‘ಡಾ. ಕಸ್ತೂರಿರಂಗನ್ ನನ್ನ ಹಳೆಯ ಸ್ನೇಹಿತ. ಕಳೆದ 30 ವರ್ಷಗಳಿಂದ ನನ್ನನ್ನು ಬಲ್ಲರು.ಆದರೆ, ಅವರು ಪಶ್ಚಿಮಘಟ್ಟ ಸಂರಕ್ಷಣೆ ಕುರಿತು ಅಧ್ಯಯನ ಆರಂಭಿಸಿದಾಗ ನನ್ನಿಂದ ಮಾಹಿತಿ ಪಡೆಯಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಡಬ್ಲ್ಯೂಜಿಇಇಪಿಗಿಂತಲೂ ಉತ್ತಮವಾದ ಮಾಹಿತಿ ಲಭಿಸಿದೆ ಎಂದು ಹೇಳಿದ್ದರು. ಈ ವಿಷಯವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆ ತಿಳಿಸಿದೆ.ಆದರೆ, ಎಂದಿಗೂ ಅದನ್ನು ಬಹಿರಂಗಪಡಿಸಲಿಲ್ಲ. ಇದು ವೈಜ್ಞಾನಿಕ ಉಲ್ಲಂಘನೆ’ ಎಂದು ಹೇಳಿದರು.