ಸೋಮವಾರ ರಾತ್ರಿ ಭಾರೀ ಮಳೆಯ ನಡುವೆ ಜೈಪುರದಿಂದ ಬಂದ ಸ್ಪೈಸ್ಜೆಟ್ನ ವಿಮಾನ ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸಿದಾಗ ರನ್ ವೇಯಿಂದ ಜಾರಿದ್ದು, ಮುಂಬೈ ವಿಮಾನ ನಿಲ್ದಾಣದ ಮುಖ್ಯ ರನ್ವೇಯನ್ನೇ ಮುಚ್ಚಬೇಕಾಯಿತು. ಇದರ ಬೆನ್ನಲ್ಲೇ ಡಿಜಿಸಿಎ ಈ ಸೂಚನೆ ನೀಡಿದೆ. ಪೈಲಟ್ಗಳನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ ಎಂದು ಸ್ಪೈಸ್ಜೆಟ್ನ ವಕ್ತಾರರು ಹೇಳಿದ್ದಾರೆ.