ಪ್ರಶಸ್ತಿಯು ತಲಾ ₹ 5 ಲಕ್ಷ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಸಾಧಕ ವ್ಯಕ್ತಿಗಳಿಗೆ ನೀಡಲಾಗುವ ಪುರಸ್ಕಾರಕ್ಕೆ ದೆಹಲಿಯ ಓಂಕಾರನಾಥ ಶರ್ಮಾ (ಮೆಡಿಸಿನ್ ಬಾಬಾ), ಮೈಸೂರಿನ ವೈದ್ಯ ಡಾ.ಕೆ.ಆರ್.ಕಾಮತ್, ಸಂಗೀತ ಸಂಘಟಕ ಹಿಮಾಂಶು ಪಾತ್ರರಾಗಿದ್ದು, ಪ್ರಶಸ್ತಿ ತಲಾ ₹3 ಲಕ್ಷ ನಗದು ಒಳಗೊಂಡಿದೆ. ಜ.5ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಫೌಂಡೇಶನ್ ಟ್ರಸ್ಟಿ ಎಂ.ಜಗನ್ನಾಥ ಶೆಣೈ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.