ಕಾರ್ಯಕರ್ತರ ಒತ್ತಾಯದ ಮೇರೆಗೆಭಾಷಣ ಆರಂಭಿಸಿದಪ್ರಿಯಾಂಕಾ ಗಾಂಧಿ ಅವರು ಕಾರ್ಯಕರ್ತರು ನಾಯಕರ ವಿರುದ್ಧ ಕಟುವಾಗಿಮಾತನಾಡಿದರು. ‘ನಾನು ಇಲ್ಲಿ ಏನನ್ನೂ ಮಾತನಾಡದೇ ಇರಲು ನಿರ್ಧರಿಸಿದ್ದೆ. ಆದರೆ, ನನ್ನನ್ನು ಮಾತನಾಡಲು ಕೇಳಲಾಯಿತು. ಹಾಗಿದ್ದರೆ, ನಿಜ ಮಾತನಾಡಲು ಬಿಡಿ. ಆ ಸತ್ಯ ಏನೆಂದರೆ ಈ ಕ್ಷೇತ್ರದಲ್ಲಿ ನಾವು ಈ ಬಾರಿಯ ಚುನಾವಣೆಯಲ್ಲಿ ಗೆದ್ದಿದ್ದು, ಸೋನಿಯಾ ಗಾಂಧಿ ಅವರ ವರ್ಚಸ್ಸು ಮತ್ತು ರಾಯಬರೇಲಿಯ ಜನರಿಂದ ಮಾತ್ರ,’ಎಂದು ಅವರು ನಿಷ್ಠುರ ನುಡಿಗಳನ್ನಾಡಿದರು.