂದು ನ್ಯಾಯಪೀಠ ಹೇಳಿದೆ.</p>.<p>ಅಂಗಡಿಗಳ ಎದುರು ಅಂತರ ಕಾಪಾಡುವುದೂ ಸೇರಿದಂತೆ ಸುರಕ್ಷತೆಯ ನಿಯಮಗಳು ಉಲ್ಲಂಘನೆಯಾಗುತ್ತಿವೆ ಎಂದು ಹಲವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.</p>.<div style="text-align:center"><figcaption><em><strong>ತಮಿಳುನಾಡಿನಲ್ಲಿ ಮದ್ಯ ಸಿಕ್ಕವರ ಸಂಭ್ರಮ</strong></em></figcaption></div>.<p>ಮೇ 4ರಂದು ತಮಿಳುನಾಡು ಸರ್ಕಾರವು ಸರ್ಕಾರಿ ಆದೇಶವೊಂದನ್ನು ಹೊರಡಿಸಿ ಮೇ 7ರಿಂದ ಮದ್ಯದ ಅಂಗಡಿಗಳನ್ನು ತೆರೆಯುವುದಾಗಿ ಹೇಳಿತ್ತು. ಮದ್ಯದ ಅಂಗಡಿಗಳಿಗೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಬೇಕು, ಅಂತರ ಕಾಪಾಡಿಕೊಳ್ಳುವುದೂ ಸೇರಿದಂತೆ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು ಎಂದು ನ್ಯಾಯಾಲಯ ಸೂಚಿಸಿತ್ತು.</p>.<p>ಸರ್ಕಾರದ ಆದೇಶವನ್ನು ಹಲವು ವಕೀಲರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಮೇ 6ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯವು ಮದ್ಯ ಮಾರಾಟ ಆದೇಶಕ್ಕೆ ತಡೆನೀಡಲು ನಿರಾಕರಿಸಿ, ಹಲವು ನಿಯಮಗಳನ್ನು ವಿಧಿಸಿತ್ತು.</p>.<p>ನಗದು ರೂಪದಲ್ಲಿ ಹಣ ಪಾವತಿಸುವ ಗ್ರಾಹಕನಿಗೆ ಒಂದು ದಿನಕ್ಕೆ ಕೇವಲ 750 ಎಂಎಲ್ ಮದ್ಯ ಮಾರಬೇಕು ಎಂದೂ ನ್ಯಾಯಲಯ ಸರ್ಕಾರಕ್ಕೆ ಆದೇಶಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>