<p><strong>ಬೆಂಗಳೂರು: </strong>ಸುಮಲತಾ ಅವರ ಮಾರ್ಗದರ್ಶನದಲ್ಲಿ ಒಕ್ಕಲಿಗರ ಸಂಪ್ರದಾಯದಂತೆ ಕಂಠೀರವ ಸ್ಟುಡಿಯೊದಲ್ಲಿ ಅಂಬರೀಷ್ ಅವರ ಅಂತ್ಯಕ್ರಿಯೆ ನಡೆಯಲಿದೆ.</p>.<p>10 ಕೆಜಿ ತುಪ್ಪ, 250 ಕೆ.ಜಿ ಗಂಧದ ಕಟ್ಟಿಗೆ ತರಲಾಗಿದ್ದು, ಹಾಲು, ಮೊಸರು, ಪಂಚಗವ್ಯ ಬಳಕೆ ಮಾಡಲಾಗುತ್ತದೆ. ಹೂವಿನ ಅಲಂಕಾರ ಹಾಗೂ ಪಾರ್ಥಿವ ಶರೀರದ ಬಾಯಲ್ಲಿ ಚಿನ್ನದ ನಾಣ್ಯ ಇಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.</p>.<p>ಹುಣಿಸೆ, ಅತ್ತಿ, ನೀಲಗಿರಿ, ಸರ್ವೆ ಕಟ್ಟಿಗೆಗಳನ್ನೂ ತರಲಾಗಿದೆ. ಅಂತ್ಯಕ್ರಿಯೆ ಸ್ಥಳದಲ್ಲಿ ನಾಲ್ಕು ಹಂತದಲ್ಲಿ ಚಿತೆಗೆ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಸಿದ್ಧತೆ ಪೂರ್ಣಗೊಂಡಿದೆ.</p>.<p>ನಾಗೇಶ್ ದೀಕ್ಷಿತ್ ನೇತೃತ್ವದಲ್ಲಿ ಅಂತ್ಯಕ್ರಿಯೆಗೂ ಪೂರ್ವ ವಿಧಿವಿಧಾನ ಆರಂಭವಾಗಿದೆ.</p>.<p><strong>ಚಿತೆಗೆ ವೇದಿಕೆ</strong></p>.<p>* ಮೊದಲ ಹಂತ 16*16; ಒಂದೂವರೆ ಅಡಿ ಆಳದ ಗುಂಡಿ ತೆಗೆದು ಅದಕ್ಕೆ ಕಾಂಕ್ರೀಟ್ ಹಾಕಲಾಗಿದೆ<br />* ಎರಡನೆ ಹಂತದಲ್ಲಿ 16 *16 ಅಡಿ ಭೂಮಿ ಮೇಲೆ ಕಟ್ಟೆ ನಿರ್ಮಿಸಲಾಗಿದೆ<br />* ಮೂರನೇ ಹಂತದಲ್ಲಿ 11*14 ಅಡಿ (ಎರಡು ಕೋರ್ಸ್ ಇಟ್ಟಿಗೆ ಗೋಡೆ)<br />* ನಾಲ್ಕನೇ ಹಂತದಲ್ಲಿ 9*11 ಅಡಿ ಗೋಡೆ( ಚಿತೆ ಜೋಡಿಸಲು) ನಿರ್ಮಿಸಲಾಗಿದೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಸುಮಲತಾ ಅವರ ಮಾರ್ಗದರ್ಶನದಲ್ಲಿ ಒಕ್ಕಲಿಗರ ಸಂಪ್ರದಾಯದಂತೆ ಕಂಠೀರವ ಸ್ಟುಡಿಯೊದಲ್ಲಿ ಅಂಬರೀಷ್ ಅವರ ಅಂತ್ಯಕ್ರಿಯೆ ನಡೆಯಲಿದೆ.</p>.<p>10 ಕೆಜಿ ತುಪ್ಪ, 250 ಕೆ.ಜಿ ಗಂಧದ ಕಟ್ಟಿಗೆ ತರಲಾಗಿದ್ದು, ಹಾಲು, ಮೊಸರು, ಪಂಚಗವ್ಯ ಬಳಕೆ ಮಾಡಲಾಗುತ್ತದೆ. ಹೂವಿನ ಅಲಂಕಾರ ಹಾಗೂ ಪಾರ್ಥಿವ ಶರೀರದ ಬಾಯಲ್ಲಿ ಚಿನ್ನದ ನಾಣ್ಯ ಇಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.</p>.<p>ಹುಣಿಸೆ, ಅತ್ತಿ, ನೀಲಗಿರಿ, ಸರ್ವೆ ಕಟ್ಟಿಗೆಗಳನ್ನೂ ತರಲಾಗಿದೆ. ಅಂತ್ಯಕ್ರಿಯೆ ಸ್ಥಳದಲ್ಲಿ ನಾಲ್ಕು ಹಂತದಲ್ಲಿ ಚಿತೆಗೆ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಸಿದ್ಧತೆ ಪೂರ್ಣಗೊಂಡಿದೆ.</p>.<p>ನಾಗೇಶ್ ದೀಕ್ಷಿತ್ ನೇತೃತ್ವದಲ್ಲಿ ಅಂತ್ಯಕ್ರಿಯೆಗೂ ಪೂರ್ವ ವಿಧಿವಿಧಾನ ಆರಂಭವಾಗಿದೆ.</p>.<p><strong>ಚಿತೆಗೆ ವೇದಿಕೆ</strong></p>.<p>* ಮೊದಲ ಹಂತ 16*16; ಒಂದೂವರೆ ಅಡಿ ಆಳದ ಗುಂಡಿ ತೆಗೆದು ಅದಕ್ಕೆ ಕಾಂಕ್ರೀಟ್ ಹಾಕಲಾಗಿದೆ<br />* ಎರಡನೆ ಹಂತದಲ್ಲಿ 16 *16 ಅಡಿ ಭೂಮಿ ಮೇಲೆ ಕಟ್ಟೆ ನಿರ್ಮಿಸಲಾಗಿದೆ<br />* ಮೂರನೇ ಹಂತದಲ್ಲಿ 11*14 ಅಡಿ (ಎರಡು ಕೋರ್ಸ್ ಇಟ್ಟಿಗೆ ಗೋಡೆ)<br />* ನಾಲ್ಕನೇ ಹಂತದಲ್ಲಿ 9*11 ಅಡಿ ಗೋಡೆ( ಚಿತೆ ಜೋಡಿಸಲು) ನಿರ್ಮಿಸಲಾಗಿದೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>