ಚೆನ್ನೈ: ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಕೆ.ಪಿ. ಅನ್ಬಳಗನ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸಚಿವರ ಗಂಟಲು ದ್ರವ ಪರೀಕ್ಷೆ ಬಳಿಕ ಗುರುವಾರ ಸೋಂಕು ದೃಢಪಟ್ಟಿದ್ದರಿಂದ ಅವರು ಇಲ್ಲಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ‘ಗೆ ತಿಳಿಸಿವೆ.
ನಗರದಲ್ಲಿ ಕೋವಿಡ್– 19 ನಿಯಂತ್ರಣಕ್ಕಾಗಿ ಮುಖ್ಯಮಂತ್ರಿ ಪಳನಿಸ್ವಾಮಿ ಅವರು ರಚಿಸಿದ್ದ ಸಮನ್ವಯ ಸಮಿತಿ ಸದಸ್ಯರಲ್ಲಿ ಸಚಿವರೂ ಸೇರಿದ್ದಾರೆ.
ಸಚಿವರು ಬುಧವಾರದಂದು ಪರಿಶೀಲನಾ ಸಭೆಯಲ್ಲೂ ಭಾಗವಹಿಸಿದ್ದು ಇದರಲ್ಲಿ ಆರು ಮಂದಿ ಸದಸ್ಯರು ಪಾಲ್ಗೊಂಡಿದ್ದರು. ನಂತರದಲ್ಲಿ ಅವರು ಮಾಧ್ಯಮದವರ ಜತೆಯೂ ಮಾತನಾಡಿದ್ದರು. ಈ ಸಂದರ್ಭದಲ್ಲಿ ಅಂತರ ಕಾಯ್ದುಕೊಳ್ಳದೇಇದ್ದದ್ದುಟೀಕೆಗೂ ಒಳಗಾಗಿತ್ತು.
ಸಚಿವರಿಗೆ ಸೋಂಕು ಇರುವುದನ್ನು ಅಧಿಕಾರಿಗಳು ದೃಢಪಡಿಸಿದ್ದರೂ, ತಾವು ಆರೋಗ್ಯದಿಂದಿರುವುದಾಗಿ ತಮಿಳು ಸುದ್ದಿ ವಾಹಿನಿಗಳಿಗೆ ಅವರು ಹೇಳಿಕೊಂಡಿದ್ದಾರೆ.