<p><strong>ಗೋಕರ್ಣ: </strong>ಕೊರೊನಾ ವೈರಸ್ ಹರಡುವುದನ್ನು ತಡೆಯಲು ದೇಶದಲ್ಲಿ ಲಾಕ್ಡೌನ್ ಘೋಷಣೆಯಾದಬಳಿಕ ಗೋಕರ್ಣದಲ್ಲಿ ಬಾಕಿಯಾಗಿದ್ದರಷ್ಯಾ ಪ್ರವಾಸಿಗರನ್ನು ಶುಕ್ರವಾರ ತವರಿಗೆ ಕಳುಹಿಸಿಕೊಡಲಾಗಿದೆ. ಗೋವಾದಿಂದ ವಿಶೇಷ ವಿಮಾನದಲ್ಲಿ 22 ಮಂದಿ ತಮ್ಮ ದೇಶಕ್ಕೆ ಪ್ರಯಾಣಿಸಿದ್ದಾರೆ.</p>.<p>ಪ್ರವಾಸೋದ್ಯಮ ಇಲಾಖೆ ಹಾಗೂ ಉತ್ತರ ಕನ್ನಡದ ಜಿಲ್ಲಾಡಳಿತದ ಸಹಾಯದಿಂದ ಗೋಕರ್ಣ ಪೊಲೀಸರು ಈ ವ್ಯವಸ್ಥೆ ಮಾಡಿದ್ದಾರೆ.ಗೋಕರ್ಣದಿಂದಅವರನ್ನು ರಾಜ್ಯ ರಸ್ತೆ ಸಾರಿಗೆ ಬಸ್ಮೂಲಕ ಗೋವಾ ವಿಮಾನ ನಿಲ್ದಾಣಕ್ಕೆಕಳುಹಿಸಿ ಕೊಡಲಾಯಿತು. ರಾತ್ರಿ 9ಕ್ಕೆ ರಷ್ಯಾದ ವಿಶೇಷ ವಿಮಾನವು ಪ್ರವಾಸಿಗರನ್ನು ಕರೆದುಕೊಂಡು ಪ್ರಯಾಣಿಸಲಿದೆ. ಇದಕ್ಕೂ ಮೊದಲು ಎಲ್ಲ ಪ್ರವಾಸಿಗರ ಆರೋಗ್ಯ ತಪಾಸಣೆಯು ವಿಮಾನ ನಿಲ್ದಾಣದಲ್ಲಿ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಕಳೆದ ವಾರವೇ 100ಕ್ಕೂ ಹೆಚ್ಚು ರಷ್ಯನ್ನರು ತವರಿಗೆ ಹೊರಡಲು ತಯಾರಾಗಿದ್ದರು. ಆದರೆ, ಕಾರಣಾಂತರದಿಂದ ಅವರ ಪ್ರವಾಸ ರದ್ದಾಗಿತ್ತು. ಸ್ಥಳೀಯ ಠಾಣೆಯ ಪೊಲೀಸರು ಹಾಗೂ ಪ್ರವಾಸೋದ್ಯಮ ಇಲಾಖೆಯ ಕೃಷ್ಣಾ ನಾಯ್ಕ ಹೆಚ್ಚಿನ ಮುತುವರ್ಜಿ ವಹಿಸಿ ವಿದೇಶಿ ಪ್ರವಾಸಿಗರಿಗೆ ನೆರವಾದರು.</p>.<p>ಈ ಸಂದರ್ಭದಲ್ಲಿ ಕುಮಟಾ ಸಿ.ಪಿ.ಐ. ಪರಮೇಶ್ವರ ಗುನಗ, ಗೋಕರ್ಣ ಪಿ.ಎಸ್.ಐ ನವೀನ ನಾಯ್ಕ, ಸಿಬ್ಬಂದಿ ಶಿವಾನಂದ ಗೌಡ, ರಾಜೇಶ ನಾಯ್ಕ, ನಾಗರಾಜ ಪಟಗಾರ, ನಾಗರಾಜ ನಾಯ್ಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಕರ್ಣ: </strong>ಕೊರೊನಾ ವೈರಸ್ ಹರಡುವುದನ್ನು ತಡೆಯಲು ದೇಶದಲ್ಲಿ ಲಾಕ್ಡೌನ್ ಘೋಷಣೆಯಾದಬಳಿಕ ಗೋಕರ್ಣದಲ್ಲಿ ಬಾಕಿಯಾಗಿದ್ದರಷ್ಯಾ ಪ್ರವಾಸಿಗರನ್ನು ಶುಕ್ರವಾರ ತವರಿಗೆ ಕಳುಹಿಸಿಕೊಡಲಾಗಿದೆ. ಗೋವಾದಿಂದ ವಿಶೇಷ ವಿಮಾನದಲ್ಲಿ 22 ಮಂದಿ ತಮ್ಮ ದೇಶಕ್ಕೆ ಪ್ರಯಾಣಿಸಿದ್ದಾರೆ.</p>.<p>ಪ್ರವಾಸೋದ್ಯಮ ಇಲಾಖೆ ಹಾಗೂ ಉತ್ತರ ಕನ್ನಡದ ಜಿಲ್ಲಾಡಳಿತದ ಸಹಾಯದಿಂದ ಗೋಕರ್ಣ ಪೊಲೀಸರು ಈ ವ್ಯವಸ್ಥೆ ಮಾಡಿದ್ದಾರೆ.ಗೋಕರ್ಣದಿಂದಅವರನ್ನು ರಾಜ್ಯ ರಸ್ತೆ ಸಾರಿಗೆ ಬಸ್ಮೂಲಕ ಗೋವಾ ವಿಮಾನ ನಿಲ್ದಾಣಕ್ಕೆಕಳುಹಿಸಿ ಕೊಡಲಾಯಿತು. ರಾತ್ರಿ 9ಕ್ಕೆ ರಷ್ಯಾದ ವಿಶೇಷ ವಿಮಾನವು ಪ್ರವಾಸಿಗರನ್ನು ಕರೆದುಕೊಂಡು ಪ್ರಯಾಣಿಸಲಿದೆ. ಇದಕ್ಕೂ ಮೊದಲು ಎಲ್ಲ ಪ್ರವಾಸಿಗರ ಆರೋಗ್ಯ ತಪಾಸಣೆಯು ವಿಮಾನ ನಿಲ್ದಾಣದಲ್ಲಿ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಕಳೆದ ವಾರವೇ 100ಕ್ಕೂ ಹೆಚ್ಚು ರಷ್ಯನ್ನರು ತವರಿಗೆ ಹೊರಡಲು ತಯಾರಾಗಿದ್ದರು. ಆದರೆ, ಕಾರಣಾಂತರದಿಂದ ಅವರ ಪ್ರವಾಸ ರದ್ದಾಗಿತ್ತು. ಸ್ಥಳೀಯ ಠಾಣೆಯ ಪೊಲೀಸರು ಹಾಗೂ ಪ್ರವಾಸೋದ್ಯಮ ಇಲಾಖೆಯ ಕೃಷ್ಣಾ ನಾಯ್ಕ ಹೆಚ್ಚಿನ ಮುತುವರ್ಜಿ ವಹಿಸಿ ವಿದೇಶಿ ಪ್ರವಾಸಿಗರಿಗೆ ನೆರವಾದರು.</p>.<p>ಈ ಸಂದರ್ಭದಲ್ಲಿ ಕುಮಟಾ ಸಿ.ಪಿ.ಐ. ಪರಮೇಶ್ವರ ಗುನಗ, ಗೋಕರ್ಣ ಪಿ.ಎಸ್.ಐ ನವೀನ ನಾಯ್ಕ, ಸಿಬ್ಬಂದಿ ಶಿವಾನಂದ ಗೌಡ, ರಾಜೇಶ ನಾಯ್ಕ, ನಾಗರಾಜ ಪಟಗಾರ, ನಾಗರಾಜ ನಾಯ್ಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>