ಉತ್ಪಾದಕರು, ವಿತರಕರ ಹಿತಾಸಕ್ತಿ ಕಾಯಲು ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ. ವಿದ್ಯುತ್ ಉತ್ಪಾದನೆ, ಖರೀದಿಯ ವೆಚ್ಚ, ನಷ್ಟಗಳು ಏನೇ ಇದ್ದರೂ ಕಾಲಕಾಲಕ್ಕೆ ಸರ್ಕಾರಗಳು ರೈತರನ್ನು ಮೆಚ್ಚಿಸಲು ಅಥವಾ ಪ್ರಾಮಾಣಿಕವಾಗಿ ರೈತರಿಗೆ ಬೆಂಬಲ ನೀಡಲು ಸಬ್ಸಿಡಿ, ಉಚಿತ ವಿದ್ಯುತ್ ನೀಡುತ್ತ ಬಂದಿವೆ. ಬಂಗಾರಪ್ಪ ಮುಖ್ಯಮಂತ್ರಿಯಾದಾಗ ಹತ್ತು ಎಚ್ಪಿವರೆಗೂ ಉಚಿತ ವಿದ್ಯುತ್ ನೀಡಿದ್ದರು. ನಂತರದ ಸರ್ಕಾರಗಳು ನಿರ್ಧಾರ ಬದಲಿಸುತ್ತ ಬಂದಿವೆ.