ಚುನಾವಣಾ ಪ್ರಚಾರದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ವರುಣ್, ಈ ಬಾರಿ ನೀವು ಭಾರತ ಮಾತೆಗೆ ಮತ ನೀಡಬೇಕು. ನನ್ನ ಅಮ್ಮ ಚುನಾವಣೆ ಸ್ಪರ್ಧಿಸುತ್ತಿದ್ದಾರೆ. ಅವರು ಒಳ್ಳೆಯ ವ್ಯಕ್ತಿ, ಮಾನವೀಯತೆಯಲ್ಲಿ ನಂಬಿಕೆ ಇಟ್ಟವರು, ಆಕೆ ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಕಳೆದ 35 ವರ್ಷಗಳಲ್ಲಿ ಅವಳ ಬಗ್ಗೆ ಯಾವುದೇ ಕೆಟ್ಟ ಅಭಿಪ್ರಾಯ ಕೇಳಿ ಬಂದಿಲ್ಲ.ಆದರೆ ನಾನು ಭಾರತಮಾತೆಯ ಪರವಾಗಿ ಮತಯಾಚನೆಗೆ ಬಂದಿದ್ದೇನೆಯೇ ಹೊರತು ಅಮ್ಮನ ಪರವಾಗಿ ಅಲ್ಲ,.ನೀವು ಭಾರತಮಾತೆಯ ಪರವಾಗಿ ಮತನೀಡಲು ಸಿದ್ಧರಿದ್ದೀರಾ? ಎಂದು ಕೇಳಿದಾಗ ಸಭಿಕರು, ನಾವು ಸಿದ್ಧ ಎಂದು ಕೂಗಿದ್ದಾರೆ.