<p><strong>ತಿರುವನಂತಪುರ</strong>: ಆನ್ಲೈನ್ ಕ್ಲಾಸ್ ಮಿಸ್ ಮಾಡಿಕೊಂಡದ್ದಕ್ಕೆ ಮನನೊಂದ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.</p>.<p>ಮನೆಯಲ್ಲಿ ಟಿವಿ ಮತ್ತು ಸ್ಮಾರ್ಟ್ಫೋನ್ ಇಲ್ಲದಿರುವುದರಿಂದವಿದ್ಯಾರ್ಥಿನಿಯು ಆನ್ಲೈನ್ ಕ್ಲಾಸ್ ಮಿಸ್ ಮಾಡಿಕೊಂಡಿದ್ದು, ಇದು ಆತ್ಮಹತ್ಯೆ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.</p>.<p>ತನ್ನ ಮನೆ ಎದುರು ಇರುವಖಾಲಿ ಮನೆಯಲ್ಲಿ ಆತ್ಮಹತ್ಮೆ ಮಾಡಿಕೊಂಡಿರುವ, ಬಾಲಕಿಯನ್ನು ದೇವಿಕಾ ಬಾಲಕೃಷ್ಣನ್ (14) ಎಂದು ಗುರುತಿಸಲಾಗಿದೆ.</p>.<p>ಈ ಸಂಬಂಧ ಪೊಲೀಸರು ‘ಅಸ್ವಾಭಾವಿಕ ಸಾವು’ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಕೆಯ ಕೊಠಡಿಯಲ್ಲಿ ಮರಣ ಪತ್ರ ಸಿಕ್ಕಿದ್ದು, ಅದರಲ್ಲಿ ‘ನಾನು ಹೊರಟೆ’ ಎಂದು ಬರೆಯಲಾಗಿದೆ.</p>.<p>ಆಕೆಯ ತಂದೆ ಬಾಲಕೃಷ್ಟನ್ ದಿನಗೂಲಿ ಕಾರ್ಮಿಕರಾಗಿದ್ದು, ಆನ್ಲೈನ್ ತರಗತಿಗೆ ಹಾಜರಾಗಲು ಸಾಧ್ಯವಾಗದೇ ಇದ್ದುದರಿಂದ ದೇವಿಕಾ ಖಿನ್ನತೆಗೊಳಗಾಗಿದ್ದಳು ಎಂದು ಹೇಳಿದ್ದಾರೆ.</p>.<p>‘ಆನ್ಲೈನ್ ತರಗತಿಯಲ್ಲಿ ಭಾಗವಹಿಸುವ ಸಲುವಾಗಿಅವಳು ಟಿವಿ ರಿಪೇರಿ ಮಾಡಿಸುವಂತೆ ನಮಗೆ ಹೇಳುತ್ತಿದ್ದಳು. ಆದರೆ, ಅದಕ್ಕಾಗಿ ಮತ್ತು ಸ್ಮಾರ್ಟ್ಫೋನ್ ಕೊಂಡುಕೊಳ್ಳಲು ನಮ್ಮ ಬಳಿ ಹಣವಿರಲಿಲ್ಲ’ ಎಂದೂ ಪೊಲೀಸರೆದುರುನೋವು ತೋಡಿಕೊಂಡಿದ್ದಾರೆ.</p>.<p>ತನಿಖೆಪ್ರಗತಿಯಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ</strong>: ಆನ್ಲೈನ್ ಕ್ಲಾಸ್ ಮಿಸ್ ಮಾಡಿಕೊಂಡದ್ದಕ್ಕೆ ಮನನೊಂದ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.</p>.<p>ಮನೆಯಲ್ಲಿ ಟಿವಿ ಮತ್ತು ಸ್ಮಾರ್ಟ್ಫೋನ್ ಇಲ್ಲದಿರುವುದರಿಂದವಿದ್ಯಾರ್ಥಿನಿಯು ಆನ್ಲೈನ್ ಕ್ಲಾಸ್ ಮಿಸ್ ಮಾಡಿಕೊಂಡಿದ್ದು, ಇದು ಆತ್ಮಹತ್ಯೆ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.</p>.<p>ತನ್ನ ಮನೆ ಎದುರು ಇರುವಖಾಲಿ ಮನೆಯಲ್ಲಿ ಆತ್ಮಹತ್ಮೆ ಮಾಡಿಕೊಂಡಿರುವ, ಬಾಲಕಿಯನ್ನು ದೇವಿಕಾ ಬಾಲಕೃಷ್ಣನ್ (14) ಎಂದು ಗುರುತಿಸಲಾಗಿದೆ.</p>.<p>ಈ ಸಂಬಂಧ ಪೊಲೀಸರು ‘ಅಸ್ವಾಭಾವಿಕ ಸಾವು’ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಕೆಯ ಕೊಠಡಿಯಲ್ಲಿ ಮರಣ ಪತ್ರ ಸಿಕ್ಕಿದ್ದು, ಅದರಲ್ಲಿ ‘ನಾನು ಹೊರಟೆ’ ಎಂದು ಬರೆಯಲಾಗಿದೆ.</p>.<p>ಆಕೆಯ ತಂದೆ ಬಾಲಕೃಷ್ಟನ್ ದಿನಗೂಲಿ ಕಾರ್ಮಿಕರಾಗಿದ್ದು, ಆನ್ಲೈನ್ ತರಗತಿಗೆ ಹಾಜರಾಗಲು ಸಾಧ್ಯವಾಗದೇ ಇದ್ದುದರಿಂದ ದೇವಿಕಾ ಖಿನ್ನತೆಗೊಳಗಾಗಿದ್ದಳು ಎಂದು ಹೇಳಿದ್ದಾರೆ.</p>.<p>‘ಆನ್ಲೈನ್ ತರಗತಿಯಲ್ಲಿ ಭಾಗವಹಿಸುವ ಸಲುವಾಗಿಅವಳು ಟಿವಿ ರಿಪೇರಿ ಮಾಡಿಸುವಂತೆ ನಮಗೆ ಹೇಳುತ್ತಿದ್ದಳು. ಆದರೆ, ಅದಕ್ಕಾಗಿ ಮತ್ತು ಸ್ಮಾರ್ಟ್ಫೋನ್ ಕೊಂಡುಕೊಳ್ಳಲು ನಮ್ಮ ಬಳಿ ಹಣವಿರಲಿಲ್ಲ’ ಎಂದೂ ಪೊಲೀಸರೆದುರುನೋವು ತೋಡಿಕೊಂಡಿದ್ದಾರೆ.</p>.<p>ತನಿಖೆಪ್ರಗತಿಯಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>