<p><strong>ಅಂಬಾಲ</strong>: ಹರ್ಯಾಣಮೂಲದ ಸಂತೋಷ್ ಮತ್ತು ಸುಷ್ಮಾ ಎಂಬ ಸಹೋದರಿಯರು ಪಾಸ್ಪೋರ್ಟ್ ಪಡೆಯಲು ಅರ್ಜಿ ಸಲ್ಲಿಸಿದ್ದರು. ಆದರೆಪಾಸ್ಪೋರ್ಟ್ ಕಚೇರಿಯ ಸಿಬ್ಬಂದಿ ಈ ಸಹೋದರಿಯರು 'ನೇಪಾಳದವರಂತೆ ಕಾಣುತ್ತಿದ್ದಾರೆ' ಎಂಬ ಕಾರಣ ನೀಡಿ ಪಾಸ್ಪೋರ್ಟ್ ಅರ್ಜಿ ತಿರಸ್ಕರಿಸಿರುವ ಘಟನೆ ನಡೆದಿದೆ.</p>.<p>ಪಾಸ್ಪೋರ್ಟ್ ಪಡೆಯುವುದಕ್ಕಾಗಿ ಈ ಸಹೋದರಿಯರು ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದರು.ಆದರೆ ಈ ದಾಖಲೆಗಳನ್ನು ಪರಿಶೀಲಿಸುವ ಮುನ್ನವೇ ಮುಖ ನೋಡಿ ನೀವು ನೇಪಾಳದವರಂತೆ ಕಾಣುತ್ತಿದ್ದೀರಿ ಎಂದು ಪಾಸ್ಪೋರ್ಟ್ ಅರ್ಜಿಯನ್ನು ತಿರಸ್ಕರಿಸಿದ್ದಾರೆ ಅಲ್ಲಿನ ಅಧಿಕಾರಿಗಳು.<br /><br />ಇದಾದ ನಂತರ ಈಸಹೋದರಿಯರು ಹರ್ಯಾಣದ ಮುಖ್ಯಮಂತ್ರಿ ಅನಿಲ್ ವಿಜ್ ಅವರ ನಿವಾಸಕ್ಕೆ ತೆರಳಿ ಪಾಸ್ಪೋರ್ಟ್ ಕಚೇರಿಯಲ್ಲಿ ನಡೆದ ಘಟನೆ ವಿವರಿಸಿದ್ದಾರೆ. ಸಹೋದರಿಯರದೂರು ಆಲಿಸಿದ ಮುಖ್ಯಮಂತ್ರಿಈ ಬಗ್ಗೆ ತನಿಖೆ ನಡೆಸುವಂತೆ ಹೆಚ್ಚುವರಿ ಆಯುಕ್ತ ಅಶೋಕ್ ಶರ್ಮಾ ಅವರಿಗೆ ಆದೇಶಿಸಿದ್ದಾರೆ.</p>.<p>ದಾಖಲೆಗಳನ್ನು ಪರಿಶೀಲಿಸದೆಸಹೋದರಿಯರ ಮುಖ ನೋಡಿ 'ರಾಷ್ಟ್ರೀಯತೆ' ಅಳೆದ ಪಾಸ್ಪೋರ್ಟ್ ಕಚೇರಿಯ ಅಧಿಕಾರಿಗಳನ್ನು ಅಶೋಕ್ ಶರ್ಮಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಾದ ನಂತರ ಸಹೋದರಿಯರಿಗೆ ಪಾಸ್ಪೋರ್ಟ್ ನೀಡಲು ಸಿದ್ಧತೆ ಮಾಡಲಾಗಿದೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಂಬಾಲ</strong>: ಹರ್ಯಾಣಮೂಲದ ಸಂತೋಷ್ ಮತ್ತು ಸುಷ್ಮಾ ಎಂಬ ಸಹೋದರಿಯರು ಪಾಸ್ಪೋರ್ಟ್ ಪಡೆಯಲು ಅರ್ಜಿ ಸಲ್ಲಿಸಿದ್ದರು. ಆದರೆಪಾಸ್ಪೋರ್ಟ್ ಕಚೇರಿಯ ಸಿಬ್ಬಂದಿ ಈ ಸಹೋದರಿಯರು 'ನೇಪಾಳದವರಂತೆ ಕಾಣುತ್ತಿದ್ದಾರೆ' ಎಂಬ ಕಾರಣ ನೀಡಿ ಪಾಸ್ಪೋರ್ಟ್ ಅರ್ಜಿ ತಿರಸ್ಕರಿಸಿರುವ ಘಟನೆ ನಡೆದಿದೆ.</p>.<p>ಪಾಸ್ಪೋರ್ಟ್ ಪಡೆಯುವುದಕ್ಕಾಗಿ ಈ ಸಹೋದರಿಯರು ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದರು.ಆದರೆ ಈ ದಾಖಲೆಗಳನ್ನು ಪರಿಶೀಲಿಸುವ ಮುನ್ನವೇ ಮುಖ ನೋಡಿ ನೀವು ನೇಪಾಳದವರಂತೆ ಕಾಣುತ್ತಿದ್ದೀರಿ ಎಂದು ಪಾಸ್ಪೋರ್ಟ್ ಅರ್ಜಿಯನ್ನು ತಿರಸ್ಕರಿಸಿದ್ದಾರೆ ಅಲ್ಲಿನ ಅಧಿಕಾರಿಗಳು.<br /><br />ಇದಾದ ನಂತರ ಈಸಹೋದರಿಯರು ಹರ್ಯಾಣದ ಮುಖ್ಯಮಂತ್ರಿ ಅನಿಲ್ ವಿಜ್ ಅವರ ನಿವಾಸಕ್ಕೆ ತೆರಳಿ ಪಾಸ್ಪೋರ್ಟ್ ಕಚೇರಿಯಲ್ಲಿ ನಡೆದ ಘಟನೆ ವಿವರಿಸಿದ್ದಾರೆ. ಸಹೋದರಿಯರದೂರು ಆಲಿಸಿದ ಮುಖ್ಯಮಂತ್ರಿಈ ಬಗ್ಗೆ ತನಿಖೆ ನಡೆಸುವಂತೆ ಹೆಚ್ಚುವರಿ ಆಯುಕ್ತ ಅಶೋಕ್ ಶರ್ಮಾ ಅವರಿಗೆ ಆದೇಶಿಸಿದ್ದಾರೆ.</p>.<p>ದಾಖಲೆಗಳನ್ನು ಪರಿಶೀಲಿಸದೆಸಹೋದರಿಯರ ಮುಖ ನೋಡಿ 'ರಾಷ್ಟ್ರೀಯತೆ' ಅಳೆದ ಪಾಸ್ಪೋರ್ಟ್ ಕಚೇರಿಯ ಅಧಿಕಾರಿಗಳನ್ನು ಅಶೋಕ್ ಶರ್ಮಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಾದ ನಂತರ ಸಹೋದರಿಯರಿಗೆ ಪಾಸ್ಪೋರ್ಟ್ ನೀಡಲು ಸಿದ್ಧತೆ ಮಾಡಲಾಗಿದೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>