<p><strong>ಮುಂಬೈ:</strong> ದೇಶದ ವಾಣಿಜ್ಯ ರಾಜಧಾನಿ ಖ್ಯಾತಿಯ ಮುಂಬೈ ಪಾಲಿಗೆ ಉಪನಗರ ರೈಲು ಜಾಲ ಜೀವನಾಡಿ ಇದ್ದಂತೆ. ಆದರೆ, ಈ ರೈಲು ಮಾರ್ಗದಲ್ಲಿ ಸಂಭವಿಸುವ ವಿವಿಧ ಅಪಘಾತಗಳಿಗೆ ಪ್ರತಿ ವರ್ಷ 2,500ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ಅಧ್ಯಯನದಿಂದ ತಿಳಿದು ಬಂದಿದೆ.</p>.<p>ರೈಲ್ವೆ ಪೊಲೀಸ್ ಕಮಿಷನರೇಟ್ ಕೈಗೊಂಡಿರುವ ಸಮೀಕ್ಷೆ ಪ್ರಕಾರ, 2019ರಲ್ಲಿ 2,691 ಜನರು ಮೃತಪಟ್ಟು, 3,198 ಜನರು ಗಾಯಗೊಂಡಿದ್ದಾರೆ.</p>.<p>2017ರಲ್ಲಿ 3,014 ಜನ ಮೃತಪಟ್ಟಿದ್ದರೆ, 3,345 ಜನರು ಗಾಯಗೊಂಡಿದ್ದರು. 2018ರಲ್ಲಿ ಮೃತರ ಹಾಗೂ ಗಾಯಗೊಂಡವರ ಪ್ರಮಾಣ ಕ್ರಮವಾಗಿ 2,981 ಹಾಗೂ 3,349 ಎಂದು ಇದೇ ಸಮೀಕ್ಷೆ ಹೇಳುತ್ತದೆ.</p>.<p><strong>ಬಂಡೆ ಉರುಳಿ ಐವರ ದುರ್ಮರಣ</strong><br /><strong>ಶ್ರೀನಗರ:</strong>ಮನೆಯೊಂದರ ಮೇಲೆ ಬೃಹತ್ ಗಾತ್ರದ ಬಂಡೆ ಉರುಳಿ ಬಿದ್ದು ಒಂದೇ ಕುಟುಂಬದ ಐವರು ಮೃತಪಟ್ಟ ಘಟನೆ ಉದಂಪುರ ಜಿಲ್ಲೆಯ ಬರ್ಮೀನ್ ಕೇನ್ ಎಂಬಲ್ಲಿ ನಡೆದಿದೆ.</p>.<p>ತಾಯಿಯೊಂದಿಗೆ ಮಲಗಿದ್ದ ಮೂವರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗುವಿನ ಮೇಲೆ ಬಂಡೆ ಉರುಳಿ ಎಲ್ಲರೂ ಸ್ಥಳದಲ್ಲೇ<br />ಮೃತಪಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ದೇಶದ ವಾಣಿಜ್ಯ ರಾಜಧಾನಿ ಖ್ಯಾತಿಯ ಮುಂಬೈ ಪಾಲಿಗೆ ಉಪನಗರ ರೈಲು ಜಾಲ ಜೀವನಾಡಿ ಇದ್ದಂತೆ. ಆದರೆ, ಈ ರೈಲು ಮಾರ್ಗದಲ್ಲಿ ಸಂಭವಿಸುವ ವಿವಿಧ ಅಪಘಾತಗಳಿಗೆ ಪ್ರತಿ ವರ್ಷ 2,500ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ಅಧ್ಯಯನದಿಂದ ತಿಳಿದು ಬಂದಿದೆ.</p>.<p>ರೈಲ್ವೆ ಪೊಲೀಸ್ ಕಮಿಷನರೇಟ್ ಕೈಗೊಂಡಿರುವ ಸಮೀಕ್ಷೆ ಪ್ರಕಾರ, 2019ರಲ್ಲಿ 2,691 ಜನರು ಮೃತಪಟ್ಟು, 3,198 ಜನರು ಗಾಯಗೊಂಡಿದ್ದಾರೆ.</p>.<p>2017ರಲ್ಲಿ 3,014 ಜನ ಮೃತಪಟ್ಟಿದ್ದರೆ, 3,345 ಜನರು ಗಾಯಗೊಂಡಿದ್ದರು. 2018ರಲ್ಲಿ ಮೃತರ ಹಾಗೂ ಗಾಯಗೊಂಡವರ ಪ್ರಮಾಣ ಕ್ರಮವಾಗಿ 2,981 ಹಾಗೂ 3,349 ಎಂದು ಇದೇ ಸಮೀಕ್ಷೆ ಹೇಳುತ್ತದೆ.</p>.<p><strong>ಬಂಡೆ ಉರುಳಿ ಐವರ ದುರ್ಮರಣ</strong><br /><strong>ಶ್ರೀನಗರ:</strong>ಮನೆಯೊಂದರ ಮೇಲೆ ಬೃಹತ್ ಗಾತ್ರದ ಬಂಡೆ ಉರುಳಿ ಬಿದ್ದು ಒಂದೇ ಕುಟುಂಬದ ಐವರು ಮೃತಪಟ್ಟ ಘಟನೆ ಉದಂಪುರ ಜಿಲ್ಲೆಯ ಬರ್ಮೀನ್ ಕೇನ್ ಎಂಬಲ್ಲಿ ನಡೆದಿದೆ.</p>.<p>ತಾಯಿಯೊಂದಿಗೆ ಮಲಗಿದ್ದ ಮೂವರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗುವಿನ ಮೇಲೆ ಬಂಡೆ ಉರುಳಿ ಎಲ್ಲರೂ ಸ್ಥಳದಲ್ಲೇ<br />ಮೃತಪಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>