<p class="title"><strong>ನವದೆಹಲಿ:</strong> ತಮಿಳುನಾಡಿನ ರಾಯಪುರಂನ ಸರ್ಕಾರಿ ಮಕ್ಕಳ ಸಂರಕ್ಷಣಾ ಗೃಹದ 35 ಮಕ್ಕಳಿಗೆ ಕೋವಿಡ್ ದೃಢಪಟ್ಟಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಉಳಿದ ಮಕ್ಕಳ ಸುರಕ್ಷತೆಗೆ ತೆಗೆದುಕೊಂಡ ಕ್ರಮಗಳು ಸೇರಿದಂತೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಗುರುವಾರ ಸೂಚಿಸಿದೆ.</p>.<p class="bodytext">ಸಾಂಕ್ರಾಮಿಕ ಪಿಡುಗು ವಸತಿಗೃಹಗಳಿಗೆ ಪಸರಿಸದಂತೆ ತಡೆಯಲು ವಿವಿಧ ರಾಜ್ಯ ಸರ್ಕಾರಗಳು ತೆಗೆದುಕೊಂಡ ಕ್ರಮಗಳನ್ನು ವಿವರಿಸುವಂತೆ ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್, ಕೃಷ್ಣ ಮುರಾರು ಹಾಗೂ ಎಸ್. ರವೀಂದ್ರ ಭಟ್ ಅವರನ್ನೊಳಗೊಂಡ ಪೀಠ ಸೂಚಿಸಿತು.</p>.<p class="bodytext">ನಿರಾಶ್ರಿತರ ವಸತಿ ಗೃಹಗಳ ಮಕ್ಕಳ ಸುರಕ್ಷತೆ ಕುರಿತ ಪ್ರಶ್ನಾವಳಿಗಳನ್ನು ಎಲ್ಲ ಹೈಕೋರ್ಟ್ಗಳ ಬಾಲನ್ಯಾಯ ಸಮಿತಿಗಳು ಆಯಾ ರಾಜ್ಯ ಸರ್ಕಾರಗಳಿಗೆ ಕಳುಹಿಸಿ ಪ್ರತಿಕ್ರಿಯೆ ಪಡೆದುಕೊಳ್ಳಲಿವೆ ಎಂದು ಕೋರ್ಟ್ ತಿಳಿಸಿತು.</p>.<p class="bodytext">ಏಪ್ರಿಲ್ 3ರಂದು ಸ್ವಯಂ ಪ್ರೇರಿತರವಾಗಿ ಪ್ರಕರಣ ಕೈಗೆತ್ತಿಕೊಂಡಿದ್ದ ಕೋರ್ಟ್, ದೇಶದಾದ್ಯಂತ ಇರುವ ಬಾಲಾಪರಾಧಿ ಗೃಹ, ವಸತಿಗೃಹಗಳು, ಅನಾಥಾಶ್ರಮದ ಮಕ್ಕಳ ಸುರಕ್ಷತೆ ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತ್ತು.</p>.<p class="bodytext">ಬಾಲಾಪರಾಧಿ ಗೃಹಗಳಲ್ಲಿ ಇರುವ ಮಕ್ಕಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸಾಧ್ಯವೇ ಎಂಬುದನ್ನು ತುರ್ತಾಗಿ ಪರಿಗಣಿಸುವಂತೆ ಬಾಲ ನ್ಯಾಯಮಂಡಳಿಗಳಿಗೆ (ಜೆಜೆಬಿ) ಕೋರ್ಟ್ ಇದೇ ವೇಳೆ ಸೂಚಿಸಿತು.</p>.<p class="bodytext">ಅನಾಥಾಶ್ರಮ ಹಾಗೂ ಬಾಲಾಪರಾಧಿ ಗೃಹಗಳಿಂದ ಮನೆಗೆ ಮರಳಿರುವ ಮಕ್ಕಳ ಜೊತೆ ದೂರವಾಣಿ ಮೂಲಕ ಸಂಪರ್ಕ ಸಾಧಿಸಿ, ಅವರ ಮೇಲೆ ನಿಗಾ ಇರಿಸುವಂತೆ ದೇಶದಾದ್ಯಂತ ಇರುವ ಮಕ್ಕಳ ಕಲ್ಯಾಣ ಸಮಿತಿಗಳಿಗೆ ನಿರ್ದೇಶನ ನೀಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ:</strong> ತಮಿಳುನಾಡಿನ ರಾಯಪುರಂನ ಸರ್ಕಾರಿ ಮಕ್ಕಳ ಸಂರಕ್ಷಣಾ ಗೃಹದ 35 ಮಕ್ಕಳಿಗೆ ಕೋವಿಡ್ ದೃಢಪಟ್ಟಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಉಳಿದ ಮಕ್ಕಳ ಸುರಕ್ಷತೆಗೆ ತೆಗೆದುಕೊಂಡ ಕ್ರಮಗಳು ಸೇರಿದಂತೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಗುರುವಾರ ಸೂಚಿಸಿದೆ.</p>.<p class="bodytext">ಸಾಂಕ್ರಾಮಿಕ ಪಿಡುಗು ವಸತಿಗೃಹಗಳಿಗೆ ಪಸರಿಸದಂತೆ ತಡೆಯಲು ವಿವಿಧ ರಾಜ್ಯ ಸರ್ಕಾರಗಳು ತೆಗೆದುಕೊಂಡ ಕ್ರಮಗಳನ್ನು ವಿವರಿಸುವಂತೆ ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್, ಕೃಷ್ಣ ಮುರಾರು ಹಾಗೂ ಎಸ್. ರವೀಂದ್ರ ಭಟ್ ಅವರನ್ನೊಳಗೊಂಡ ಪೀಠ ಸೂಚಿಸಿತು.</p>.<p class="bodytext">ನಿರಾಶ್ರಿತರ ವಸತಿ ಗೃಹಗಳ ಮಕ್ಕಳ ಸುರಕ್ಷತೆ ಕುರಿತ ಪ್ರಶ್ನಾವಳಿಗಳನ್ನು ಎಲ್ಲ ಹೈಕೋರ್ಟ್ಗಳ ಬಾಲನ್ಯಾಯ ಸಮಿತಿಗಳು ಆಯಾ ರಾಜ್ಯ ಸರ್ಕಾರಗಳಿಗೆ ಕಳುಹಿಸಿ ಪ್ರತಿಕ್ರಿಯೆ ಪಡೆದುಕೊಳ್ಳಲಿವೆ ಎಂದು ಕೋರ್ಟ್ ತಿಳಿಸಿತು.</p>.<p class="bodytext">ಏಪ್ರಿಲ್ 3ರಂದು ಸ್ವಯಂ ಪ್ರೇರಿತರವಾಗಿ ಪ್ರಕರಣ ಕೈಗೆತ್ತಿಕೊಂಡಿದ್ದ ಕೋರ್ಟ್, ದೇಶದಾದ್ಯಂತ ಇರುವ ಬಾಲಾಪರಾಧಿ ಗೃಹ, ವಸತಿಗೃಹಗಳು, ಅನಾಥಾಶ್ರಮದ ಮಕ್ಕಳ ಸುರಕ್ಷತೆ ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತ್ತು.</p>.<p class="bodytext">ಬಾಲಾಪರಾಧಿ ಗೃಹಗಳಲ್ಲಿ ಇರುವ ಮಕ್ಕಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸಾಧ್ಯವೇ ಎಂಬುದನ್ನು ತುರ್ತಾಗಿ ಪರಿಗಣಿಸುವಂತೆ ಬಾಲ ನ್ಯಾಯಮಂಡಳಿಗಳಿಗೆ (ಜೆಜೆಬಿ) ಕೋರ್ಟ್ ಇದೇ ವೇಳೆ ಸೂಚಿಸಿತು.</p>.<p class="bodytext">ಅನಾಥಾಶ್ರಮ ಹಾಗೂ ಬಾಲಾಪರಾಧಿ ಗೃಹಗಳಿಂದ ಮನೆಗೆ ಮರಳಿರುವ ಮಕ್ಕಳ ಜೊತೆ ದೂರವಾಣಿ ಮೂಲಕ ಸಂಪರ್ಕ ಸಾಧಿಸಿ, ಅವರ ಮೇಲೆ ನಿಗಾ ಇರಿಸುವಂತೆ ದೇಶದಾದ್ಯಂತ ಇರುವ ಮಕ್ಕಳ ಕಲ್ಯಾಣ ಸಮಿತಿಗಳಿಗೆ ನಿರ್ದೇಶನ ನೀಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>