<p><strong>ನವದೆಹಲಿ: </strong>ದೇಶದ ಆರ್ಥಿಕ ಪರಿಸ್ಥಿತಿ ವಿಷಯದಲ್ಲಿ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ‘ಈ ಸರ್ಕಾರವು ‘ಮಂದಗತಿ’ ಎಂಬ ಪದ ನಿಜವೆಂದು ಒಪ್ಪಿಕೊಳ್ಳುವುದಿಲ್ಲ. ಇದು ಅಪಾಯದ ವಿಚಾರ. ಸಮಸ್ಯೆಯನ್ನು ಗುರುತಿಸುವಲ್ಲೇ ವಿಫಲವಾದರೆ, ಅದಕ್ಕೆ ಉತ್ತರವನ್ನೂ ಹುಡುಕುವುದು ಸಾಧ್ಯವಾಗುವುದಿಲ್ಲ’ ಎಂದಿದ್ದಾರೆ.</p>.<p>ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರ ‘ಬ್ಯಾಕ್ಸ್ಟೇಜ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಂಗ್ ಮಾತನಾಡಿದರು. ‘ಅಹ್ಲುವಾಲಿಯಾ ಅವರು ಈ ಕೃತಿಯಲ್ಲಿ ಯುಪಿಎ ಸರ್ಕಾರ ದುರ್ಬಲ ಮತ್ತು ಗುಣಾತ್ಮಕ ಅಂಶಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಈ ವಿಷಯಗಳು ಚರ್ಚೆಯಾಗಬೇಕು. ಏಕೆಂದರೆ, ಪ್ರಸ್ತುತ ಇರುವ ಸರ್ಕಾರವು ‘ಮಂದಗತಿ’ ಎಂಬ ಪದ ಇದೆ ಎನ್ನುವುದನ್ನೇ ಒಪ್ಪಿಕೊಳ್ಳುವುದಿಲ್ಲ. ಇದು ರಾಷ್ಟ್ರದ ಅಭಿವೃದ್ಧಿಗೆ ಮಾರಕ’ ಎಂದರು.</p>.<p>‘ಆರ್ಥಿಕತೆ ಉದಾರೀಕರಣ ಸಂದರ್ಭದಲ್ಲಿ ಪಿ.ಚಿದಂಬರಂ, ಅಹ್ಲುವಾಲಿಯಾ ನನ್ನ ಬೆಂಬಲಕ್ಕೆ ಇದ್ದರು. ಹಲವು ವಿರೋಧಗಳು ಎದುರಾದರೂ ಹಲವು ಸುಧಾರಣೆಗಳನ್ನು ತರಲು ಇದು ಸಹಕಾರಿಯಾಯಿತು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ದೇಶದ ಆರ್ಥಿಕ ಪರಿಸ್ಥಿತಿ ವಿಷಯದಲ್ಲಿ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ‘ಈ ಸರ್ಕಾರವು ‘ಮಂದಗತಿ’ ಎಂಬ ಪದ ನಿಜವೆಂದು ಒಪ್ಪಿಕೊಳ್ಳುವುದಿಲ್ಲ. ಇದು ಅಪಾಯದ ವಿಚಾರ. ಸಮಸ್ಯೆಯನ್ನು ಗುರುತಿಸುವಲ್ಲೇ ವಿಫಲವಾದರೆ, ಅದಕ್ಕೆ ಉತ್ತರವನ್ನೂ ಹುಡುಕುವುದು ಸಾಧ್ಯವಾಗುವುದಿಲ್ಲ’ ಎಂದಿದ್ದಾರೆ.</p>.<p>ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರ ‘ಬ್ಯಾಕ್ಸ್ಟೇಜ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಂಗ್ ಮಾತನಾಡಿದರು. ‘ಅಹ್ಲುವಾಲಿಯಾ ಅವರು ಈ ಕೃತಿಯಲ್ಲಿ ಯುಪಿಎ ಸರ್ಕಾರ ದುರ್ಬಲ ಮತ್ತು ಗುಣಾತ್ಮಕ ಅಂಶಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಈ ವಿಷಯಗಳು ಚರ್ಚೆಯಾಗಬೇಕು. ಏಕೆಂದರೆ, ಪ್ರಸ್ತುತ ಇರುವ ಸರ್ಕಾರವು ‘ಮಂದಗತಿ’ ಎಂಬ ಪದ ಇದೆ ಎನ್ನುವುದನ್ನೇ ಒಪ್ಪಿಕೊಳ್ಳುವುದಿಲ್ಲ. ಇದು ರಾಷ್ಟ್ರದ ಅಭಿವೃದ್ಧಿಗೆ ಮಾರಕ’ ಎಂದರು.</p>.<p>‘ಆರ್ಥಿಕತೆ ಉದಾರೀಕರಣ ಸಂದರ್ಭದಲ್ಲಿ ಪಿ.ಚಿದಂಬರಂ, ಅಹ್ಲುವಾಲಿಯಾ ನನ್ನ ಬೆಂಬಲಕ್ಕೆ ಇದ್ದರು. ಹಲವು ವಿರೋಧಗಳು ಎದುರಾದರೂ ಹಲವು ಸುಧಾರಣೆಗಳನ್ನು ತರಲು ಇದು ಸಹಕಾರಿಯಾಯಿತು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>