‘ಆಪರೇಷನ್ ಕಮಲ’ ಆಡಿಯೊ ಚರ್ಚೆ ವೇಳೆ ವಿಧಾನಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, ‘ರಮೇಶ್ ಕುಮಾರ್ ಅವರು ಹೃದಯ ವೈಶಾಲ್ಯ ಮೆರೆಯಬಹುದು. ಇದು ವಿಧಾನಸಭಾಧ್ಯಕ್ಷರ ವೈಯಕ್ತಿಕ ವಿಚಾರ ಅಲ್ಲ. ಸದನದ ಸದಸ್ಯರಿಗೆ ಸಂಬಂಧಿಸಿದ ವಿಚಾರ’ ಎಂದರು. ‘ದಾರಿಯಲ್ಲಿ ಹೋಗುವವರು ಮಾತನಾಡಿದ್ದರೆ ಗಂಭೀರವಾಗಿ ತೆಗೆದುಕೊಳ್ಳಬೇಕಿರಲಿಲ್ಲ. ಅದನ್ನು ಲಘುವಾಗಿ ಪರಿಗಣಿಸಬಹುದಿತ್ತು’ ಎಂದರು.