ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ನಿತ್ಯಾನಂದ, ಹೊಸ ದೇಶ ಕಟ್ಟುವ ಘೋಷಣೆಯೊಂದಿಗೆ ಕಳೆದೆರಡು ದಿನಗಳಿಂದ ಹೆಚ್ಚು ಪ್ರಚಲಿತದಲ್ಲಿದ್ದಾರೆ. ಕೈಲಾಸ ಎಂಬ ಹೆಸರಿನಲ್ಲಿ ಹಿಂದೂ ರಾಷ್ಟ್ರ ಕಟ್ಟುವುದಾಗಿ ಕೈಲಾಸ ಒಆರ್ಜಿ ಎಂಬ ವೆಬ್ಸೈಟ್ನಲ್ಲಿ ಘೋಷಿಸಿಕೊಂಡಿರುವಅವರು, ತಮ್ಮ ದೇಶಕ್ಕೆ ಪ್ರಧಾನಿ, ಮಂತ್ರಿ ಮಂಡಲ ಇರಲಿದೆ ಎಂದೂ ತಿಳಿಸಿದ್ದಾರೆ. ಎಲ್ಲೆಗಳಿಲ್ಲದ ಹಿಂದೂ ರಾಷ್ಟ್ರ ತಮ್ಮದು ಎಂದೂ ನಿತ್ಯಾನಂದ ಹೇಳಿಕೊಂಡಿದ್ದರು. ತಮ್ಮ ದೇಶಕ್ಕೆ ಧ್ವಜ, ಚಿಹ್ನೆಯನ್ನೂ ರಚಿಸಿಕೊಂಡಿದ್ದರು.