<p><strong>ನವದೆಹಲಿ:</strong> ಬಿಜೆಪಿ ವಿರೋಧಿ ಪಕ್ಷಗಳ ಮೈತ್ರಿಕೂಟವು ‘ಭಯೋತ್ಪಾದಕರ ಒಕ್ಕೂಟ’ ಎಂದು ಬಿಜೆಪಿ ಸಂಸದ ಹುಕುಂ ದೇವ್ ನಾರಾಯಣ್ ಯಾದವ್ ಅವರು ಹೇಳಿದ್ದು ಲೋಕಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಕೈ ಕೈ ಮಿಲಾಯಿಸುವಂತಹ ಸನ್ನಿವೇಶ ಸೃಷ್ಟಿಸಿತು.</p>.<p>‘ಕಳ್ಳರು, ಅಪ್ರಾಮಾಣಿಕರು ಮತ್ತು ದೇಶ ವಿರೋಧಿಗಳ ವಿರುದ್ಧ ನರೇಂದ್ರ ಮೋದಿ ಅವರು ಕ್ರಮ ಕೈಗೊಳ್ಳುತ್ತಿದ್ದಾರೆ. ಮತ್ತೊಂದೆಡೆ ಭಯೋತ್ಪಾದಕರು, ತೀವ್ರವಾದಿಗಳು, ಕೊಲೆಗಡುಕರು ಜತೆಯಾಗಿ ‘ಚೌಕೀದಾರ್ ಚೋರ್ ಹೇ’ ಎಂದು ಘೋಷಣೆ ಕೂಗುತ್ತಿದ್ದಾರೆ’ ಎಂದು ಹುಕುಂ ದೇವ್ ಹೇಳಿದರು.</p>.<p>ಹುಕುಂ ದೇವ್ ತಮ್ಮ ಹೇಳಿಕೆ ಹಿಂದಕ್ಕೆ ಪಡೆಯಬೇಕು ಎಂದು ಎಸ್ಪಿ ಸದಸ್ಯ ಧರ್ಮೇಂದ್ರ ಯಾದವ್ ಆಗ್ರಹಿಸಿದರು. ತೃಣಮೂಲ ಕಾಂಗ್ರೆಸ್ ಸಂಸದರಿಗೆ ಈ ಬಗ್ಗೆ ಅರಿವೇ ಇರಲಿಲ್ಲ. ಮಾತಿನ ಚಕಮಕಿ ಮುಂದುವರಿಯು<br />ತ್ತಿದ್ದಂತೆಯೇ, ಟಿಎಂಸಿಯ ಅಪರೂಪ ಪೊದ್ದಾರ್ ಮತ್ತು ಎಲ್ಜೆಪಿ ಸದಸ್ಯೆ ವೀಣಾ ದೇವಿ ಪರಸ್ಪರರಿಗೆ ಬೆದರಿಕೆ ಒಡ್ಡುವ ರೀತಿಯ ಸಂಜ್ಞೆ ಮಾಡಿದರು.</p>.<p>ಧರ್ಮೇಂದ್ರ ಅವರು ಹುಕುಂ ದೇವ್ ಅವರತ್ತ ಬೆದರಿಕೆ ಧಾಟಿಯ ಸಂಜ್ಞೆ ಮಾಡಿದಾಗ ಬಿಜೆಪಿಯ ಸಂಸದರು ಹುಕುಂ ದೇವ್ ಸುತ್ತ ನಿಂತರು. ಮುಂದೂ<br />ಡಿಕೆಯಾಗಿದ್ದ ಕಲಾಪ ಮತ್ತೆ ಸೇರಿದಾಗ ಹುಕುಂ ದೇವ್ ಅವರನ್ನು ಬಿಜೆಪಿ ಸಂಸದರು ಬೇರೊಂದು ಆಸನದತ್ತ ಕರೆದೊಯ್ದು ಕುಳ್ಳಿರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಬಿಜೆಪಿ ವಿರೋಧಿ ಪಕ್ಷಗಳ ಮೈತ್ರಿಕೂಟವು ‘ಭಯೋತ್ಪಾದಕರ ಒಕ್ಕೂಟ’ ಎಂದು ಬಿಜೆಪಿ ಸಂಸದ ಹುಕುಂ ದೇವ್ ನಾರಾಯಣ್ ಯಾದವ್ ಅವರು ಹೇಳಿದ್ದು ಲೋಕಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಕೈ ಕೈ ಮಿಲಾಯಿಸುವಂತಹ ಸನ್ನಿವೇಶ ಸೃಷ್ಟಿಸಿತು.</p>.<p>‘ಕಳ್ಳರು, ಅಪ್ರಾಮಾಣಿಕರು ಮತ್ತು ದೇಶ ವಿರೋಧಿಗಳ ವಿರುದ್ಧ ನರೇಂದ್ರ ಮೋದಿ ಅವರು ಕ್ರಮ ಕೈಗೊಳ್ಳುತ್ತಿದ್ದಾರೆ. ಮತ್ತೊಂದೆಡೆ ಭಯೋತ್ಪಾದಕರು, ತೀವ್ರವಾದಿಗಳು, ಕೊಲೆಗಡುಕರು ಜತೆಯಾಗಿ ‘ಚೌಕೀದಾರ್ ಚೋರ್ ಹೇ’ ಎಂದು ಘೋಷಣೆ ಕೂಗುತ್ತಿದ್ದಾರೆ’ ಎಂದು ಹುಕುಂ ದೇವ್ ಹೇಳಿದರು.</p>.<p>ಹುಕುಂ ದೇವ್ ತಮ್ಮ ಹೇಳಿಕೆ ಹಿಂದಕ್ಕೆ ಪಡೆಯಬೇಕು ಎಂದು ಎಸ್ಪಿ ಸದಸ್ಯ ಧರ್ಮೇಂದ್ರ ಯಾದವ್ ಆಗ್ರಹಿಸಿದರು. ತೃಣಮೂಲ ಕಾಂಗ್ರೆಸ್ ಸಂಸದರಿಗೆ ಈ ಬಗ್ಗೆ ಅರಿವೇ ಇರಲಿಲ್ಲ. ಮಾತಿನ ಚಕಮಕಿ ಮುಂದುವರಿಯು<br />ತ್ತಿದ್ದಂತೆಯೇ, ಟಿಎಂಸಿಯ ಅಪರೂಪ ಪೊದ್ದಾರ್ ಮತ್ತು ಎಲ್ಜೆಪಿ ಸದಸ್ಯೆ ವೀಣಾ ದೇವಿ ಪರಸ್ಪರರಿಗೆ ಬೆದರಿಕೆ ಒಡ್ಡುವ ರೀತಿಯ ಸಂಜ್ಞೆ ಮಾಡಿದರು.</p>.<p>ಧರ್ಮೇಂದ್ರ ಅವರು ಹುಕುಂ ದೇವ್ ಅವರತ್ತ ಬೆದರಿಕೆ ಧಾಟಿಯ ಸಂಜ್ಞೆ ಮಾಡಿದಾಗ ಬಿಜೆಪಿಯ ಸಂಸದರು ಹುಕುಂ ದೇವ್ ಸುತ್ತ ನಿಂತರು. ಮುಂದೂ<br />ಡಿಕೆಯಾಗಿದ್ದ ಕಲಾಪ ಮತ್ತೆ ಸೇರಿದಾಗ ಹುಕುಂ ದೇವ್ ಅವರನ್ನು ಬಿಜೆಪಿ ಸಂಸದರು ಬೇರೊಂದು ಆಸನದತ್ತ ಕರೆದೊಯ್ದು ಕುಳ್ಳಿರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>