ನವದೆಹಲಿ: ದೇಶದ ಆರ್ಥಿಕ ಪರಿಸ್ಥಿತಿ ವಿಷಯದಲ್ಲಿ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ‘ಈ ಸರ್ಕಾರವು ‘ಮಂದಗತಿ’ ಎಂಬ ಪದ ನಿಜವೆಂದು ಒಪ್ಪಿಕೊಳ್ಳುವುದಿಲ್ಲ. ಇದು ಅಪಾಯದ ವಿಚಾರ. ಸಮಸ್ಯೆಯನ್ನು ಗುರುತಿಸುವಲ್ಲೇ ವಿಫಲವಾದರೆ, ಅದಕ್ಕೆ ಉತ್ತರವನ್ನೂ ಹುಡುಕುವುದು ಸಾಧ್ಯವಾಗುವುದಿಲ್ಲ’ ಎಂದಿದ್ದಾರೆ.