<p><strong>ಕೊಲ್ಹಾಪುರ (ಮಹಾರಾಷ್ಟ್ರ):</strong>ತಮ್ಮ ಮಾತು ಮೀರಿ,ಭೀಮಾ–ಕೋರೆಗಾಂವ್ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವರ್ಗಾಯಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿರ್ಧಾರವು ಮಹಾರಾಷ್ಟ್ರದಲ್ಲಿ ರಚನೆಯಾಗಿರುವ ಮಹಾ ವಿಕಾಸ್ ಅಘಾಡಿ ಮೈತ್ರಿ ಸರ್ಕಾರದಲ್ಲಿ ಬಿರುಕು ಮೂಡಲು ಕಾರಣವಾಗಿದೆ.</p>.<p>ಮುಖ್ಯಮಂತ್ರಿ ನಡೆಯನ್ನುನ್ಯಾಷನಲ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ನಾಯಕ ಶರದ್ ಪವಾರ್ ಕಟುವಾಗಿ ಟೀಕಿಸಿದ್ದಾರೆ. ಭೀಮಾ–ಕೋರೆಗಾಂವ್ ಪ್ರಕರಣವನ್ನುಎನ್ಐಎಗೆ ವರ್ಗಾಯಿಸುವುದಕ್ಕೆ ಈ ಹಿಂದೆಯೂ ಎನ್ಸಿಪಿ ವಿರೋಧಿಸಿತ್ತು.</p>.<p>‘ಮುಖ್ಯಮಂತ್ರಿಯ ಈ ನಡೆಕಾನೂನು ಸುವ್ಯವಸ್ಥೆಯಲ್ಲಿ ರಾಜ್ಯಕ್ಕಿರುವ ಪರಮಾಧಿಕಾರ ಉಲ್ಲಂಘಿಸುವಸಂವಿಧಾನಬಾಹಿರ ನಿರ್ಧಾರ’ ಎಂದು ಪವಾರ್ ಶುಕ್ರವಾರ ಟೀಕಿಸಿದ್ದಾರೆ.</p>.<p><strong>ಇದನ್ನೂ ಓದಿ:</strong> <a href="https://www.prajavani.net/news/article/2018/01/01/544263.html" target="_blank">ವಿಜಯೋತ್ಸವದಲ್ಲಿ ಕಿಡಿಗೇಡಿಗಳಿಂದ ಕಲ್ಲುತೂರಾಟ (ಜ.1, 2018ರ ಸುದ್ದಿ)</a></p>.<p>‘ಪ್ರಕರಣದ ತನಿಖೆ ನಡೆಸುತ್ತಿದ್ದ ಕೆಲ ಪೊಲೀಸ್ ಅಧಿಕಾರಗಳ ನಡೆ ಆಕ್ಷೇಪಾರ್ಹ. ಈ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಯಬೇಕು ಎಂದು ನಾನು ಬಯಸಿದ್ದೆ. ಆದರೆ ಮಹಾರಾಷ್ಟ್ರ ಸರ್ಕಾರದ ಕೆಲ ಸಚಿವರು ಪೊಲೀಸ್ ಅಧಿಕಾರಿಗಳನ್ನು ಒಂದು ದಿನ ಭೇಟಿಯಾದರು. ಅದೇ ದಿನ ಸಂಜೆ 3 ಗಂಟೆಗೆ ಕೇಂದ್ರ ಸರ್ಕಾರವು ಭೀಮಾ–ಕೋರೆಗಾಂವ್ ತನಿಖೆಯ ಹೊಣೆಯನ್ನು ಎನ್ಐಎಗೆ ವರ್ಗಾಯಿಸಿ ಆದೇಶ ಹೊರಡಿಸಿತು. ಅಪರಾಧ ತನಿಖೆ ರಾಜ್ಯದ ಅಧಿಕಾರವ್ಯಾಪ್ತಿಯಲ್ಲಿದೆ. ಅದನ್ನು ಕೇಂದ್ರಕ್ಕೆ ನೀಡುವುದುಸಂವಿಧಾನಬಾಹಿರ ನಿರ್ಧಾರ’ ಎಂದು ಅವರು ಎಎನ್ಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.</p>.<p>‘ರಾಜ್ಯದ ಕೈಯಿಂದ ತನಿಖೆಯ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಕಿತ್ತುಕೊಳ್ಳುವುದು ತಪ್ಪು. ಕೇಂದ್ರದ ನಡೆಯನ್ನು ಮಹಾರಾಷ್ಟ್ರ ಸರ್ಕಾರ ಬೆಂಬಲಿಸಿದ್ದೂ ತಪ್ಪು’ ಎಂದು ಪವಾರ್ ಹೇಳಿದ್ದಾರೆ.‘ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈ ವಿಚಾರದಲ್ಲಿ ನನ್ನ ಮಾತು ಕೇಳಲಿಲ್ಲ’ ಎಂದು ಮಹಾರಾಷ್ಟ್ರ ಗೃಹ ಸಚಿವ, ಎನ್ಸಿಪಿ ನಾಯಕ ಅನಿಲ್ ದೇಶ್ಮುಖ್ ಈ ಹಿಂದೆ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.</p>.<p><strong>ಇದನ್ನೂ ಓದಿ:</strong><a href="https://www.prajavani.net/columns/%E0%B2%95%E0%B3%8B%E0%B2%B0%E0%B3%86%E0%B2%97%E0%B2%BE%E0%B2%82%E0%B2%B5%E0%B3%8D-%E0%B2%B5%E0%B2%BF%E0%B2%9C%E0%B2%AF%E0%B3%8B%E0%B2%A4%E0%B3%8D%E0%B2%B8%E0%B2%B5-%E0%B2%A6%E0%B3%87%E0%B2%B6%E0%B2%A6%E0%B3%8D%E0%B2%B0%E0%B3%8B%E0%B2%B9%E0%B2%A6%E0%B3%8D%E0%B2%A6%E0%B3%87" target="_blank">ಕೋರೆಗಾಂವ್ ವಿಜಯೋತ್ಸವ ದೇಶದ್ರೋಹದ್ದೇ? (ಡಿ.ಉಮಾಪತಿ ಬರಹ)</a></p>.<p>ಎರಡು ವರ್ಷಗಳ ಹಿಂದೆ ಪುಣೆ ಸಮೀಪದ ಭೀಮಾ–ಕೋರೆಗಾಂವ್ ಯುದ್ಧ ಸ್ಮಾರಕದ ಬಳಿ ಜನವರಿ 1, 2018ರಂದು ನಡೆದಿದ್ದ ಹಿಂಸಾಚಾರಕ್ಕೆ ಕಾರಣವಾದ ಪ್ರಚೋದನಾಕಾರಿ ಭಾಷಣಗಳ ಬಗ್ಗೆ ಮಹಾರಾಷ್ಟ್ರ ಸರ್ಕಾರ ತನಿಖೆ ನಡೆಸಿತ್ತು. ದೇಶದ ವಿವಿಧೆಡೆ ಪ್ರಗತಿಪರ ಚಳವಳಿಗಳೊಂದಿಗೆ ಗುರುತಿಸಿಕೊಂಡಿದ್ದ ಹಲವರನ್ನು ಈ ಪ್ರಕರಣದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ಜನವರಿ 25ರಂದು ಮಹಾರಾಷ್ಟ್ರ ಸರ್ಕಾರ ತನಿಖೆಯ ಹೊಣೆಯನ್ನು ಎನ್ಐಎಗೆ ಬಿಟ್ಟುಕೊಟ್ಟಿತ್ತು.</p>.<p><strong>ಇನ್ನಷ್ಟು... </strong></p>.<p><a href="https://www.prajavani.net/news/article/2018/01/03/544761.html" target="_blank">ಸಂಗತ | ಕೋರೆಗಾಂವ್ ಎಂಬ ದಲಿತ ಕಥನ</a></p>.<p><a href="https://www.prajavani.net/article/%E0%B2%95%E0%B3%8B%E0%B2%B0%E0%B3%86%E0%B2%97%E0%B2%BE%E0%B2%82%E0%B2%B5%E0%B3%8D%E2%80%8C-%E0%B2%B6%E0%B3%8B%E0%B2%B7%E0%B2%BF%E0%B2%A4%E0%B2%B0-%E0%B2%B5%E0%B2%BF%E0%B2%9C%E0%B2%AF%E0%B2%A6-%E0%B2%B0%E0%B3%82%E0%B2%AA%E0%B2%95" target="_blank">ಮುಕ್ತಛಂದ | ಕೋರೆಗಾಂವ್ ಶೋಷಿತರ ವಿಜಯದ ರೂಪಕ</a></p>.<p><a href="https://www.prajavani.net/stories/national/activists-arrest-577150.html" target="_blank">ಬಂಧನದ ಉದ್ದೇಶ ಭಿನ್ನಮತ ದಮನ–ನ್ಯಾಯಮೂರ್ತಿ ಚಂದ್ರಚೂಡ್</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲ್ಹಾಪುರ (ಮಹಾರಾಷ್ಟ್ರ):</strong>ತಮ್ಮ ಮಾತು ಮೀರಿ,ಭೀಮಾ–ಕೋರೆಗಾಂವ್ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವರ್ಗಾಯಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿರ್ಧಾರವು ಮಹಾರಾಷ್ಟ್ರದಲ್ಲಿ ರಚನೆಯಾಗಿರುವ ಮಹಾ ವಿಕಾಸ್ ಅಘಾಡಿ ಮೈತ್ರಿ ಸರ್ಕಾರದಲ್ಲಿ ಬಿರುಕು ಮೂಡಲು ಕಾರಣವಾಗಿದೆ.</p>.<p>ಮುಖ್ಯಮಂತ್ರಿ ನಡೆಯನ್ನುನ್ಯಾಷನಲ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ನಾಯಕ ಶರದ್ ಪವಾರ್ ಕಟುವಾಗಿ ಟೀಕಿಸಿದ್ದಾರೆ. ಭೀಮಾ–ಕೋರೆಗಾಂವ್ ಪ್ರಕರಣವನ್ನುಎನ್ಐಎಗೆ ವರ್ಗಾಯಿಸುವುದಕ್ಕೆ ಈ ಹಿಂದೆಯೂ ಎನ್ಸಿಪಿ ವಿರೋಧಿಸಿತ್ತು.</p>.<p>‘ಮುಖ್ಯಮಂತ್ರಿಯ ಈ ನಡೆಕಾನೂನು ಸುವ್ಯವಸ್ಥೆಯಲ್ಲಿ ರಾಜ್ಯಕ್ಕಿರುವ ಪರಮಾಧಿಕಾರ ಉಲ್ಲಂಘಿಸುವಸಂವಿಧಾನಬಾಹಿರ ನಿರ್ಧಾರ’ ಎಂದು ಪವಾರ್ ಶುಕ್ರವಾರ ಟೀಕಿಸಿದ್ದಾರೆ.</p>.<p><strong>ಇದನ್ನೂ ಓದಿ:</strong> <a href="https://www.prajavani.net/news/article/2018/01/01/544263.html" target="_blank">ವಿಜಯೋತ್ಸವದಲ್ಲಿ ಕಿಡಿಗೇಡಿಗಳಿಂದ ಕಲ್ಲುತೂರಾಟ (ಜ.1, 2018ರ ಸುದ್ದಿ)</a></p>.<p>‘ಪ್ರಕರಣದ ತನಿಖೆ ನಡೆಸುತ್ತಿದ್ದ ಕೆಲ ಪೊಲೀಸ್ ಅಧಿಕಾರಗಳ ನಡೆ ಆಕ್ಷೇಪಾರ್ಹ. ಈ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಯಬೇಕು ಎಂದು ನಾನು ಬಯಸಿದ್ದೆ. ಆದರೆ ಮಹಾರಾಷ್ಟ್ರ ಸರ್ಕಾರದ ಕೆಲ ಸಚಿವರು ಪೊಲೀಸ್ ಅಧಿಕಾರಿಗಳನ್ನು ಒಂದು ದಿನ ಭೇಟಿಯಾದರು. ಅದೇ ದಿನ ಸಂಜೆ 3 ಗಂಟೆಗೆ ಕೇಂದ್ರ ಸರ್ಕಾರವು ಭೀಮಾ–ಕೋರೆಗಾಂವ್ ತನಿಖೆಯ ಹೊಣೆಯನ್ನು ಎನ್ಐಎಗೆ ವರ್ಗಾಯಿಸಿ ಆದೇಶ ಹೊರಡಿಸಿತು. ಅಪರಾಧ ತನಿಖೆ ರಾಜ್ಯದ ಅಧಿಕಾರವ್ಯಾಪ್ತಿಯಲ್ಲಿದೆ. ಅದನ್ನು ಕೇಂದ್ರಕ್ಕೆ ನೀಡುವುದುಸಂವಿಧಾನಬಾಹಿರ ನಿರ್ಧಾರ’ ಎಂದು ಅವರು ಎಎನ್ಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.</p>.<p>‘ರಾಜ್ಯದ ಕೈಯಿಂದ ತನಿಖೆಯ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಕಿತ್ತುಕೊಳ್ಳುವುದು ತಪ್ಪು. ಕೇಂದ್ರದ ನಡೆಯನ್ನು ಮಹಾರಾಷ್ಟ್ರ ಸರ್ಕಾರ ಬೆಂಬಲಿಸಿದ್ದೂ ತಪ್ಪು’ ಎಂದು ಪವಾರ್ ಹೇಳಿದ್ದಾರೆ.‘ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈ ವಿಚಾರದಲ್ಲಿ ನನ್ನ ಮಾತು ಕೇಳಲಿಲ್ಲ’ ಎಂದು ಮಹಾರಾಷ್ಟ್ರ ಗೃಹ ಸಚಿವ, ಎನ್ಸಿಪಿ ನಾಯಕ ಅನಿಲ್ ದೇಶ್ಮುಖ್ ಈ ಹಿಂದೆ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.</p>.<p><strong>ಇದನ್ನೂ ಓದಿ:</strong><a href="https://www.prajavani.net/columns/%E0%B2%95%E0%B3%8B%E0%B2%B0%E0%B3%86%E0%B2%97%E0%B2%BE%E0%B2%82%E0%B2%B5%E0%B3%8D-%E0%B2%B5%E0%B2%BF%E0%B2%9C%E0%B2%AF%E0%B3%8B%E0%B2%A4%E0%B3%8D%E0%B2%B8%E0%B2%B5-%E0%B2%A6%E0%B3%87%E0%B2%B6%E0%B2%A6%E0%B3%8D%E0%B2%B0%E0%B3%8B%E0%B2%B9%E0%B2%A6%E0%B3%8D%E0%B2%A6%E0%B3%87" target="_blank">ಕೋರೆಗಾಂವ್ ವಿಜಯೋತ್ಸವ ದೇಶದ್ರೋಹದ್ದೇ? (ಡಿ.ಉಮಾಪತಿ ಬರಹ)</a></p>.<p>ಎರಡು ವರ್ಷಗಳ ಹಿಂದೆ ಪುಣೆ ಸಮೀಪದ ಭೀಮಾ–ಕೋರೆಗಾಂವ್ ಯುದ್ಧ ಸ್ಮಾರಕದ ಬಳಿ ಜನವರಿ 1, 2018ರಂದು ನಡೆದಿದ್ದ ಹಿಂಸಾಚಾರಕ್ಕೆ ಕಾರಣವಾದ ಪ್ರಚೋದನಾಕಾರಿ ಭಾಷಣಗಳ ಬಗ್ಗೆ ಮಹಾರಾಷ್ಟ್ರ ಸರ್ಕಾರ ತನಿಖೆ ನಡೆಸಿತ್ತು. ದೇಶದ ವಿವಿಧೆಡೆ ಪ್ರಗತಿಪರ ಚಳವಳಿಗಳೊಂದಿಗೆ ಗುರುತಿಸಿಕೊಂಡಿದ್ದ ಹಲವರನ್ನು ಈ ಪ್ರಕರಣದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ಜನವರಿ 25ರಂದು ಮಹಾರಾಷ್ಟ್ರ ಸರ್ಕಾರ ತನಿಖೆಯ ಹೊಣೆಯನ್ನು ಎನ್ಐಎಗೆ ಬಿಟ್ಟುಕೊಟ್ಟಿತ್ತು.</p>.<p><strong>ಇನ್ನಷ್ಟು... </strong></p>.<p><a href="https://www.prajavani.net/news/article/2018/01/03/544761.html" target="_blank">ಸಂಗತ | ಕೋರೆಗಾಂವ್ ಎಂಬ ದಲಿತ ಕಥನ</a></p>.<p><a href="https://www.prajavani.net/article/%E0%B2%95%E0%B3%8B%E0%B2%B0%E0%B3%86%E0%B2%97%E0%B2%BE%E0%B2%82%E0%B2%B5%E0%B3%8D%E2%80%8C-%E0%B2%B6%E0%B3%8B%E0%B2%B7%E0%B2%BF%E0%B2%A4%E0%B2%B0-%E0%B2%B5%E0%B2%BF%E0%B2%9C%E0%B2%AF%E0%B2%A6-%E0%B2%B0%E0%B3%82%E0%B2%AA%E0%B2%95" target="_blank">ಮುಕ್ತಛಂದ | ಕೋರೆಗಾಂವ್ ಶೋಷಿತರ ವಿಜಯದ ರೂಪಕ</a></p>.<p><a href="https://www.prajavani.net/stories/national/activists-arrest-577150.html" target="_blank">ಬಂಧನದ ಉದ್ದೇಶ ಭಿನ್ನಮತ ದಮನ–ನ್ಯಾಯಮೂರ್ತಿ ಚಂದ್ರಚೂಡ್</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>