ಅಮೇಠಿ: ಎರಡು ದಿನಗಳ ಹಿಂದೆ ನಡೆದ ಬಿಜೆಪಿ ಕಾರ್ಯಕರ್ತ ಹಾಗೂ ಸಚಿವೆ ಸ್ಮೃತಿ ಇರಾನಿ ಆಪ್ತನ ಕೊಲೆಗೆ ಸಂಬಂಧಿಸಿದಂತೆ ಮೂವರು ಶಂಕಿತರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
‘ಹತ್ಯೆಯಾದ ಸುರೇಂದ್ರ ಸಿಂಗ್ (50) ಹಾಗೂ ಆರೋಪಿಯೊಬ್ಬನ ತಂದೆಯ ಮಧ್ಯೆ ಸ್ಥಳೀಯ ರಾಜಕೀಯ ವೈಷಮ್ಯವಿತ್ತು. ಇದು ಕೊಲೆಗೆ ಕಾರಣವಿಬಹುದು. 7 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ’ ಎಂದು ಡಿಜಿಪಿ ಒ.ಪಿ.ಸಿಂಗ್ ಹೇಳಿದ್ದಾರೆ.