ನವದೆಹಲಿ (ಪಿಟಿಐ): ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರುಮುಖ್ಯಪೇದೆ ಕೊಲೆ ಹಾಗೂ ಸ್ಥಳೀಯ ವ್ಯಕ್ತಿಯೊಬ್ಬರ ಕೊಲೆ ಪ್ರಕರಣ ಸಂಬಂಧ 11ಮಂದಿಯನ್ನು ಬಂಧಿಸಿದ್ದಾರೆ.
ಫೆಬ್ರವರಿ 24ರಂದುಗೋಕುಲ್ ಪುರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದ ವೇಳೆಯೇ ಮುಖ್ಯಪೇದೆ ರತನ್ ಲಾಲ್ ಎಂಬುವರನ್ನುಅಪರಿಚಿತರು ಗುಂಡಿಟ್ಟು ಕೊಲೆ ಮಾಡಿದ್ದರು.
ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ತನಿಖೆ ನಡೆಸಿದ ದೆಹಲಿಪೊಲೀಸರು ಹಲವು ಸಾಕ್ಷಿಗಳನ್ನು ಏಳು ಮಂದಿಆರೋಪಿಗಳನ್ನು ಬಂಧಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆದದಿನವೇ ಆರೋಪಿಗಳು ಸಂಚು ರೂಪಿಸಿ ಮುಖ್ಯಪೇದೆ ರತನ್ ಲಾಲ್ ರನ್ನು ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಾಲ್ವರಬಂಧನ
ದೆಹಲಿ ಹಿಂಸಾಚಾರದ ವೇಳೆ ಕೊಲೆಯಾಗಿದ್ದ ಅಕ್ಬರಿ ಬೇಗಮ್ ಪ್ರಕರಣಕ್ಕೆ ಸಂಬಂಧ ಪೊಲೀಸರು 4 ಮಂದಿಯನ್ನು ಬಂಧಿಸಿದ್ದಾರೆ.
ಹಿಂಸಾಚಾರದ ವೇಳೆ ಅಕ್ಬರಿ ಬೇಗಂ ಅವರ ಶವ ದೆಹಲಿಯ ಚರಂಡಿಯಲ್ಲಿ ದೊರೆತಿತ್ತು. ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಹಲವರು ಸಾವನ್ನಪ್ಪಿದ್ದರು.
ನಾಲ್ಕು ಮಂದಿಯ ಶವಗಳು ಚರಂಡಿಯಲ್ಲಿ ದೊರೆತಿದ್ದವು. ಅವುಗಳಲ್ಲಿ ಅಕ್ಬರಿ ಬೇಗಂ ಶವ ಕೂಡ ಒಂದು. ಅಕ್ಬರಿ ಅವರನ್ನು ಕೊಲೆ ಮಾಡಿದ ಆರೋಪಿಗಳು ಶವವನ್ನು ಚರಂಡಿಯಲ್ಲಿ ಹೂತುಹಾಕಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
Delhi Police: 2 people arrested in Akbari Begum murder case; 4 people arrested in connection with bodies of 4 people recovered from a drain in North East Delhi. #DelhiViolencehttps://t.co/mKQwmy9xxN