ಮಲಪ್ಪುರಂ: ಕೇರಳದ ಮಲಪ್ಪುರಂ ಜಿಲ್ಲೆಯಕವಳಪ್ಪಾರ ಎಂಬಲ್ಲಿಭೂಕುಸಿತದಿಂದ 10 ಮಂದಿ ಸಾವಿಗೀಡಾಗಿದ್ದಾರೆ ಎಂದು ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.
ಪೋತ್ತುಕಲ್ಲಿನ ಬಳಿ ಇರುವ ದೊಡ್ಡ ಗುಡ್ಡವೊಂದು ಕುಸಿದು ಬಿದ್ದು ಈ ದುರಂತ ಸಂಭವಿಸಿದೆ.ಸುಮಾರು 50ರಷ್ಟು ಕುಟುಂಬಗಳು ಮಣ್ಣಿನಡಿಯಲ್ಲಿ ಸಿಲುಕಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ. ಹೀಗಾಗಿದ್ದರೆ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.
ಗುರುವಾರ ರಾತ್ರಿ ಎಂಟೂವರೆಗೆ ಇಲ್ಲಿ ಭೂಕುಸಿತವುಂಟಾಗಿದೆ.ಒಂದೆಡೆ ಗುಡ್ಡದಿಂದ ಕಲ್ಲುಗಳುರುಳಿದ್ದರೆ ಇನ್ನೊಂದಡೆಯಿಂದ ಮಣ್ಣು ಕುಸಿದಿದ್ದರಿಂದ ಇಲ್ಲಿನ ಕುಟುಂಬಗಳು ಮಣ್ಣಿನಡಿಯಲ್ಲಿ ಸಿಲುಕಿಕೊಂಡವು.
Kerala: India Meteorological Dept (IMD) issues Red alert for 9 districts of the state for today. Red alert issued for Ernakulam, Idukki, Thrissur, Palakkad, Malappuram, Kozhikode, Wayanad, Kannur and Kasargod districts. #KeralaRain pic.twitter.com/7eBTmiELcN
— ANI (@ANI) August 9, 2019
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ತುಕಡಿ ಇಲ್ಲಿಗೆ ಆಗಮಿಸಿದ್ದು, ಜೆಸಿಬಿಗೆ ಮಾತ್ರ ಇಲ್ಲಿ ರಕ್ಷಣಾ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ.
Kerala: 30 families feared missing after landslide occurred at Kavalappara, Nilambur in Malappuram district yesterday. The rescue team has reached the spot today; search and rescue operation underway.
— ANI (@ANI) August 9, 2019
ಹತ್ತಿರದ ಪ್ರದೇಶಗಳಲ್ಲಿ ಭೂಕುಸಿತ ಭೀತಿಯಿರುವ ಕಾರಣ ಸಂಜೆ ಹೊತ್ತಿಗೆ ರಕ್ಷಣಾ ಕಾರ್ಯಗಳನ್ನು ನಿಲ್ಲಿಸಲಾಗುವುದು.ದುರಂತ ನಡೆದು ಒಂದು ದಿನ ಕಳೆದ ಕಾರಣ ಮಣ್ಣಿನಡಿಯಲ್ಲಿ ಸಿಲುಕಿರುವವರ ಪ್ರಾಣ ರಕ್ಷಣೆ ಅಸಾಧ್ಯ ಎಂದೆನಿಸುತ್ತಿದೆ. ಮಳೆ ನೀರಿನಿಂದ ಕೆಸರು ತುಂಬಿದ್ದರಿಂದ ರಕ್ಷಣಾ ಕಾರ್ಯಗಳಿಗೂ ಅಡಚಣೆಯಾಗುತ್ತಿದೆ.
ಕೇರಳದ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ #KeralaFloods #KeralaRains #ಕೇರಳಪ್ರವಾಹ #ಕೇರಳ #KeralaRain pic.twitter.com/IXGEefXwJw
— ಪ್ರಜಾವಾಣಿ|Prajavani (@prajavani) August 9, 2019
ಇದನ್ನೂ ಓದಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.