<p><strong>ನವದೆಹಲಿ:</strong> ರಫೇಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒತ್ತಾಯಪಡಿಸಿದ್ದಾರೆ.</p>.<p>ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳು ಕಳುವಾಗಿದೆ ಎಂದು ಕೇಂದ್ರಸರ್ಕಾರ ಸುಪ್ರೀಂಕೋರ್ಟ್ಗೆ ಹೇಳಿಕೆ ನೀಡಿದ ಬಳಿಕ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರಾಹುಲ್, ಕೇಂದ್ರ ಸರ್ಕಾರ ಮತ್ತು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.</p>.<p>ಭ್ರಷ್ಟಾಚಾರ ಮತ್ತು ಬಂಡವಾಳಶಾಹಿ ಮತ್ತು ರಾಜಕಾರಣಿಗಳ ಅಪವಿತ್ರ ಮೈತ್ರಿ ಕುರಿತು ಮಾತನಾಡಿದ ರಾಹುಲ್, ನಾನು ಈ ವಿಚಾರದಲ್ಲಿಯಾರನ್ನು ದೂರುತ್ತಿಲ್ಲ. ಸರ್ಕಾರದದಾಖಲೆಗಳೇಅವರ ಬಗ್ಗೆ ಹೇಳುತ್ತಿವೆ. ಸರ್ಕಾರದ ದಾಖಲೆಗಳೇ ಮೋದಿ ಹಾಗೂ ಅವರ ಕಚೇರಿ ಇದರಲ್ಲಿ ಭಾಗಿಯಾಗಿರುವುದನ್ನುಉಲ್ಲೇಖಿಸಿದೆಎಂದರು.</p>.<p><strong><span style="color:#FF0000;">ಇದನ್ನೂ ಓದಿ</span>: <a href="https://www.prajavani.net/stories/national/secret-rafale-files-stolen-619382.html" target="_blank">ರಫೇಲ್ ರಹಸ್ಯ ದಾಖಲೆ ಕಳವು: ಸುಪ್ರೀಂಕೋರ್ಟ್ಗೆ ಕೇಂದ್ರ ಮಾಹಿತಿ</a></strong></p>.<p>ಮೋದಿ ಅವರು ಈ ವಿಚಾರದಲ್ಲಿ ಅನಿಲ್ ಅಂಬಾನಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಬೈಪಾಸ್ ಸರ್ಜರಿ ನಡೆಸಿದ್ದಾರೆ.ಮೋದಿ ರಫೇಲ್ ಖರೀದಿ ವಿಚಾರದಲ್ಲಿ ವಿಳಂಬ ಮಾಡಿದರು. ಇದರ ಲಾಭ ಅಂಬಾನಿಪಾಲಾಯಿತು.ಅನಿಲ್ ಅಂಬಾನಿ ಅವರಿಗೆ ಮೋದಿ30ಸಾವಿರ ಕೋಟಿ ಹಣ ನೀಡಿದರು ಎಂದು ದೂರಿದರು.</p>.<p>ಚೌಕೀದಾರರನನ್ನು ರಕ್ಷಣೆ ಮಾಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ತಮ್ಮನ್ನು ತಾವು ತನಿಖೆಗೆ ಒಳಪಡಿಸಿಕೊಳ್ಳಲು ಪ್ರಧಾನ ಮಂತ್ರಿಯವರು ಹೆದರುತ್ತಿದ್ದಾರೆ. ಮೋದಿ ಇದರಲ್ಲಿತಪ್ಪಿತಸ್ಥರಲ್ಲ ಎಂದರೆ, ಪ್ರಕರಣವನ್ನು ಯಾಕೆ ತನಿಖೆಗೆ ಆದೇಶಿಸುತ್ತಿಲ್ಲ. </p>.<p>ಇದರಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ತನಿಖೆಗೆ ಒಳಪಡಿಸಬೇಕು. ಆದರೆ ಮೋದಿ ಅವರ ಹೆಸರು ಬಂದ ಕೂಡಲೇತನಿಖೆ ನಡೆಯುವುದಿಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ.</p>.<p>‘ನಾನು ಯಾವುದಕ್ಕೂ ಭಯಪಡುವುದಿಲ್ಲ. ಸ್ವಯಂ ತನಿಖೆಗೆ ಒಳಪಡುತ್ತೇನೆ. ನಾನು ರಾಷ್ಟ್ರದ ಚೌಕೀದಾರ. ನನ್ನನ್ನು ತನಿಖೆಗೆ ಒಳಪಡಿಸಿಎಂದು ಮೋದಿ ಯಾಕೆ ಹೇಳುತ್ತಿಲ್ಲ’ ಎಂದು ರಾಹುಲ್ ಕಿಡಿಕಾರಿದ್ದಾರೆ</p>.<p>‘ಎಲ್ಲವೂ ಕಣ್ಮರೆ’ಯಾಗಿದೆ (Gayab ho gaya) ಇದು ಕೇಂದ್ರ ಸರ್ಕಾರದ ಟ್ಯಾಗ್ಲೈನ್ ಆಗಿದೆ. 2 ಕೋಟಿ ಉದ್ಯೋಗಾವಕಾಶ, ರೈತರಿಗೆ ಬೆಳೆ ಪರಿಹಾರ, ಬ್ಯಾಂಕ್ಗಳಲ್ಲಿ 15 ಲಕ್ಷ ಹಣ ಜಮಾ ಹೀಗೆ ಕೊಟ್ಟ ಎಲ್ಲಾ ಭರವಸೆಗಳು ಕಾಣುತ್ತಿಲ್ಲ. ಇದನ್ನು ರಫೇಲ್ ಹಗರಣದಲ್ಲಿ ಸಾಧ್ಯವಾಗಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.</p>.<p><strong><span style="color:#FF0000;">ಇದನ್ನೂ ಓದಿ</span>: <a href="https://www.prajavani.net/stories/national/rafale-deal-supreme-court-594586.html" target="_blank">ರಫೇಲ್ ಡೀಲ್ ಮೋದಿ ನಿರಾಳ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ರಫೇಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒತ್ತಾಯಪಡಿಸಿದ್ದಾರೆ.</p>.<p>ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳು ಕಳುವಾಗಿದೆ ಎಂದು ಕೇಂದ್ರಸರ್ಕಾರ ಸುಪ್ರೀಂಕೋರ್ಟ್ಗೆ ಹೇಳಿಕೆ ನೀಡಿದ ಬಳಿಕ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರಾಹುಲ್, ಕೇಂದ್ರ ಸರ್ಕಾರ ಮತ್ತು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.</p>.<p>ಭ್ರಷ್ಟಾಚಾರ ಮತ್ತು ಬಂಡವಾಳಶಾಹಿ ಮತ್ತು ರಾಜಕಾರಣಿಗಳ ಅಪವಿತ್ರ ಮೈತ್ರಿ ಕುರಿತು ಮಾತನಾಡಿದ ರಾಹುಲ್, ನಾನು ಈ ವಿಚಾರದಲ್ಲಿಯಾರನ್ನು ದೂರುತ್ತಿಲ್ಲ. ಸರ್ಕಾರದದಾಖಲೆಗಳೇಅವರ ಬಗ್ಗೆ ಹೇಳುತ್ತಿವೆ. ಸರ್ಕಾರದ ದಾಖಲೆಗಳೇ ಮೋದಿ ಹಾಗೂ ಅವರ ಕಚೇರಿ ಇದರಲ್ಲಿ ಭಾಗಿಯಾಗಿರುವುದನ್ನುಉಲ್ಲೇಖಿಸಿದೆಎಂದರು.</p>.<p><strong><span style="color:#FF0000;">ಇದನ್ನೂ ಓದಿ</span>: <a href="https://www.prajavani.net/stories/national/secret-rafale-files-stolen-619382.html" target="_blank">ರಫೇಲ್ ರಹಸ್ಯ ದಾಖಲೆ ಕಳವು: ಸುಪ್ರೀಂಕೋರ್ಟ್ಗೆ ಕೇಂದ್ರ ಮಾಹಿತಿ</a></strong></p>.<p>ಮೋದಿ ಅವರು ಈ ವಿಚಾರದಲ್ಲಿ ಅನಿಲ್ ಅಂಬಾನಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಬೈಪಾಸ್ ಸರ್ಜರಿ ನಡೆಸಿದ್ದಾರೆ.ಮೋದಿ ರಫೇಲ್ ಖರೀದಿ ವಿಚಾರದಲ್ಲಿ ವಿಳಂಬ ಮಾಡಿದರು. ಇದರ ಲಾಭ ಅಂಬಾನಿಪಾಲಾಯಿತು.ಅನಿಲ್ ಅಂಬಾನಿ ಅವರಿಗೆ ಮೋದಿ30ಸಾವಿರ ಕೋಟಿ ಹಣ ನೀಡಿದರು ಎಂದು ದೂರಿದರು.</p>.<p>ಚೌಕೀದಾರರನನ್ನು ರಕ್ಷಣೆ ಮಾಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ತಮ್ಮನ್ನು ತಾವು ತನಿಖೆಗೆ ಒಳಪಡಿಸಿಕೊಳ್ಳಲು ಪ್ರಧಾನ ಮಂತ್ರಿಯವರು ಹೆದರುತ್ತಿದ್ದಾರೆ. ಮೋದಿ ಇದರಲ್ಲಿತಪ್ಪಿತಸ್ಥರಲ್ಲ ಎಂದರೆ, ಪ್ರಕರಣವನ್ನು ಯಾಕೆ ತನಿಖೆಗೆ ಆದೇಶಿಸುತ್ತಿಲ್ಲ. </p>.<p>ಇದರಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ತನಿಖೆಗೆ ಒಳಪಡಿಸಬೇಕು. ಆದರೆ ಮೋದಿ ಅವರ ಹೆಸರು ಬಂದ ಕೂಡಲೇತನಿಖೆ ನಡೆಯುವುದಿಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ.</p>.<p>‘ನಾನು ಯಾವುದಕ್ಕೂ ಭಯಪಡುವುದಿಲ್ಲ. ಸ್ವಯಂ ತನಿಖೆಗೆ ಒಳಪಡುತ್ತೇನೆ. ನಾನು ರಾಷ್ಟ್ರದ ಚೌಕೀದಾರ. ನನ್ನನ್ನು ತನಿಖೆಗೆ ಒಳಪಡಿಸಿಎಂದು ಮೋದಿ ಯಾಕೆ ಹೇಳುತ್ತಿಲ್ಲ’ ಎಂದು ರಾಹುಲ್ ಕಿಡಿಕಾರಿದ್ದಾರೆ</p>.<p>‘ಎಲ್ಲವೂ ಕಣ್ಮರೆ’ಯಾಗಿದೆ (Gayab ho gaya) ಇದು ಕೇಂದ್ರ ಸರ್ಕಾರದ ಟ್ಯಾಗ್ಲೈನ್ ಆಗಿದೆ. 2 ಕೋಟಿ ಉದ್ಯೋಗಾವಕಾಶ, ರೈತರಿಗೆ ಬೆಳೆ ಪರಿಹಾರ, ಬ್ಯಾಂಕ್ಗಳಲ್ಲಿ 15 ಲಕ್ಷ ಹಣ ಜಮಾ ಹೀಗೆ ಕೊಟ್ಟ ಎಲ್ಲಾ ಭರವಸೆಗಳು ಕಾಣುತ್ತಿಲ್ಲ. ಇದನ್ನು ರಫೇಲ್ ಹಗರಣದಲ್ಲಿ ಸಾಧ್ಯವಾಗಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.</p>.<p><strong><span style="color:#FF0000;">ಇದನ್ನೂ ಓದಿ</span>: <a href="https://www.prajavani.net/stories/national/rafale-deal-supreme-court-594586.html" target="_blank">ರಫೇಲ್ ಡೀಲ್ ಮೋದಿ ನಿರಾಳ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>