<p><strong>ಬೆಂಗಳೂರು:</strong> ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದ ಬಳ್ಳಾರಿ ಆರ್ಟಿಒ, ಹುಮನಾಬಾದ್, ದೇವದುರ್ಗ, ಗುಂಡ್ಲುಪೇಟೆ, ಪಾಂಡವಪುರ ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಸೋಮವಾರ ಬೆಳಿಗ್ಗೆ ಏಕಕಾಲಕ್ಕೆ ದಾಳಿ ನಡೆಸಿ ಒಟ್ಟು ₹ 5.50 ಲಕ್ಷ ಲಂಚದ ಹಣ ವಶಪಡಿಸಿಕೊಂಡಿದ್ದಾರೆ.</p>.<p>ವಿವಿಧ ತಂಡಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿರುವ ಡಿವೈಎಸ್ಪಿ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಬಳ್ಳಾರಿ ಆರ್ಟಿಒ ಕಚೇರಿಯಿಂದ ಸುಮಾರು ₹ 4 ಲಕ್ಷ ರೂಪಾಯಿ ಜಪ್ತಿ ಮಾಡಿದ್ದಾರೆ. 31 ಮಧ್ಯವರ್ತಿಗಳು, ಒಬ್ಬರು ಮೋಟಾರು ವಾಹನ ಇನ್ಸ್ಪೆಕ್ಟರ್ ಬಳಿ ಈ ಹಣ ಹಾಗೂ ಡಿ.ಎಲ್, ಆರ್.ಸಿ ಮತ್ತಿತರ ದಾಖಲೆಗಳು ಸಿಕ್ಕಿವೆ ಎಂದು ಈಶಾನ್ಯ ವಿಭಾಗದ ಎಸಿಬಿ ಎಸ್ಪಿ ವಿ.ಎಂ ಜ್ಯೋತಿ ತಿಳಿಸಿದರು.</p>.<p>ಹುಮನಾಬಾದ್ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ₹ 18,500 ಮತ್ತು ದೇವದುರ್ಗ ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ₹ 28 ಸಾವಿರ ಅಕ್ರಮ ಹಣ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಗುಂಡ್ಲುಪೇಟೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ₹ 52 ಸಾವಿರ, ಪಾಂಡವಪುರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ₹ 50 ಸಾವಿರ ಲಂಚದ ಹಣ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿದೆ.</p>.<p>ದಾಳಿ ಸಂಬಂಧ ಯಾರನ್ನೂ ಬಂಧಿಸಿಲ್ಲ. ಆದರೆ, ಕರೆದಾಗ ವಿಚಾರಣೆಗೆ ಹಾಜರಾಗುವಂತೆ ಪಾಂಡವಪುರ ಸಬ್ ರಿಜಿಸ್ಟ್ರಾರ್ ರೂಪಾ ಹಾಗೂ ಗುಂಡ್ಲುಪೇಟೆ ಸಬ್ ರಿಜಿಸ್ಟ್ರಾರ್ ನಾಗೇಶ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಎಸಿಬಿ ದಕ್ಷಿಣ ವಿಭಾಗದ ಎಸ್ಪಿ ಜೆ.ಕೆ. ರಶ್ಮಿಹೇಳಿದರು.</p>.<p>ಆಸ್ತಿ ನೋಂದಣಿ, ಋಣ ಭಾರ ಪತ್ರ ಖರೀದಿ, ವಾಹನ ನೋಂದಣಿ, ಡಿ.ಎಲ್ ಮತ್ತಿತರ ಕೆಲಸಗಳಿಗೆ ಸಾರ್ವಜನಿಕರಿಂದ ಲಂಚ ಪಡೆಯಲಾಗುತಿತ್ತು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ. ಶೋಧ ಮುಂದುವರಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದ ಬಳ್ಳಾರಿ ಆರ್ಟಿಒ, ಹುಮನಾಬಾದ್, ದೇವದುರ್ಗ, ಗುಂಡ್ಲುಪೇಟೆ, ಪಾಂಡವಪುರ ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಸೋಮವಾರ ಬೆಳಿಗ್ಗೆ ಏಕಕಾಲಕ್ಕೆ ದಾಳಿ ನಡೆಸಿ ಒಟ್ಟು ₹ 5.50 ಲಕ್ಷ ಲಂಚದ ಹಣ ವಶಪಡಿಸಿಕೊಂಡಿದ್ದಾರೆ.</p>.<p>ವಿವಿಧ ತಂಡಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿರುವ ಡಿವೈಎಸ್ಪಿ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಬಳ್ಳಾರಿ ಆರ್ಟಿಒ ಕಚೇರಿಯಿಂದ ಸುಮಾರು ₹ 4 ಲಕ್ಷ ರೂಪಾಯಿ ಜಪ್ತಿ ಮಾಡಿದ್ದಾರೆ. 31 ಮಧ್ಯವರ್ತಿಗಳು, ಒಬ್ಬರು ಮೋಟಾರು ವಾಹನ ಇನ್ಸ್ಪೆಕ್ಟರ್ ಬಳಿ ಈ ಹಣ ಹಾಗೂ ಡಿ.ಎಲ್, ಆರ್.ಸಿ ಮತ್ತಿತರ ದಾಖಲೆಗಳು ಸಿಕ್ಕಿವೆ ಎಂದು ಈಶಾನ್ಯ ವಿಭಾಗದ ಎಸಿಬಿ ಎಸ್ಪಿ ವಿ.ಎಂ ಜ್ಯೋತಿ ತಿಳಿಸಿದರು.</p>.<p>ಹುಮನಾಬಾದ್ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ₹ 18,500 ಮತ್ತು ದೇವದುರ್ಗ ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ₹ 28 ಸಾವಿರ ಅಕ್ರಮ ಹಣ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಗುಂಡ್ಲುಪೇಟೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ₹ 52 ಸಾವಿರ, ಪಾಂಡವಪುರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ₹ 50 ಸಾವಿರ ಲಂಚದ ಹಣ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿದೆ.</p>.<p>ದಾಳಿ ಸಂಬಂಧ ಯಾರನ್ನೂ ಬಂಧಿಸಿಲ್ಲ. ಆದರೆ, ಕರೆದಾಗ ವಿಚಾರಣೆಗೆ ಹಾಜರಾಗುವಂತೆ ಪಾಂಡವಪುರ ಸಬ್ ರಿಜಿಸ್ಟ್ರಾರ್ ರೂಪಾ ಹಾಗೂ ಗುಂಡ್ಲುಪೇಟೆ ಸಬ್ ರಿಜಿಸ್ಟ್ರಾರ್ ನಾಗೇಶ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಎಸಿಬಿ ದಕ್ಷಿಣ ವಿಭಾಗದ ಎಸ್ಪಿ ಜೆ.ಕೆ. ರಶ್ಮಿಹೇಳಿದರು.</p>.<p>ಆಸ್ತಿ ನೋಂದಣಿ, ಋಣ ಭಾರ ಪತ್ರ ಖರೀದಿ, ವಾಹನ ನೋಂದಣಿ, ಡಿ.ಎಲ್ ಮತ್ತಿತರ ಕೆಲಸಗಳಿಗೆ ಸಾರ್ವಜನಿಕರಿಂದ ಲಂಚ ಪಡೆಯಲಾಗುತಿತ್ತು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ. ಶೋಧ ಮುಂದುವರಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>