<p><strong>ನವದೆಹಲಿ: </strong>‘ಚೀನಾ ಮತ್ತು ಪಾಕಿಸ್ತಾನ ಸಂಚು ರೂಪಿಸಿ ಒಮ್ಮೆಲೆ ಭಾರತದ ಮೇಲೆ ದಾಳಿ ಮಾಡಿದರೆಭಾರತ ಏಕಕಾಲಕ್ಕೆ ಎರಡು ಯುದ್ಧಗಳನ್ನು ಎದುರಿಸಬೇಕಾಗಬಹುದು. ಇಂಥ ಪರಿಸ್ಥಿತಿ ನಿರ್ವಹಿಸಲು ನಮ್ಮ ಸೇನೆ ಸಿದ್ಧವಿದೆಯೇ?’ ಎಂಬ ಪ್ರಶ್ನೆ ಮತ್ತು ಆತಂಕಹಲವು ವರ್ಷಗಳಿಂದ ಪ್ರಸ್ತಾಪವಾಗುತ್ತಿತ್ತು.</p>.<p>ಭಾರತೀಯ ಸೇನೆ ಇದೀಗ ಈ ಅಂಶವನ್ನುಗಂಭೀರವಾಗಿ ಪರಿಗಣಿಸಿದೆ. ಇಷ್ಟು ದಿನ ಪಶ್ಚಿಮ ಗಡಿಯತ್ತ (ಪಾಕಿಸ್ತಾನ) ಹೆಚ್ಚು ಗಮನ ಕೊಡುತ್ತಿದ್ದ ಸೇನೆ, ಇದೀಗ ಉತ್ತರ ಮತ್ತು ಪೂರ್ವ (ಚೀನಾ) ಗಡಿಗಳನ್ನು ಬಲಪಡಿಸುವ ಕಾರ್ಯ ಆರಂಭಿಸಿದೆ.</p>.<p>ಭೂಸೇನೆಯ ನೂತನ ಮುಖ್ಯಸ್ಥಮನೋಜ್ ಮುಕುಂದ್ ನರವಾಣೆ ‘ರಿಬ್ಯಾಲೆನ್ಸಿಂಗ್’ (ಮರುಸಮತೋಲನ) ಪ್ರಕ್ರಿಯೆಗೆ ಆದ್ಯತೆ ನೀಡಿದ್ದು, ಅತ್ಯಾಧುನಿಕ ಯುದ್ಧೋಪಕರಣಗಳ ನಿಯೋಜನೆ, ಗಡಿಯವರೆಗೆ ರಸ್ತೆ ಸಂಪರ್ಕ ಸೇರಿದಂತೆ ಹಲವು ಕ್ರಮಗಳು ಆರಂಭಗೊಂಡಿರುವುದನ್ನು ಖಚಿತಪಡಿಸಿದ್ದಾರೆ.</p>.<p>ಸೇನಾ ದಿನದ ಹಿನ್ನೆಲೆಯಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದಅವರು,‘ಸಿಯಾಚಿನ್ ನೀರ್ಗಲ್ಲು ಪ್ರದೇಶ ಮತ್ತು ಶಕ್ಸಗಮ್ ಕಣಿವೆಯಲ್ಲಿ ಭದ್ರತೆಯ ಆತಂಕವನ್ನು ಗುರುತಿಸಿದ್ದೇವೆ. ಅಲ್ಲಿ ರಕ್ಷಣಾ ವ್ಯವಸ್ಥೆ ಸುಧಾರಿಸಲು ಗಮನ ನೀಡಿದ್ದೇವೆ’ ಎಂದುಸ್ಪಷ್ಟಪಡಿಸಿದರು.</p>.<figcaption><em><strong>ಜನರಲ್ ಮನೋಮ್ ಮುಕುಂದ್ ನರವಾಣೆ</strong></em></figcaption>.<p><strong>ಎರಡು ಯುದ್ಧಭೂಮಿ, ಎರಡು ತಂತ್ರ</strong></p>.<p>‘ಒಂದು ವೇಳೆ ಎರಡು ದೇಶಗಳು ಒಂದೇ ಸಲ ಯುದ್ಧ ಘೋಷಿಸಿದರೆ, ಪ್ರಾಥಮಿಕ ಮತ್ತು ದ್ವಿತೀಯ ಯುದ್ಧಕಣಗಳನ್ನು ಗುರುತಿಸಿಕೊಳ್ಳುತ್ತೇವೆ. ಪ್ರಾಥಮಿಕ ಯುದ್ಧಭೂಮಿಗೆಹೆಚ್ಚಿನ ಸಂಪನ್ಮೂಲ ನಿಯೋಜಿಸಿ, ದ್ವೀತೀಯ ಯುದ್ಧಕಣದಲ್ಲಿ ರಕ್ಷಣೆಗೆ ಒತ್ತು ನೀಡುತ್ತೇವೆ’ ಎಂದರು.</p>.<p>ಚೀನಾ ಗಡಿಯಲ್ಲಿ ಯಾವುದೇ ಸವಾಲು ಎದುರಿಸಲುಸೇನೆಯನ್ನು ಸಜ್ಜುಗೊಳಿಸಲಾಗಿದೆ.ಅತ್ಯಾಧುನಿಕ ಆಯುಧಗಳ ಶೇಖರಣೆ, ಮೂಲ ಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವು ಕ್ರಮಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.</p>.<p>ಚೀನಾ ಮತ್ತು ಭಾರತೀಯ ಸೇನೆಗಳ ನಡುವೆ ಬಹುಕಾಲದಿಂದ ಬಾಕಿ ಉಳಿದಿರುವ ಹಾಟ್ಲೈನ್ ಸಂಪರ್ಕ ವ್ಯವಸ್ಥೆಯನ್ನು ಮರುಸ್ಥಾಪಿಸಲಾಗುವುದು. ಈ ಬಗ್ಗೆ ಇದ್ದ ಹಲವು ಗೊಂದಲಗಳು ಇದೀಗ ಬಗೆಹರಿದಿವೆ. ದೇಶದ ಉತ್ತರ ಗಡಿಯಲ್ಲಿ ರಸ್ತೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಗಮನ ನೀಡಲಾಗಿದೆ. ಸೇನೆಯ ಸಾಮರ್ಥ್ಯವೃದ್ಧಿ ಪ್ರಯತ್ನಗಳು ಆರಂಭವಾಗಿವೆ. ಪೂರ್ವ ಗಡಿಯಲ್ಲಿ ಶಸ್ತ್ರಾಸ್ತ್ರ ಸಂಗ್ರಹ, ಅತ್ಯಾಧುನಿಕ ಯುದ್ಧೋಪಕರಣಗಳ ನಿಯೋಜನೆ ಕ್ರಮಗಳು ಆರಂಭವಾಗಿವೆ ಎಂದು ಹೇಳಿದರು.</p>.<p><strong>ಸಿಯಾಚಿನ್ ಮುಖ್ಯ</strong></p>.<p>ಸಿಯಾಚಿನ್ ನೀರ್ಗಲ್ಲು ಪ್ರದೇಶದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಸಿಯಾಚಿನ್ ಪ್ರದೇಶದಲ್ಲಿ ಚೀನಾ ಮತ್ತು ಪಾಕಿಸ್ತಾನಗಳು ಒಗ್ಗೂಡಿ ಭಾರತದತ್ತ ಸಂಚು ರೂಪಿಸುವ ಸಾಧ್ಯತೆಯನ್ನು ತಳ್ಳಿಹಾಕಲು ಆಗದು. ಹೀಗಾಗಿ ಸಿಯಾಚಿನ್ ವಿಚಾರದಲ್ಲಿ ನಮ್ಮ ಆದ್ಯತೆ ಎಂದಿನಂತೆ ಮುಂದುವರಿಯುತ್ತದೆ’ ಎಂದು ಹೇಳಿದರು.</p>.<p>‘ಇಂಥ ಬೆಳವಣಿಗೆಗಳು ಎಲ್ಲಿ ಬೇಕಾದರೂ ನಡೆಯಬಹುದು. ಆದರೆ ಸಿಯಾಚಿನ್ ಮತ್ತು ಶಕ್ಸಗಮ್ ಕಣಿವೆಯಲ್ಲಿ ಎರಡೂ ದೇಶಗಳ ಗಡಿಗಳು ಸೇರುತ್ತವೆ. ಹೀಗಾಗಿ ಭದ್ರತೆಯ ಆತಂಕ ಅಲ್ಲಿ ಹೆಚ್ಚು’ ಎಂದು ನರವಾಣೆ ಅಭಿಪ್ರಾಯಪಟ್ಟರು.</p>.<p>ಭಾರತದ ಗಡಿ ಎಂದು ಗುರುತಿಸಿದ ಪ್ರದೇಶದಲ್ಲಿಚೀನಾ ಸೈನಿಕರು ಕಾಣಿಸಿಕೊಳ್ಳುವ ಕುರಿತು ಪ್ರತಿಕ್ರಿಯಿಸಿದ ನರವಾಣೆ, ’ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ರೂಪಿಸಿರುವ ಮಾರ್ಗದರ್ಶಿ ಸೂತ್ರಗಳ ಆಧಾರದ ಮೇಲೆ ಈ ಸಮಸ್ಯೆ ಪರಿಹರಿಸಿಕೊಳ್ಳಲಾಗುವುದು’ ಎಂದರು.</p>.<p><em><strong>ಇದನ್ನೂ ಓದಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>‘ಚೀನಾ ಮತ್ತು ಪಾಕಿಸ್ತಾನ ಸಂಚು ರೂಪಿಸಿ ಒಮ್ಮೆಲೆ ಭಾರತದ ಮೇಲೆ ದಾಳಿ ಮಾಡಿದರೆಭಾರತ ಏಕಕಾಲಕ್ಕೆ ಎರಡು ಯುದ್ಧಗಳನ್ನು ಎದುರಿಸಬೇಕಾಗಬಹುದು. ಇಂಥ ಪರಿಸ್ಥಿತಿ ನಿರ್ವಹಿಸಲು ನಮ್ಮ ಸೇನೆ ಸಿದ್ಧವಿದೆಯೇ?’ ಎಂಬ ಪ್ರಶ್ನೆ ಮತ್ತು ಆತಂಕಹಲವು ವರ್ಷಗಳಿಂದ ಪ್ರಸ್ತಾಪವಾಗುತ್ತಿತ್ತು.</p>.<p>ಭಾರತೀಯ ಸೇನೆ ಇದೀಗ ಈ ಅಂಶವನ್ನುಗಂಭೀರವಾಗಿ ಪರಿಗಣಿಸಿದೆ. ಇಷ್ಟು ದಿನ ಪಶ್ಚಿಮ ಗಡಿಯತ್ತ (ಪಾಕಿಸ್ತಾನ) ಹೆಚ್ಚು ಗಮನ ಕೊಡುತ್ತಿದ್ದ ಸೇನೆ, ಇದೀಗ ಉತ್ತರ ಮತ್ತು ಪೂರ್ವ (ಚೀನಾ) ಗಡಿಗಳನ್ನು ಬಲಪಡಿಸುವ ಕಾರ್ಯ ಆರಂಭಿಸಿದೆ.</p>.<p>ಭೂಸೇನೆಯ ನೂತನ ಮುಖ್ಯಸ್ಥಮನೋಜ್ ಮುಕುಂದ್ ನರವಾಣೆ ‘ರಿಬ್ಯಾಲೆನ್ಸಿಂಗ್’ (ಮರುಸಮತೋಲನ) ಪ್ರಕ್ರಿಯೆಗೆ ಆದ್ಯತೆ ನೀಡಿದ್ದು, ಅತ್ಯಾಧುನಿಕ ಯುದ್ಧೋಪಕರಣಗಳ ನಿಯೋಜನೆ, ಗಡಿಯವರೆಗೆ ರಸ್ತೆ ಸಂಪರ್ಕ ಸೇರಿದಂತೆ ಹಲವು ಕ್ರಮಗಳು ಆರಂಭಗೊಂಡಿರುವುದನ್ನು ಖಚಿತಪಡಿಸಿದ್ದಾರೆ.</p>.<p>ಸೇನಾ ದಿನದ ಹಿನ್ನೆಲೆಯಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದಅವರು,‘ಸಿಯಾಚಿನ್ ನೀರ್ಗಲ್ಲು ಪ್ರದೇಶ ಮತ್ತು ಶಕ್ಸಗಮ್ ಕಣಿವೆಯಲ್ಲಿ ಭದ್ರತೆಯ ಆತಂಕವನ್ನು ಗುರುತಿಸಿದ್ದೇವೆ. ಅಲ್ಲಿ ರಕ್ಷಣಾ ವ್ಯವಸ್ಥೆ ಸುಧಾರಿಸಲು ಗಮನ ನೀಡಿದ್ದೇವೆ’ ಎಂದುಸ್ಪಷ್ಟಪಡಿಸಿದರು.</p>.<figcaption><em><strong>ಜನರಲ್ ಮನೋಮ್ ಮುಕುಂದ್ ನರವಾಣೆ</strong></em></figcaption>.<p><strong>ಎರಡು ಯುದ್ಧಭೂಮಿ, ಎರಡು ತಂತ್ರ</strong></p>.<p>‘ಒಂದು ವೇಳೆ ಎರಡು ದೇಶಗಳು ಒಂದೇ ಸಲ ಯುದ್ಧ ಘೋಷಿಸಿದರೆ, ಪ್ರಾಥಮಿಕ ಮತ್ತು ದ್ವಿತೀಯ ಯುದ್ಧಕಣಗಳನ್ನು ಗುರುತಿಸಿಕೊಳ್ಳುತ್ತೇವೆ. ಪ್ರಾಥಮಿಕ ಯುದ್ಧಭೂಮಿಗೆಹೆಚ್ಚಿನ ಸಂಪನ್ಮೂಲ ನಿಯೋಜಿಸಿ, ದ್ವೀತೀಯ ಯುದ್ಧಕಣದಲ್ಲಿ ರಕ್ಷಣೆಗೆ ಒತ್ತು ನೀಡುತ್ತೇವೆ’ ಎಂದರು.</p>.<p>ಚೀನಾ ಗಡಿಯಲ್ಲಿ ಯಾವುದೇ ಸವಾಲು ಎದುರಿಸಲುಸೇನೆಯನ್ನು ಸಜ್ಜುಗೊಳಿಸಲಾಗಿದೆ.ಅತ್ಯಾಧುನಿಕ ಆಯುಧಗಳ ಶೇಖರಣೆ, ಮೂಲ ಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವು ಕ್ರಮಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.</p>.<p>ಚೀನಾ ಮತ್ತು ಭಾರತೀಯ ಸೇನೆಗಳ ನಡುವೆ ಬಹುಕಾಲದಿಂದ ಬಾಕಿ ಉಳಿದಿರುವ ಹಾಟ್ಲೈನ್ ಸಂಪರ್ಕ ವ್ಯವಸ್ಥೆಯನ್ನು ಮರುಸ್ಥಾಪಿಸಲಾಗುವುದು. ಈ ಬಗ್ಗೆ ಇದ್ದ ಹಲವು ಗೊಂದಲಗಳು ಇದೀಗ ಬಗೆಹರಿದಿವೆ. ದೇಶದ ಉತ್ತರ ಗಡಿಯಲ್ಲಿ ರಸ್ತೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಗಮನ ನೀಡಲಾಗಿದೆ. ಸೇನೆಯ ಸಾಮರ್ಥ್ಯವೃದ್ಧಿ ಪ್ರಯತ್ನಗಳು ಆರಂಭವಾಗಿವೆ. ಪೂರ್ವ ಗಡಿಯಲ್ಲಿ ಶಸ್ತ್ರಾಸ್ತ್ರ ಸಂಗ್ರಹ, ಅತ್ಯಾಧುನಿಕ ಯುದ್ಧೋಪಕರಣಗಳ ನಿಯೋಜನೆ ಕ್ರಮಗಳು ಆರಂಭವಾಗಿವೆ ಎಂದು ಹೇಳಿದರು.</p>.<p><strong>ಸಿಯಾಚಿನ್ ಮುಖ್ಯ</strong></p>.<p>ಸಿಯಾಚಿನ್ ನೀರ್ಗಲ್ಲು ಪ್ರದೇಶದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಸಿಯಾಚಿನ್ ಪ್ರದೇಶದಲ್ಲಿ ಚೀನಾ ಮತ್ತು ಪಾಕಿಸ್ತಾನಗಳು ಒಗ್ಗೂಡಿ ಭಾರತದತ್ತ ಸಂಚು ರೂಪಿಸುವ ಸಾಧ್ಯತೆಯನ್ನು ತಳ್ಳಿಹಾಕಲು ಆಗದು. ಹೀಗಾಗಿ ಸಿಯಾಚಿನ್ ವಿಚಾರದಲ್ಲಿ ನಮ್ಮ ಆದ್ಯತೆ ಎಂದಿನಂತೆ ಮುಂದುವರಿಯುತ್ತದೆ’ ಎಂದು ಹೇಳಿದರು.</p>.<p>‘ಇಂಥ ಬೆಳವಣಿಗೆಗಳು ಎಲ್ಲಿ ಬೇಕಾದರೂ ನಡೆಯಬಹುದು. ಆದರೆ ಸಿಯಾಚಿನ್ ಮತ್ತು ಶಕ್ಸಗಮ್ ಕಣಿವೆಯಲ್ಲಿ ಎರಡೂ ದೇಶಗಳ ಗಡಿಗಳು ಸೇರುತ್ತವೆ. ಹೀಗಾಗಿ ಭದ್ರತೆಯ ಆತಂಕ ಅಲ್ಲಿ ಹೆಚ್ಚು’ ಎಂದು ನರವಾಣೆ ಅಭಿಪ್ರಾಯಪಟ್ಟರು.</p>.<p>ಭಾರತದ ಗಡಿ ಎಂದು ಗುರುತಿಸಿದ ಪ್ರದೇಶದಲ್ಲಿಚೀನಾ ಸೈನಿಕರು ಕಾಣಿಸಿಕೊಳ್ಳುವ ಕುರಿತು ಪ್ರತಿಕ್ರಿಯಿಸಿದ ನರವಾಣೆ, ’ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ರೂಪಿಸಿರುವ ಮಾರ್ಗದರ್ಶಿ ಸೂತ್ರಗಳ ಆಧಾರದ ಮೇಲೆ ಈ ಸಮಸ್ಯೆ ಪರಿಹರಿಸಿಕೊಳ್ಳಲಾಗುವುದು’ ಎಂದರು.</p>.<p><em><strong>ಇದನ್ನೂ ಓದಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>