<p><strong>ನವದೆಹಲಿ:</strong> ಆರೈಕೆ ಕೇಂದ್ರದಲ್ಲಿದ್ದ ಆನೆಯನ್ನು ತನಗೆ ನೀಡಬೇಕು ಎಂದು ಕೋರಿ ಮಾವುತರೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪರಿಗಣಿಸಿಲ್ಲ.</p>.<p>ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ದೆಹಲಿಯ ಯಮುನಾ ಪುಸ್ತಾ ಪ್ರದೇಶದಿಂದ ಆನೆ ಮತ್ತು ಮಾವುತನನ್ನು ಪೊಲೀಸರು ಬಂಧಿಸಿದ್ದರು. ಬಳಿಕ, ಆನೆಯನ್ನು ಹರಿಯಾಣದ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿತ್ತು.</p>.<p>ಪುನರ್ವಸತಿ ಕೇಂದ್ರದಲ್ಲಿ ಕಾನೂನುಬಾಹಿರವಾಗಿ ಆನೆಯನ್ನು ಬಂಧಿಸಿಡಲಾಗಿದೆ. ಹೀಗಾಗಿ ವಾಪಸ್ ದೆಹಲಿಗೆ ತಂದು ಹಾಜರುಪಡಿಸಲು ಆದೇಶಿಸಬೇಕು ಎಂದು ಕೋರಿ ಸದ್ದಾಂ ಎನ್ನುವ ಮಾವುತ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಈ ಆನೆಗೆ ’ಲಕ್ಷ್ಮಿ’ ಎಂದು ಹೆಸರಿಡಲಾಗಿತ್ತು.</p>.<p>2008ರಿಂದ ತನಗೆ ‘ಲಕ್ಷ್ಮಿ’ ಜತೆ ಆತ್ಮೀಯತೆ ಬೆಳೆದಿದೆ. ತಾನು ‘ಲಕ್ಷ್ಮಿ’ ಜತೆಗಿದ್ದರೆ ಮಾತ್ರ ಅದು ಆಹಾರ ಸೇವಿಸುತ್ತದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿತ್ತು.</p>.<p>‘ಆನೆಯನ್ನು ಮಾವುತನ ವಶಕ್ಕೆ ನೀಡಲು ಕಾನೂನು ಬದ್ಧ ದಾಖಲೆಗಳಿವೆಯೇ’ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬಡೆ ನೇತೃತ್ವದ ಪೀಠವು ಸದ್ದಾಂ ಪರ ವಕೀಲರ ವಿಲ್ಸ್ ಮ್ಯಾಥ್ಯೂ ಅವರನ್ನು ಪ್ರಶ್ನಿಸಿತು.</p>.<p>‘ಆನೆಯು ಹರಿಯಾಣದ ಪುನರ್ವಸತಿ ಕೇಂದ್ರದಲ್ಲಿರುವುದರಿಂದ ಮತ್ತೆ ವಾಪಸ್ ಪಡೆಯಲು ಮಾವುತ ದಾಖಲೆಗಳನ್ನು ಸಲ್ಲಿಸಬೇಕು’ ಎಂದು ಪೀಠವು ಸೂಚಿಸಿತು.ಆಗ ಮಾವುತ ಪರ ವಕೀಲರು ಅರ್ಜಿಯನ್ನು ವಾಪಸ್ ಪಡೆಯುವುದಾಗಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಆರೈಕೆ ಕೇಂದ್ರದಲ್ಲಿದ್ದ ಆನೆಯನ್ನು ತನಗೆ ನೀಡಬೇಕು ಎಂದು ಕೋರಿ ಮಾವುತರೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪರಿಗಣಿಸಿಲ್ಲ.</p>.<p>ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ದೆಹಲಿಯ ಯಮುನಾ ಪುಸ್ತಾ ಪ್ರದೇಶದಿಂದ ಆನೆ ಮತ್ತು ಮಾವುತನನ್ನು ಪೊಲೀಸರು ಬಂಧಿಸಿದ್ದರು. ಬಳಿಕ, ಆನೆಯನ್ನು ಹರಿಯಾಣದ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿತ್ತು.</p>.<p>ಪುನರ್ವಸತಿ ಕೇಂದ್ರದಲ್ಲಿ ಕಾನೂನುಬಾಹಿರವಾಗಿ ಆನೆಯನ್ನು ಬಂಧಿಸಿಡಲಾಗಿದೆ. ಹೀಗಾಗಿ ವಾಪಸ್ ದೆಹಲಿಗೆ ತಂದು ಹಾಜರುಪಡಿಸಲು ಆದೇಶಿಸಬೇಕು ಎಂದು ಕೋರಿ ಸದ್ದಾಂ ಎನ್ನುವ ಮಾವುತ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಈ ಆನೆಗೆ ’ಲಕ್ಷ್ಮಿ’ ಎಂದು ಹೆಸರಿಡಲಾಗಿತ್ತು.</p>.<p>2008ರಿಂದ ತನಗೆ ‘ಲಕ್ಷ್ಮಿ’ ಜತೆ ಆತ್ಮೀಯತೆ ಬೆಳೆದಿದೆ. ತಾನು ‘ಲಕ್ಷ್ಮಿ’ ಜತೆಗಿದ್ದರೆ ಮಾತ್ರ ಅದು ಆಹಾರ ಸೇವಿಸುತ್ತದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿತ್ತು.</p>.<p>‘ಆನೆಯನ್ನು ಮಾವುತನ ವಶಕ್ಕೆ ನೀಡಲು ಕಾನೂನು ಬದ್ಧ ದಾಖಲೆಗಳಿವೆಯೇ’ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬಡೆ ನೇತೃತ್ವದ ಪೀಠವು ಸದ್ದಾಂ ಪರ ವಕೀಲರ ವಿಲ್ಸ್ ಮ್ಯಾಥ್ಯೂ ಅವರನ್ನು ಪ್ರಶ್ನಿಸಿತು.</p>.<p>‘ಆನೆಯು ಹರಿಯಾಣದ ಪುನರ್ವಸತಿ ಕೇಂದ್ರದಲ್ಲಿರುವುದರಿಂದ ಮತ್ತೆ ವಾಪಸ್ ಪಡೆಯಲು ಮಾವುತ ದಾಖಲೆಗಳನ್ನು ಸಲ್ಲಿಸಬೇಕು’ ಎಂದು ಪೀಠವು ಸೂಚಿಸಿತು.ಆಗ ಮಾವುತ ಪರ ವಕೀಲರು ಅರ್ಜಿಯನ್ನು ವಾಪಸ್ ಪಡೆಯುವುದಾಗಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>