ಭಾರತ ಮತ್ತು ಪಾಕಿಸ್ತಾನ ಯುದ್ಧ ವಿಮಾನಗಳ ನಡುವೆ ಬುಧವಾರ ನಡೆದ ಕಾದಾಟದಲ್ಲಿ ಮಿಗ್ ಯುದ್ಧ ವಿಮಾನ ಪತನಗೊಂಡು ಭಾರತದ ಪೈಲಟ್ ಅಭಿನಂದನ್ ಅವರನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆದಿದೆ. ಪಾಕಿಸ್ತಾನದಲ್ಲಿರುವ ಭಾರತದ ರಾಜಭಾರಿಯನ್ನು ಕರೆಸಿಕೊಂಡಿದ್ದ ಭಾರತ ಸರ್ಕಾರ, ಸುರಕ್ಷಿತ ಹಾಗೂ ಶೀಘ್ರವಾಗಿ ಪೈಲಟ್ ಬಿಡುಗಡೆಗೆ ರಾಜತಾಂತ್ರಿಕ ಒತ್ತಾಯವನ್ನು ಸೂಚಿಸಿದೆ. ಪೈಲಟ್ನ್ನು ಪಾಕಿಸ್ತಾನ ಸೂಕ್ತ ರೀತಿಯಲ್ಲಿ ನಡೆಸಿಕೊಂಡಿರದ ಬಗ್ಗೆ, ಕೆಟ್ಟದಾಗಿ ತೋರಿರುವ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ’ಅವರಿಗೆ ಯಾವುದೇ ತೊಂದರೆ ಸಂಭವಿಸದಂತೆ ಎಚ್ಚರ ವಹಿಸಲು’ ಭಾರತ ಆಗ್ರಹಿಸಿದೆ.