<p><strong>ನವದೆಹಲಿ (ಪಿಟಿಐ):</strong> ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರುಮುಖ್ಯಪೇದೆ ಕೊಲೆ ಹಾಗೂ ಸ್ಥಳೀಯ ವ್ಯಕ್ತಿಯೊಬ್ಬರ ಕೊಲೆ ಪ್ರಕರಣ ಸಂಬಂಧ 11ಮಂದಿಯನ್ನು ಬಂಧಿಸಿದ್ದಾರೆ.</p>.<p>ಫೆಬ್ರವರಿ 24ರಂದುಗೋಕುಲ್ ಪುರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದ ವೇಳೆಯೇ ಮುಖ್ಯಪೇದೆ ರತನ್ ಲಾಲ್ ಎಂಬುವರನ್ನುಅಪರಿಚಿತರು ಗುಂಡಿಟ್ಟು ಕೊಲೆ ಮಾಡಿದ್ದರು.</p>.<p>ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ತನಿಖೆ ನಡೆಸಿದ ದೆಹಲಿಪೊಲೀಸರು ಹಲವು ಸಾಕ್ಷಿಗಳನ್ನು ಏಳು ಮಂದಿಆರೋಪಿಗಳನ್ನು ಬಂಧಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆದದಿನವೇ ಆರೋಪಿಗಳು ಸಂಚು ರೂಪಿಸಿ ಮುಖ್ಯಪೇದೆ ರತನ್ ಲಾಲ್ ರನ್ನು ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.</p>.<p><strong>ನಾಲ್ವರಬಂಧನ</strong></p>.<p>ದೆಹಲಿ ಹಿಂಸಾಚಾರದ ವೇಳೆ ಕೊಲೆಯಾಗಿದ್ದ ಅಕ್ಬರಿ ಬೇಗಮ್ ಪ್ರಕರಣಕ್ಕೆ ಸಂಬಂಧ ಪೊಲೀಸರು 4 ಮಂದಿಯನ್ನು ಬಂಧಿಸಿದ್ದಾರೆ.</p>.<p>ಹಿಂಸಾಚಾರದ ವೇಳೆ ಅಕ್ಬರಿ ಬೇಗಂ ಅವರ ಶವ ದೆಹಲಿಯ ಚರಂಡಿಯಲ್ಲಿ ದೊರೆತಿತ್ತು. ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಹಲವರು ಸಾವನ್ನಪ್ಪಿದ್ದರು.</p>.<p>ನಾಲ್ಕು ಮಂದಿಯ ಶವಗಳು ಚರಂಡಿಯಲ್ಲಿ ದೊರೆತಿದ್ದವು. ಅವುಗಳಲ್ಲಿ ಅಕ್ಬರಿ ಬೇಗಂ ಶವ ಕೂಡ ಒಂದು. ಅಕ್ಬರಿ ಅವರನ್ನು ಕೊಲೆ ಮಾಡಿದ ಆರೋಪಿಗಳು ಶವವನ್ನು ಚರಂಡಿಯಲ್ಲಿ ಹೂತುಹಾಕಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/79-houses-327-shops-gutted-in-arson-during-delhi-violence-sisodia-709812.html" target="_blank">ದೆಹಲಿ ಹಿಂಸಾಚಾರ | 79 ಮನೆ, 327 ಗುಡಿಸಲು ನಾಶ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರುಮುಖ್ಯಪೇದೆ ಕೊಲೆ ಹಾಗೂ ಸ್ಥಳೀಯ ವ್ಯಕ್ತಿಯೊಬ್ಬರ ಕೊಲೆ ಪ್ರಕರಣ ಸಂಬಂಧ 11ಮಂದಿಯನ್ನು ಬಂಧಿಸಿದ್ದಾರೆ.</p>.<p>ಫೆಬ್ರವರಿ 24ರಂದುಗೋಕುಲ್ ಪುರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದ ವೇಳೆಯೇ ಮುಖ್ಯಪೇದೆ ರತನ್ ಲಾಲ್ ಎಂಬುವರನ್ನುಅಪರಿಚಿತರು ಗುಂಡಿಟ್ಟು ಕೊಲೆ ಮಾಡಿದ್ದರು.</p>.<p>ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ತನಿಖೆ ನಡೆಸಿದ ದೆಹಲಿಪೊಲೀಸರು ಹಲವು ಸಾಕ್ಷಿಗಳನ್ನು ಏಳು ಮಂದಿಆರೋಪಿಗಳನ್ನು ಬಂಧಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆದದಿನವೇ ಆರೋಪಿಗಳು ಸಂಚು ರೂಪಿಸಿ ಮುಖ್ಯಪೇದೆ ರತನ್ ಲಾಲ್ ರನ್ನು ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.</p>.<p><strong>ನಾಲ್ವರಬಂಧನ</strong></p>.<p>ದೆಹಲಿ ಹಿಂಸಾಚಾರದ ವೇಳೆ ಕೊಲೆಯಾಗಿದ್ದ ಅಕ್ಬರಿ ಬೇಗಮ್ ಪ್ರಕರಣಕ್ಕೆ ಸಂಬಂಧ ಪೊಲೀಸರು 4 ಮಂದಿಯನ್ನು ಬಂಧಿಸಿದ್ದಾರೆ.</p>.<p>ಹಿಂಸಾಚಾರದ ವೇಳೆ ಅಕ್ಬರಿ ಬೇಗಂ ಅವರ ಶವ ದೆಹಲಿಯ ಚರಂಡಿಯಲ್ಲಿ ದೊರೆತಿತ್ತು. ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಹಲವರು ಸಾವನ್ನಪ್ಪಿದ್ದರು.</p>.<p>ನಾಲ್ಕು ಮಂದಿಯ ಶವಗಳು ಚರಂಡಿಯಲ್ಲಿ ದೊರೆತಿದ್ದವು. ಅವುಗಳಲ್ಲಿ ಅಕ್ಬರಿ ಬೇಗಂ ಶವ ಕೂಡ ಒಂದು. ಅಕ್ಬರಿ ಅವರನ್ನು ಕೊಲೆ ಮಾಡಿದ ಆರೋಪಿಗಳು ಶವವನ್ನು ಚರಂಡಿಯಲ್ಲಿ ಹೂತುಹಾಕಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/79-houses-327-shops-gutted-in-arson-during-delhi-violence-sisodia-709812.html" target="_blank">ದೆಹಲಿ ಹಿಂಸಾಚಾರ | 79 ಮನೆ, 327 ಗುಡಿಸಲು ನಾಶ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>