<p><strong>ಬೆಂಗಳೂರು:</strong> ಹಲವು ತಲೆಮಾರುಗಳಿಂದ ಮೀಸಲಾತಿ ಸೌಲಭ್ಯ ಪಡೆದು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ (ಕೆನೆಪದರ) ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದವರು, ತಮ್ಮ ಸಮುದಾಯದ ಕಟ್ಟ ಕಡೆಯ ವ್ಯಕ್ತಿಗೆ ಆ ಸೌಲಭ್ಯವನ್ನು ಬಿಟ್ಟುಕೊಡಬೇಕು ಎಂದು ಜೆಡಿಎಸ್ ಸದಸ್ಯ ಎ.ಟಿ.ರಾಮಸ್ವಾಮಿ ಸಲಹೆ ನೀಡಿದರು.</p>.<p>ವಿಧಾನಸಭೆಯಲ್ಲಿ ಸಂವಿಧಾನ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಐಎಎಸ್ ಅಧಿಕಾರಿಯೊಬ್ಬರ ಮಕ್ಕಳು ಮೀಸಲಾತಿ ಅಡಿಯೇ ಎಂಬಿಬಿಎಸ್, ಎಂಡಿ ಸೀಟು ಪಡೆದುಕೊಂಡಿದ್ದಾರೆ. ಇವರು ತಮ್ಮ ಸಮುದಾಯದ ಸವಲತ್ತು ವಂಚಿತರಿಗೆ ತ್ಯಾಗ ಮಾಡಬೇಕಿತ್ತು ಎಂದರು.</p>.<p>ಕೆನೆ ಪದರದಲ್ಲಿರುವವರ ಮಕ್ಕಳು ಜತೆ ಗ್ರಾಮಾಂತರ ಪ್ರದೇಶದ ಕಡು ಬಡವ ದಲಿತ ಮಕ್ಕಳು ಸ್ಪರ್ಧೆ ಮಾಡಲು ಸಾಧ್ಯವಿದೆಯೇ. ಈ ಬಗ್ಗೆ ಎಲ್ಲರೂ ಮುಕ್ತ ಮನಸ್ಸಿನಿಂದ ಚಿಂತನೆ ನಡೆಸಬೇಕು ಎಂದು ಅವರು ಪ್ರಶ್ನಿಸಿದರು.</p>.<p>‘ಮೀಸಲಾತಿ ರದ್ದು ಮಾಡಿ ಎನ್ನುತ್ತಿಲ್ಲ. ಉಳ್ಳವರೇ ಸೌಲಭ್ಯವನ್ನು ಮತ್ತೆ ಮತ್ತೆ ಪಡೆಯುತ್ತಿರುವುದರಿಂದ ವಂಚಿತರು ಸದಾ ವಂಚಿತರಾಗಿ ಉಳಿಯುವಂತಾಗಿದೆ. ಇದು ಪರಿಶಿಷ್ಟರಿಗೆ ಮಾತ್ರವಲ್ಲ ಎಲ್ಲ ವರ್ಗಗಳಿಗೂ ಅನ್ವಯವಾಗುತ್ತದೆ’ ಎಂದು ರಾಮಸ್ವಾಮಿ ತಿಳಿಸಿದರು.</p>.<p>ರಾಮಸ್ವಾಮಿಯವರ ವಾದ ಒಪ್ಪದ ಜೆಡಿಎಸ್ನ ಕೆ. ಅನ್ನದಾನಿ, ಇದರಲ್ಲಿ ಸರ್ಕಾರದ ವೈಫಲ್ಯವಿದೆ. ಸರ್ಕಾರ ಕಟ್ಟ ಕಡೆಯವನಿಗೂ ಮೀಸಲು ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಹಲವು ತಲೆಮಾರುಗಳಿಂದ ಮೀಸಲಾತಿ ಸೌಲಭ್ಯ ಪಡೆದು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ (ಕೆನೆಪದರ) ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದವರು, ತಮ್ಮ ಸಮುದಾಯದ ಕಟ್ಟ ಕಡೆಯ ವ್ಯಕ್ತಿಗೆ ಆ ಸೌಲಭ್ಯವನ್ನು ಬಿಟ್ಟುಕೊಡಬೇಕು ಎಂದು ಜೆಡಿಎಸ್ ಸದಸ್ಯ ಎ.ಟಿ.ರಾಮಸ್ವಾಮಿ ಸಲಹೆ ನೀಡಿದರು.</p>.<p>ವಿಧಾನಸಭೆಯಲ್ಲಿ ಸಂವಿಧಾನ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಐಎಎಸ್ ಅಧಿಕಾರಿಯೊಬ್ಬರ ಮಕ್ಕಳು ಮೀಸಲಾತಿ ಅಡಿಯೇ ಎಂಬಿಬಿಎಸ್, ಎಂಡಿ ಸೀಟು ಪಡೆದುಕೊಂಡಿದ್ದಾರೆ. ಇವರು ತಮ್ಮ ಸಮುದಾಯದ ಸವಲತ್ತು ವಂಚಿತರಿಗೆ ತ್ಯಾಗ ಮಾಡಬೇಕಿತ್ತು ಎಂದರು.</p>.<p>ಕೆನೆ ಪದರದಲ್ಲಿರುವವರ ಮಕ್ಕಳು ಜತೆ ಗ್ರಾಮಾಂತರ ಪ್ರದೇಶದ ಕಡು ಬಡವ ದಲಿತ ಮಕ್ಕಳು ಸ್ಪರ್ಧೆ ಮಾಡಲು ಸಾಧ್ಯವಿದೆಯೇ. ಈ ಬಗ್ಗೆ ಎಲ್ಲರೂ ಮುಕ್ತ ಮನಸ್ಸಿನಿಂದ ಚಿಂತನೆ ನಡೆಸಬೇಕು ಎಂದು ಅವರು ಪ್ರಶ್ನಿಸಿದರು.</p>.<p>‘ಮೀಸಲಾತಿ ರದ್ದು ಮಾಡಿ ಎನ್ನುತ್ತಿಲ್ಲ. ಉಳ್ಳವರೇ ಸೌಲಭ್ಯವನ್ನು ಮತ್ತೆ ಮತ್ತೆ ಪಡೆಯುತ್ತಿರುವುದರಿಂದ ವಂಚಿತರು ಸದಾ ವಂಚಿತರಾಗಿ ಉಳಿಯುವಂತಾಗಿದೆ. ಇದು ಪರಿಶಿಷ್ಟರಿಗೆ ಮಾತ್ರವಲ್ಲ ಎಲ್ಲ ವರ್ಗಗಳಿಗೂ ಅನ್ವಯವಾಗುತ್ತದೆ’ ಎಂದು ರಾಮಸ್ವಾಮಿ ತಿಳಿಸಿದರು.</p>.<p>ರಾಮಸ್ವಾಮಿಯವರ ವಾದ ಒಪ್ಪದ ಜೆಡಿಎಸ್ನ ಕೆ. ಅನ್ನದಾನಿ, ಇದರಲ್ಲಿ ಸರ್ಕಾರದ ವೈಫಲ್ಯವಿದೆ. ಸರ್ಕಾರ ಕಟ್ಟ ಕಡೆಯವನಿಗೂ ಮೀಸಲು ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>