<p><strong>ಮಡಿಕೇರಿ:</strong> ನೈಜ ಬುಡಕಟ್ಟು ಹೊಂದಿರುವ ಕೊಡವ ಸಮುದಾಯದವರನ್ನು ಎಸ್.ಟಿ ಪಟ್ಟಿಗೆ ಸೇರಬೇಕಾದ ತುರ್ತು ಅವಶ್ಯಕತೆ ಸರ್ಕಾರಕ್ಕಿದೆ ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಇಲ್ಲಿ ಹೇಳಿದರು.</p>.<p>ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಕಡಗದಾಳು ಕ್ಯಾಪಿಟಲ್ ವಿಲೇಜ್ನಲ್ಲಿ ಶನಿವಾರ ನಡೆದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>‘ಕಾಶ್ಮೀರ ಹೇಗೆ ಭಾರತದ ಕಿರೀಟವೋ, ಹಾಗೆಯೇ ಕೊಡವರು ಮತ್ತವರ ನೆಲ ಕರ್ನಾಟಕದ ಕಣ್ಮಣಿ. ಇವರನ್ನು ಎಸ್.ಟಿ ಪಟ್ಟಿಗೆ ಸೇರಿಸಿ ಉಳಿಸಿ ಸಂರಕ್ಷಿಸುವುದು ಸರ್ಕಾರಗಳ ಜವಾಬ್ದಾರಿ. ಪಕ್ಷಭೇದ ಮರೆತು ಕೊಡವರು ಒಕ್ಕೊರಲಿನಿಂದ ಸಿ.ಎನ್.ಸಿ ಬೆಂಬಲಿಸಬೇಕೆಂದು’ ಅವರು ಮನವಿ ಮಾಡಿದರು.</p>.<p>ಕೊಡವರಿಗೆ ಅಕ್ಷರ ಜ್ಞಾನ ಇರಬಹುದು. ಆದರೆ, ಇಂದಿನ ಸಂವಿಧಾನಿಕ ಶಿಕ್ಷಣವಿಲ್ಲ. ಅಕ್ಷರ ಜ್ಞಾನವಿದ್ದು ಅವಕಾಶ ವಂಚಿತರಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಮಾತನಾಡಿ, ದೇಶದಲ್ಲಿ 655 ಸಮುದಾಯವನ್ನು ಬುಡಕಟ್ಟು ವರ್ಗವೆಂದು ಗುರುತಿಸಲಾಗಿದೆ. ಇವರಲ್ಲಿ 330 ಬುಡಕಟ್ಟನ್ನು ಎಸ್ಟಿ ಪಟ್ಟಿಯಲ್ಲಿ ಸೇರಿಸಿ ರಾಜ್ಯಾಂಗ ಭದ್ರತೆ ಕಲ್ಪಿಸಲಾಗಿದೆ. ಇದರಲ್ಲಿ ಕೊಡವರು ಸೇರುವ ಅವಕಾಶವಿದೆ ಎಂದು ಸ್ಪಷ್ಟಪಡಿಸಿದರು.</p>.<p>ಕೊಡಗಿಗೆ ಸೀಮಿತವಾದ ಈ ಸಮುದಾಯವನ್ನು ಎಸ್.ಟಿ ಪಟ್ಟಿಗೆ ಸೇರಿಸುವ ಮೂಲಕ ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ನಾಚಪ್ಪ ಅವರ ನೇತೃತ್ವದ ಸುದೀರ್ಘ ಹೋರಾಟಕ್ಕೆ ಕೊಡವರು ಬೆಂಬಲಿಸಬೇಕು ಎಂದು ಕೋರಿದರು.</p>.<p>ಅಂಚೆಟ್ಟಿರ ಮನು ಮುದ್ದಪ್ಪ ಅವರ ನೇತೃತ್ವದ ಮುಕ್ಕೋಡ್ಲು ವ್ಯಾಲಿ ಡ್ಯೂ ಅಸೋಸಿಯೇಷನ್ ಅವರಿಂದ ಕತ್ತಿಯಾಟ್ ಪ್ರದರ್ಶನ ನಡೆಯಿತು.</p>.<p>ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಬ್ರಿಜೇಷ್ ಕಾಳಪ್ಪ, ಚೇಂದಂಡ ಜಮ್ಸಿ ಪೊನ್ನಪ್ಪ, ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ನೈಜ ಬುಡಕಟ್ಟು ಹೊಂದಿರುವ ಕೊಡವ ಸಮುದಾಯದವರನ್ನು ಎಸ್.ಟಿ ಪಟ್ಟಿಗೆ ಸೇರಬೇಕಾದ ತುರ್ತು ಅವಶ್ಯಕತೆ ಸರ್ಕಾರಕ್ಕಿದೆ ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಇಲ್ಲಿ ಹೇಳಿದರು.</p>.<p>ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಕಡಗದಾಳು ಕ್ಯಾಪಿಟಲ್ ವಿಲೇಜ್ನಲ್ಲಿ ಶನಿವಾರ ನಡೆದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>‘ಕಾಶ್ಮೀರ ಹೇಗೆ ಭಾರತದ ಕಿರೀಟವೋ, ಹಾಗೆಯೇ ಕೊಡವರು ಮತ್ತವರ ನೆಲ ಕರ್ನಾಟಕದ ಕಣ್ಮಣಿ. ಇವರನ್ನು ಎಸ್.ಟಿ ಪಟ್ಟಿಗೆ ಸೇರಿಸಿ ಉಳಿಸಿ ಸಂರಕ್ಷಿಸುವುದು ಸರ್ಕಾರಗಳ ಜವಾಬ್ದಾರಿ. ಪಕ್ಷಭೇದ ಮರೆತು ಕೊಡವರು ಒಕ್ಕೊರಲಿನಿಂದ ಸಿ.ಎನ್.ಸಿ ಬೆಂಬಲಿಸಬೇಕೆಂದು’ ಅವರು ಮನವಿ ಮಾಡಿದರು.</p>.<p>ಕೊಡವರಿಗೆ ಅಕ್ಷರ ಜ್ಞಾನ ಇರಬಹುದು. ಆದರೆ, ಇಂದಿನ ಸಂವಿಧಾನಿಕ ಶಿಕ್ಷಣವಿಲ್ಲ. ಅಕ್ಷರ ಜ್ಞಾನವಿದ್ದು ಅವಕಾಶ ವಂಚಿತರಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಮಾತನಾಡಿ, ದೇಶದಲ್ಲಿ 655 ಸಮುದಾಯವನ್ನು ಬುಡಕಟ್ಟು ವರ್ಗವೆಂದು ಗುರುತಿಸಲಾಗಿದೆ. ಇವರಲ್ಲಿ 330 ಬುಡಕಟ್ಟನ್ನು ಎಸ್ಟಿ ಪಟ್ಟಿಯಲ್ಲಿ ಸೇರಿಸಿ ರಾಜ್ಯಾಂಗ ಭದ್ರತೆ ಕಲ್ಪಿಸಲಾಗಿದೆ. ಇದರಲ್ಲಿ ಕೊಡವರು ಸೇರುವ ಅವಕಾಶವಿದೆ ಎಂದು ಸ್ಪಷ್ಟಪಡಿಸಿದರು.</p>.<p>ಕೊಡಗಿಗೆ ಸೀಮಿತವಾದ ಈ ಸಮುದಾಯವನ್ನು ಎಸ್.ಟಿ ಪಟ್ಟಿಗೆ ಸೇರಿಸುವ ಮೂಲಕ ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ನಾಚಪ್ಪ ಅವರ ನೇತೃತ್ವದ ಸುದೀರ್ಘ ಹೋರಾಟಕ್ಕೆ ಕೊಡವರು ಬೆಂಬಲಿಸಬೇಕು ಎಂದು ಕೋರಿದರು.</p>.<p>ಅಂಚೆಟ್ಟಿರ ಮನು ಮುದ್ದಪ್ಪ ಅವರ ನೇತೃತ್ವದ ಮುಕ್ಕೋಡ್ಲು ವ್ಯಾಲಿ ಡ್ಯೂ ಅಸೋಸಿಯೇಷನ್ ಅವರಿಂದ ಕತ್ತಿಯಾಟ್ ಪ್ರದರ್ಶನ ನಡೆಯಿತು.</p>.<p>ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಬ್ರಿಜೇಷ್ ಕಾಳಪ್ಪ, ಚೇಂದಂಡ ಜಮ್ಸಿ ಪೊನ್ನಪ್ಪ, ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>