<p><strong>ಬೆಂಗಳೂರು:</strong> ‘ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಕೈಗೊಳ್ಳುತ್ತಿರುವ ಅಭಿವೃದ್ಧಿ ಯೋಜನೆಗಳಿಂದಾಗಿ 15 ಲಕ್ಷಕ್ಕೂ ಹೆಚ್ಚು ಮರಗಳು ಬಲಿಯಾಗಲಿವೆ’ ಎಂದುಯುನೈಟೆಡ್ ಕನ್ಸರ್ವೇಷನ್ ಮೂವ್ಮೆಂಟ್ನ ಪ್ರಮುಖ ಪರಿಸರವಾದಿ ಸುರೇಶ್ ಹೆಬ್ಳೀಕರ್ ಕಳವಳ ವ್ಯಕ್ತಪಡಿಸಿದರು.</p>.<p>‘ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಒಟ್ಟು 35 ಬೃಹತ್ ಯೋಜನೆಗಳು ಅನುಷ್ಠಾನಕ್ಕೆ ಬರುತ್ತಿವೆ. ಹೀಗಾದರೆ ವ್ಯಾಪಕವಾಗಿ ಅರಣ್ಯ ನಾಶವಾಗಲಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದರು.</p>.<p>‘ಯೋಜನೆಯ ಪ್ರಸ್ತಾವ ಆದಾಗಲೇ ಸಾವಿರಾರು ಮರಗಳನ್ನು ಕಡಿಯಲಾಗುತ್ತದೆ. ಮುಂದೆ ಅನುಷ್ಠಾನಕ್ಕೆ ಬಂದಾಗ ಇನ್ನಷ್ಟು ಮರಗಳು ಬಲಿಯಾಗಲಿವೆ. ಹೀಗಾದರೆ ಪಶ್ಚಿಮಘಟ್ಟದ ಪರಿಸ್ಥಿತಿ ಊಹಿಸಲೂ ಅಸಾಧ್ಯ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.</p>.<p>‘ಕಾಡಿನೊಂದಿಗೆ ಜನಸಂಸ್ಕೃತಿ ಬೆರೆತಿದೆ. ಆದರೆ, ಈ ಅಭಿವೃದ್ಧಿ ಯೋಜನೆಗಳು ಬರುತ್ತಿರುವ ವೇಗ ಹೇಗಿದೆಯೆಂದರೆ, ಎಲ್ಲ ಕಡೆ ಗುತ್ತಿಗೆದಾರರೇ ಕಾಣಿಸುತ್ತಿದ್ದಾರೆ.ಹೀಗೇ ಮುಂದುವರಿದರೆ ದೇಶದಲ್ಲಿರುವ ಶೇ 3ರಷ್ಟು ಅರಣ್ಯವೂ ಇಲ್ಲವಾಗಲಿದೆ’ ಎಂದು ಬೇಸರಿಸಿದರು.</p>.<p>‘ಮಲೆನಾಡು, ಪಶ್ಚಿಮಘಟ್ಟ ಪ್ರದೇಶದಲ್ಲಿ ಸಾಕಷ್ಟು ಯೋಜನೆಗಳು ಬಂದಿವೆ. ಶಿವಮೊಗ್ಗ ಜಿಲ್ಲೆಯೊಂದರಲ್ಲೇ ನಾಲ್ಕು ಅಣೆಕಟ್ಟೆಗಳು ಬಂದಿವೆ. ಇವೆಲ್ಲಾ ಅಲ್ಲಿನ ಧಾರಣಾ ಶಕ್ತಿ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ’ ಎಂದು ಸಂಘಟನೆಯ ಪ್ರಮುಖರಾದ ಸಹದೇವ್ ಹೇಳಿದರು.</p>.<p>‘ಬೆಂಗಳೂರು– ಮಂಗಳೂರು ಕೈಗಾರಿಕಾ ಕಾರಿಡಾರ್ಗಾಗಿ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆಗಾಗಿ ಸುಮಾರು 50 ಸಾವಿರ ಮರಗಳು ಬಲಿಯಾಗಲಿವೆ. ನೇತ್ರಾವತಿ ನದಿ ತಿರುವು ಯೋಜನೆಗಾಗಿ ಸುಮಾರು 1 ಲಕ್ಷ ಮರಗಳು, ತುಂಗಾ ಏತ ನೀರಾವರಿ ಯೋಜನೆಗಾಗಿ ಸುಮಾರು 50 ಸಾವಿರ ಮರಗಳು ಬಲಿಯಾಗಲಿವೆ.</p>.<p>ಆಗುಂಬೆ ತೀರ್ಥಹಳ್ಳಿ ಮಾರ್ಗವನ್ನು ಚತುಷ್ಪಥವಾಗಿಸುವ ಕಾಮಗಾರಿ ಸಾಗಿದೆ. ಸೋಮೇಶ್ವರ ಅಭಯಾರಣ್ಯ ಪ್ರದೇಶಕ್ಕೆ ಧಕ್ಕೆಯಾಗಲಿದೆ. ಮಡಿಕೇರಿಯಲ್ಲಿಯೂ ಬೇಕಾಬಿಟ್ಟಿ ಗುಡ್ಡ ಅಗೆದ ಕಾರಣ ಭಾರೀ ಪ್ರಮಾಣದ ಭೂಕುಸಿತ ನೋಡಬೇಕಾಯಿತು’ ಎಂದರು.</p>.<p><strong>ಜಾಗೃತಿ ರ್ಯಾಲಿ 16ಕ್ಕೆ</strong></p>.<p>ರಾಜ್ಯದಲ್ಲಿ ಮರ ಮತ್ತು ಜಲ ರಕ್ಷಣೆಯ ಉದ್ದೇಶದಿಂದ 25 ವಿವಿಧ ಸಂಘಟನೆಗಳ ಆಶ್ರಯದಲ್ಲಿ ಫೆ. 16ರಂದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ರ್ಯಾಲಿ ನಡೆಯಲಿದೆ ಎಂದು ಸುರೇಶ್ಹೆಬ್ಳೀಕರ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಕೈಗೊಳ್ಳುತ್ತಿರುವ ಅಭಿವೃದ್ಧಿ ಯೋಜನೆಗಳಿಂದಾಗಿ 15 ಲಕ್ಷಕ್ಕೂ ಹೆಚ್ಚು ಮರಗಳು ಬಲಿಯಾಗಲಿವೆ’ ಎಂದುಯುನೈಟೆಡ್ ಕನ್ಸರ್ವೇಷನ್ ಮೂವ್ಮೆಂಟ್ನ ಪ್ರಮುಖ ಪರಿಸರವಾದಿ ಸುರೇಶ್ ಹೆಬ್ಳೀಕರ್ ಕಳವಳ ವ್ಯಕ್ತಪಡಿಸಿದರು.</p>.<p>‘ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಒಟ್ಟು 35 ಬೃಹತ್ ಯೋಜನೆಗಳು ಅನುಷ್ಠಾನಕ್ಕೆ ಬರುತ್ತಿವೆ. ಹೀಗಾದರೆ ವ್ಯಾಪಕವಾಗಿ ಅರಣ್ಯ ನಾಶವಾಗಲಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದರು.</p>.<p>‘ಯೋಜನೆಯ ಪ್ರಸ್ತಾವ ಆದಾಗಲೇ ಸಾವಿರಾರು ಮರಗಳನ್ನು ಕಡಿಯಲಾಗುತ್ತದೆ. ಮುಂದೆ ಅನುಷ್ಠಾನಕ್ಕೆ ಬಂದಾಗ ಇನ್ನಷ್ಟು ಮರಗಳು ಬಲಿಯಾಗಲಿವೆ. ಹೀಗಾದರೆ ಪಶ್ಚಿಮಘಟ್ಟದ ಪರಿಸ್ಥಿತಿ ಊಹಿಸಲೂ ಅಸಾಧ್ಯ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.</p>.<p>‘ಕಾಡಿನೊಂದಿಗೆ ಜನಸಂಸ್ಕೃತಿ ಬೆರೆತಿದೆ. ಆದರೆ, ಈ ಅಭಿವೃದ್ಧಿ ಯೋಜನೆಗಳು ಬರುತ್ತಿರುವ ವೇಗ ಹೇಗಿದೆಯೆಂದರೆ, ಎಲ್ಲ ಕಡೆ ಗುತ್ತಿಗೆದಾರರೇ ಕಾಣಿಸುತ್ತಿದ್ದಾರೆ.ಹೀಗೇ ಮುಂದುವರಿದರೆ ದೇಶದಲ್ಲಿರುವ ಶೇ 3ರಷ್ಟು ಅರಣ್ಯವೂ ಇಲ್ಲವಾಗಲಿದೆ’ ಎಂದು ಬೇಸರಿಸಿದರು.</p>.<p>‘ಮಲೆನಾಡು, ಪಶ್ಚಿಮಘಟ್ಟ ಪ್ರದೇಶದಲ್ಲಿ ಸಾಕಷ್ಟು ಯೋಜನೆಗಳು ಬಂದಿವೆ. ಶಿವಮೊಗ್ಗ ಜಿಲ್ಲೆಯೊಂದರಲ್ಲೇ ನಾಲ್ಕು ಅಣೆಕಟ್ಟೆಗಳು ಬಂದಿವೆ. ಇವೆಲ್ಲಾ ಅಲ್ಲಿನ ಧಾರಣಾ ಶಕ್ತಿ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ’ ಎಂದು ಸಂಘಟನೆಯ ಪ್ರಮುಖರಾದ ಸಹದೇವ್ ಹೇಳಿದರು.</p>.<p>‘ಬೆಂಗಳೂರು– ಮಂಗಳೂರು ಕೈಗಾರಿಕಾ ಕಾರಿಡಾರ್ಗಾಗಿ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆಗಾಗಿ ಸುಮಾರು 50 ಸಾವಿರ ಮರಗಳು ಬಲಿಯಾಗಲಿವೆ. ನೇತ್ರಾವತಿ ನದಿ ತಿರುವು ಯೋಜನೆಗಾಗಿ ಸುಮಾರು 1 ಲಕ್ಷ ಮರಗಳು, ತುಂಗಾ ಏತ ನೀರಾವರಿ ಯೋಜನೆಗಾಗಿ ಸುಮಾರು 50 ಸಾವಿರ ಮರಗಳು ಬಲಿಯಾಗಲಿವೆ.</p>.<p>ಆಗುಂಬೆ ತೀರ್ಥಹಳ್ಳಿ ಮಾರ್ಗವನ್ನು ಚತುಷ್ಪಥವಾಗಿಸುವ ಕಾಮಗಾರಿ ಸಾಗಿದೆ. ಸೋಮೇಶ್ವರ ಅಭಯಾರಣ್ಯ ಪ್ರದೇಶಕ್ಕೆ ಧಕ್ಕೆಯಾಗಲಿದೆ. ಮಡಿಕೇರಿಯಲ್ಲಿಯೂ ಬೇಕಾಬಿಟ್ಟಿ ಗುಡ್ಡ ಅಗೆದ ಕಾರಣ ಭಾರೀ ಪ್ರಮಾಣದ ಭೂಕುಸಿತ ನೋಡಬೇಕಾಯಿತು’ ಎಂದರು.</p>.<p><strong>ಜಾಗೃತಿ ರ್ಯಾಲಿ 16ಕ್ಕೆ</strong></p>.<p>ರಾಜ್ಯದಲ್ಲಿ ಮರ ಮತ್ತು ಜಲ ರಕ್ಷಣೆಯ ಉದ್ದೇಶದಿಂದ 25 ವಿವಿಧ ಸಂಘಟನೆಗಳ ಆಶ್ರಯದಲ್ಲಿ ಫೆ. 16ರಂದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ರ್ಯಾಲಿ ನಡೆಯಲಿದೆ ಎಂದು ಸುರೇಶ್ಹೆಬ್ಳೀಕರ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>