ಅರಣ್ಯ ಪ್ರದೇಶ, ಎತ್ತರದ ಗುಡ್ಡಗಾಡು ಪ್ರದೇಶಗಳಲ್ಲಿ ಹಾಗೂ ಭಯೋತ್ಪಾದಕ ದಾಳಿಗಳಲ್ಲಿ ಗಾಯಗೊಳ್ಳುವಸೈನಿಕರನ್ನುಆಸ್ಪತ್ರೆಗೆ ಸಾಗಿಸಲು ಅಡೆತಡೆಗಳು ಇರುತ್ತವೆ. ಆದರೆ ಈ ಅವಧಿ ಅವರ ಜೀವ ಉಳಿಸುವಲ್ಲಿ ನಿರ್ಣಾಯಕವಾಗಿರುತ್ತದೆ. ಆದ್ದರಿಂದ ‘ಅತ್ಯಮೂಲ್ಯ ಸಮಯ’ದಲ್ಲಿರಕ್ತಸ್ರಾವ ತಡೆಗಟ್ಟುವ, ಗಾಳಿ, ನೀರುತಾಗದಂತೆ ಗಾಯಕ್ಕೆ ಬಿಗಿಯಾಗಿ ಪಟ್ಟಿ ಕಟ್ಟುವ ಮತ್ತು ಗ್ಲಿಸರಿನ್ ಬೆರೆಸಿದ ಸಲೈನ್ (ಲವಣಯುಕ್ತ ದ್ರಾವಣ) ಸೇರಿದಂತೆಔಷಧ ಪರಿಕರಗಳನ್ನು ಸಿದ್ಧಪಡಿಸಲಾಗಿದೆ.