<p><strong>ನವದೆಹಲಿ:</strong> ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್) ಆಧಾರದಲ್ಲಿ ₹4 ಲಕ್ಷ ಕೋಟಿ ಪಾವತಿಸಬೇಕು ಎಂದು ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ನೀಡಿರುವ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ತರಂಗಾಂತರ ಬಳಕೆ ಶುಲ್ಕವಾಗಿ ಈ ಮೊತ್ತವನ್ನು ನೀಡಬೇಕು ಎಂದು ದೂರ ಸಂಪರ್ಕ ಸಚಿವಾಲಯವು ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಹೇಳಿತ್ತು.</p>.<p>ದೂರಸಂಪರ್ಕ ಸೇವಾ ಕಂಪನಿಗಳಿಂದ ಎಜಿಆರ್ ವಸೂಲಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ 2019ರಲ್ಲಿ ಆದೇಶ ನೀಡಿತ್ತು. ಈ ಆದೇಶವನ್ನು ಬಳಸಿಕೊಂಡು ಸರ್ಕಾರಿ ಸ್ವಾಮ್ಯದ ಕಂಪನಿಗಳಿಂದ ಹಣ ವಸೂಲಿಗೆ ಮುಂದಾಗಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠವು ಹೇಳಿದೆ.</p>.<p>‘ಆದೇಶದ ದುರ್ಬಳಕೆಗೆ ಸ್ಪಷ್ಟ ಉದಾಹರಣೆ ಇದು’ ಎಂದು ಪೀಠ ಹೇಳಿದೆ.</p>.<p>ಗೇಲ್ ಇಂಡಿಯಾ, ಭಾರತೀಯ ವಿದ್ಯುತ್ ಗ್ರಿಡ್ ನಿಗಮ, ಆಯಿಲ್ ಇಂಡಿಯಾ ಲಿ., ದೆಹಲಿ ಮೆಟ್ರೊ ನಿಗಮ, ರೈಲ್–ಟೆಲ್ ಮುಂತಾದ ಕಂಪನಿಗಳು ಎಜಿಆರ್ ರೂಪದಲ್ಲಿ ₹4 ಲಕ್ಷ ಕೋಟಿ ಪಾವತಿಸಬೇಕು ಎಂದು ದೂರಸಂಪರ್ಕ ಇಲಾಖೆ ಸೂಚಿಸಿತ್ತು. ದೂರಸಂಪರ್ಕ ಸೇವೆ ಒದಗಿಸುವ 15 ಕಂಪನಿಗಳು ಎಜಿಆರ್ ರೂಪದಲ್ಲಿ ₹1.47 ಲಕ್ಷ ಕೋಟಿ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ 2019ರಲ್ಲಿ ನೀಡಿದ ಆದೇಶದ ಆಧಾರದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.</p>.<p>2019ರ ಆದೇಶದ ಬಗ್ಗೆ ಸ್ಪಷ್ಟನೆ ಬೇಕು ಎಂದು ದೂರಸಂಪರ್ಕ ಇಲಾಖೆಯ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರಿದರು. ಆದರೆ, ಈ ಅರ್ಜಿಯನ್ನು ಪೀಠವು ವಜಾ ಮಾಡಿತು.</p>.<p>‘ಸರ್ಕಾರಿ ಸ್ವಾಮ್ಯದ ಕೆಲವು ಉದ್ದಿಮೆಗಳು ಅತ್ಯುತ್ತಮವಾಗಿ ಕೆಲಸ ಮಾಡುತ್ತಿವೆ. ಇವುಗಳು ಸರ್ಕಾರಕ್ಕೆ ಬೇಕಾದ ಕೆಲಸಗಳನ್ನು ಮಾಡುತ್ತಿವೆ. ಅಷ್ಟಲ್ಲದೆ, ದೂರಸಂಪರ್ಕ ಕಂಪನಿಗಳ ರೀತಿಯಲ್ಲಿ ವಾಣಿಜ್ಯ ಉದ್ದೇಶದಿಂದ ಮೊಬೈಲ್ ಸೇವೆಯನ್ನು ಒದಗಿಸುತ್ತಿಲ್ಲ. ಹಾಗಾಗಿ, ಈ ಕಂಪನಿಗಳನ್ನು ದೂರಸಂಪರ್ಕ ವಲಯದ ಖಾಸಗಿ ಕಂಪನಿಗಳ ರೀತಿಯಲ್ಲಿ ನೋಡುವುದು ಸಾಧ್ಯವಿಲ್ಲ’ ಎಂದು ಪೀಠ ವಿವರಿಸಿದೆ.</p>.<p>ಹಣ ಪಾವತಿಸುವಂತೆ ಈ ಕಂಪನಿಗಳಿಗೆ ನೀಡಿರುವ ಸೂಚನೆಯನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ಪೀಠ ನೀಡಿದೆ.</p>.<p><strong>‘ದೂರಸಂಪರ್ಕ ಕಂಪನಿಗಳ ಪಾವತಿ ಹೇಗೆ?’</strong></p>.<p>₹1.47 ಲಕ್ಷ ಕೋಟಿ ಎಜಿಆರ್ನಲ್ಲಿ ದೂರಸಂಪರ್ಕ ಕಂಪನಿಗಳು ಪಾವತಿಸಲು ಬಾಕಿ ಇರುವ ಮೊತ್ತವನ್ನು ಹೇಗೆ ಪಾವತಿಸಲಾಗುವುದು ಎಂದು ಪೀಠವು ಪ್ರಶ್ನಿಸಿದೆ. ಯಾವ ಕಂಪನಿಯ ಬಾಕಿ ಎಷ್ಟಿದೆ ಮತ್ತು ಈ ಕಂಪನಿಗಳ ಆರ್ಥಿಕ ಸ್ಥಿತಿ ಹೇಗಿದೆ ಎಂಬ ಮಾಹಿತಿಯನ್ನು ಇದೇ 18ರೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ.</p>.<p>ಹಣ ಪಾವತಿಸಲು ಖಾಸಗಿ ಕಂಪನಿಗಳಿಗೆ 20 ವರ್ಷದ ಅವಧಿ ನೀಡಬಹುದು ಎಂದು ಸರ್ಕಾರ ಹೇಳಿದೆ. ಆದರೆ, ಇದು ಬಹಳ ದೀರ್ಘವಾದ ಅವಧಿ ಎಂದು ಪೀಠವು ಅಭಿಪ್ರಾಯಪಟ್ಟಿದೆ.</p>.<p>ಲೆಕ್ಕಾಚಾರ ಪ್ರಕಾರ ಎಷ್ಟು ಪಾವತಿಸಬೇಕಿತ್ತೋ ಅಷ್ಟನ್ನೂ ಪಾವತಿಸಲಾಗಿದೆ ಎಂದು ಏರ್ಟೆಲ್ ತಿಳಿಸಿದೆ.</p>.<p>ಸಾವಿರಾರು ಕೋಟಿ ರೂಪಾಯಿ ಕೊಟ್ಟು ಪರವಾನಗಿ ಮತ್ತು ತರಂಗಾಂತರ ಪಡೆದುಕೊಳ್ಳಲಾಗಿದೆ. ಎಜಿಆರ್ ಪಾವತಿ ಸಾಧ್ಯವಾಗದಿದ್ದರೆ ಪರವಾನಗಿಯನ್ನೇ ರದ್ದು ಮಾಡಬಹುದು. ನಮ್ಮಲ್ಲಿ ಸಂಬಳ ನೀಡುವುದಕ್ಕೇ ಹಣ ಇಲ್ಲ ಎಂದು ವೊಡಾಫೋನ್ ಪರ ವಕೀಲರು ಹೇಳಿದರು.</p>.<p>‘ಸರ್ಕಾರಕ್ಕೆ ಹಣ ಬರುವಂತೆ ನಾವು ನೋಡಿಕೊಳ್ಳಲೇಬೇಕು’ ಎಂದು ಪೀಠ ಇದಕ್ಕೆ ಪ್ರತಿಕ್ರಿಯೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್) ಆಧಾರದಲ್ಲಿ ₹4 ಲಕ್ಷ ಕೋಟಿ ಪಾವತಿಸಬೇಕು ಎಂದು ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ನೀಡಿರುವ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ತರಂಗಾಂತರ ಬಳಕೆ ಶುಲ್ಕವಾಗಿ ಈ ಮೊತ್ತವನ್ನು ನೀಡಬೇಕು ಎಂದು ದೂರ ಸಂಪರ್ಕ ಸಚಿವಾಲಯವು ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಹೇಳಿತ್ತು.</p>.<p>ದೂರಸಂಪರ್ಕ ಸೇವಾ ಕಂಪನಿಗಳಿಂದ ಎಜಿಆರ್ ವಸೂಲಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ 2019ರಲ್ಲಿ ಆದೇಶ ನೀಡಿತ್ತು. ಈ ಆದೇಶವನ್ನು ಬಳಸಿಕೊಂಡು ಸರ್ಕಾರಿ ಸ್ವಾಮ್ಯದ ಕಂಪನಿಗಳಿಂದ ಹಣ ವಸೂಲಿಗೆ ಮುಂದಾಗಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠವು ಹೇಳಿದೆ.</p>.<p>‘ಆದೇಶದ ದುರ್ಬಳಕೆಗೆ ಸ್ಪಷ್ಟ ಉದಾಹರಣೆ ಇದು’ ಎಂದು ಪೀಠ ಹೇಳಿದೆ.</p>.<p>ಗೇಲ್ ಇಂಡಿಯಾ, ಭಾರತೀಯ ವಿದ್ಯುತ್ ಗ್ರಿಡ್ ನಿಗಮ, ಆಯಿಲ್ ಇಂಡಿಯಾ ಲಿ., ದೆಹಲಿ ಮೆಟ್ರೊ ನಿಗಮ, ರೈಲ್–ಟೆಲ್ ಮುಂತಾದ ಕಂಪನಿಗಳು ಎಜಿಆರ್ ರೂಪದಲ್ಲಿ ₹4 ಲಕ್ಷ ಕೋಟಿ ಪಾವತಿಸಬೇಕು ಎಂದು ದೂರಸಂಪರ್ಕ ಇಲಾಖೆ ಸೂಚಿಸಿತ್ತು. ದೂರಸಂಪರ್ಕ ಸೇವೆ ಒದಗಿಸುವ 15 ಕಂಪನಿಗಳು ಎಜಿಆರ್ ರೂಪದಲ್ಲಿ ₹1.47 ಲಕ್ಷ ಕೋಟಿ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ 2019ರಲ್ಲಿ ನೀಡಿದ ಆದೇಶದ ಆಧಾರದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.</p>.<p>2019ರ ಆದೇಶದ ಬಗ್ಗೆ ಸ್ಪಷ್ಟನೆ ಬೇಕು ಎಂದು ದೂರಸಂಪರ್ಕ ಇಲಾಖೆಯ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರಿದರು. ಆದರೆ, ಈ ಅರ್ಜಿಯನ್ನು ಪೀಠವು ವಜಾ ಮಾಡಿತು.</p>.<p>‘ಸರ್ಕಾರಿ ಸ್ವಾಮ್ಯದ ಕೆಲವು ಉದ್ದಿಮೆಗಳು ಅತ್ಯುತ್ತಮವಾಗಿ ಕೆಲಸ ಮಾಡುತ್ತಿವೆ. ಇವುಗಳು ಸರ್ಕಾರಕ್ಕೆ ಬೇಕಾದ ಕೆಲಸಗಳನ್ನು ಮಾಡುತ್ತಿವೆ. ಅಷ್ಟಲ್ಲದೆ, ದೂರಸಂಪರ್ಕ ಕಂಪನಿಗಳ ರೀತಿಯಲ್ಲಿ ವಾಣಿಜ್ಯ ಉದ್ದೇಶದಿಂದ ಮೊಬೈಲ್ ಸೇವೆಯನ್ನು ಒದಗಿಸುತ್ತಿಲ್ಲ. ಹಾಗಾಗಿ, ಈ ಕಂಪನಿಗಳನ್ನು ದೂರಸಂಪರ್ಕ ವಲಯದ ಖಾಸಗಿ ಕಂಪನಿಗಳ ರೀತಿಯಲ್ಲಿ ನೋಡುವುದು ಸಾಧ್ಯವಿಲ್ಲ’ ಎಂದು ಪೀಠ ವಿವರಿಸಿದೆ.</p>.<p>ಹಣ ಪಾವತಿಸುವಂತೆ ಈ ಕಂಪನಿಗಳಿಗೆ ನೀಡಿರುವ ಸೂಚನೆಯನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ಪೀಠ ನೀಡಿದೆ.</p>.<p><strong>‘ದೂರಸಂಪರ್ಕ ಕಂಪನಿಗಳ ಪಾವತಿ ಹೇಗೆ?’</strong></p>.<p>₹1.47 ಲಕ್ಷ ಕೋಟಿ ಎಜಿಆರ್ನಲ್ಲಿ ದೂರಸಂಪರ್ಕ ಕಂಪನಿಗಳು ಪಾವತಿಸಲು ಬಾಕಿ ಇರುವ ಮೊತ್ತವನ್ನು ಹೇಗೆ ಪಾವತಿಸಲಾಗುವುದು ಎಂದು ಪೀಠವು ಪ್ರಶ್ನಿಸಿದೆ. ಯಾವ ಕಂಪನಿಯ ಬಾಕಿ ಎಷ್ಟಿದೆ ಮತ್ತು ಈ ಕಂಪನಿಗಳ ಆರ್ಥಿಕ ಸ್ಥಿತಿ ಹೇಗಿದೆ ಎಂಬ ಮಾಹಿತಿಯನ್ನು ಇದೇ 18ರೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ.</p>.<p>ಹಣ ಪಾವತಿಸಲು ಖಾಸಗಿ ಕಂಪನಿಗಳಿಗೆ 20 ವರ್ಷದ ಅವಧಿ ನೀಡಬಹುದು ಎಂದು ಸರ್ಕಾರ ಹೇಳಿದೆ. ಆದರೆ, ಇದು ಬಹಳ ದೀರ್ಘವಾದ ಅವಧಿ ಎಂದು ಪೀಠವು ಅಭಿಪ್ರಾಯಪಟ್ಟಿದೆ.</p>.<p>ಲೆಕ್ಕಾಚಾರ ಪ್ರಕಾರ ಎಷ್ಟು ಪಾವತಿಸಬೇಕಿತ್ತೋ ಅಷ್ಟನ್ನೂ ಪಾವತಿಸಲಾಗಿದೆ ಎಂದು ಏರ್ಟೆಲ್ ತಿಳಿಸಿದೆ.</p>.<p>ಸಾವಿರಾರು ಕೋಟಿ ರೂಪಾಯಿ ಕೊಟ್ಟು ಪರವಾನಗಿ ಮತ್ತು ತರಂಗಾಂತರ ಪಡೆದುಕೊಳ್ಳಲಾಗಿದೆ. ಎಜಿಆರ್ ಪಾವತಿ ಸಾಧ್ಯವಾಗದಿದ್ದರೆ ಪರವಾನಗಿಯನ್ನೇ ರದ್ದು ಮಾಡಬಹುದು. ನಮ್ಮಲ್ಲಿ ಸಂಬಳ ನೀಡುವುದಕ್ಕೇ ಹಣ ಇಲ್ಲ ಎಂದು ವೊಡಾಫೋನ್ ಪರ ವಕೀಲರು ಹೇಳಿದರು.</p>.<p>‘ಸರ್ಕಾರಕ್ಕೆ ಹಣ ಬರುವಂತೆ ನಾವು ನೋಡಿಕೊಳ್ಳಲೇಬೇಕು’ ಎಂದು ಪೀಠ ಇದಕ್ಕೆ ಪ್ರತಿಕ್ರಿಯೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>