ನವದೆಹಲಿ: ‘ನನಗೆ ಕಪಾಳ ಮೋಕ್ಷ ಮಾಡಿರುವುದು ಇಡೀ ದೆಹಲಿ ಜನರಿಗೆ ಅವಮಾನ ಮಾಡಿದಂತೆ. ನಿನ್ನೆಯ ಘಟನೆ ಬಿಜೆಪಿ ಮಾರ್ಗದರ್ಶನದಲ್ಲೇನಡೆದಿದೆ,’ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧ್ವನಿ ಎತ್ತುವವರ ದಾಳಿ ನಡೆಸಲಾಗುತ್ತಿದೆ. ಇದು ಮೋದಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.
ಕೇಜ್ರಿವಾಲ್ ರಾಜಕರಣಕ್ಕೆ ಬಂದ ಮೇಲಿಂದ 9 ಬಾರಿ ದಾಳಿ ನಡೆಸಲಾಗಿದೆ. ಮುಖ್ಯಮಂತ್ರಿಯಾದಗಿನಿಂದ 5 ಭಾರಿ ದಾಳಿ ಮಾಡಲಾಗಿದೆ. ಈ ದೇಶದ ಯಾವ ರಾಜ್ಯದ ಮುಖ್ಯಮಂತ್ರಿಗಳ ಮೇಲೆಯೂ ದಾಳಿ ನಡೆದ ಉದಾರಹಣೆಗಳಿಲ್ಲ ಎಂದು ಎಎಪಿ ಮುಖಂಡರೊಬ್ಬರು ತಿಳಿಸಿದರು.
ದೆಹಲಿ ಮುಖ್ಯಮಂತ್ರಿಯ ಭದ್ರತೆ ಜವಾಬ್ದಾರಿ ವಿರೋಧ ಪಕ್ಷಗಳ ಕೈಯಲ್ಲಿ ಇರುವುದು ದುರಂತ ಎಂದು ಕೇಜ್ರಿವಾಲ್ ವಿಷಾದ ವ್ಯಕ್ತಪಡಿಸಿದರು.
ಶನಿವಾರ ಕೇಜ್ರಿವಾಲ್ ರೋಡ್ ಶೋ ನಡೆಸುವ ವೇಳೆ ಸುರೇಶ್ ಚೌಹಾಣ್ ಎಂಬುವರು ಕಪಾಳ ಮೋಕ್ಷ ಮಾಡಿದ್ದರು. ಸುರೇಶ್ ಚೌಹಾಣ್ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.