‘ನಾನು ಕಾಣೆಯಾಗಿಲ್ಲ. ಅನಾರೋಗ್ಯದ ನಿಮಿತ್ತ ನನ್ನ ತಂದೆ ಪೃಥ್ವಿರಾಜ್ ಸಿಂಗ್ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಅವರೊಂದಿಗೆ ಅಲ್ಲಿಯೇ ಇದ್ದೆ. ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ನನ್ನ ಬಳಿ ಇವೆ. ನಾನು ಕಾಣೆಯಾಗಿದ್ದೇನೆ ಎಂದು ಕೆಲವರು ಠಾಣೆಗೆ ದೂರು ಕೊಟ್ಟಿದ್ದರು. ಆ ಠಾಣೆಗೆ ಭಾನುವಾರ ರಾತ್ರಿ ನಾನೇ ಖುದ್ದಾಗಿ ಹೋಗಿ ದಾಖಲೆಗಳನ್ನು ಕೊಟ್ಟಿರುವೆ’ ಎಂದು ಸಮಜಾಯಿಷಿ ನೀಡಿದರು.