ರಾಜ್ಯದ ಒಳಗಿನಿಂದ ಜಿಲ್ಲೆ ಪ್ರವೇಶಿಸುವುದಕ್ಕೂ ನಿರ್ಬಂಧ ಹೇರಲಾಗಿದೆ. ಹೆಜಮಾಡಿ ಟೋಲ್ ಗೇಟ್, ಬಿ.ಸಿ.ರೋಡ್, ಸಂಪಾಜೆ ಹೆದ್ದಾರಿ ಸೇರಿದಂತೆ ಹಲವು ಕಡೆಗಳಲ್ಲಿ ಪೊಲೀಸ್ ತನಿಖಾ ಠಾಣೆಗಳನ್ನು ತೆರೆಯಲಾಗಿದೆ. ತುರ್ತು ಉದ್ದೇಶಕ್ಕೆ ಜಿಲ್ಲೆಯೊಳಕ್ಕೆ ಬರುವ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಅನಗತ್ಯವಾಗಿ ಜಿಲ್ಲೆಗೆ ಬರಲು ಯತ್ನಿಸುವವರನ್ನು ಅಲ್ಲಿಯೇ ತಡೆದು, ವಾಪಸ್ ಕಳುಹಿಸಲಾಗುತ್ತಿದೆ.