‘ನಗರದ ಟೌನ್ಹಾಲ್ ಮುಂಭಾಗಡಿಸೆಂಬರ್ 19ರಂದು ನಡೆದ ಪ್ರತಿಭಟನೆ ವೇಳೆ ಪೊಲೀಸರು ನನ್ನ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ಯಾವುದೇ ದೂರವಾಣಿ ಕರೆ ನಾನು ಸ್ವೀಕರಿಸಿಲ್ಲಅಥವಾ ನನ್ನ ಕ್ಷಮೆಯನ್ನೂ ಕೇಳಿಲ್ಲ. ಹಾಗೊಂದು ವೇಳೆ ಕ್ಷಮೆಯಾಚಿಸಿದ್ದರೆ ಅದನ್ನು ತಿರಸ್ಕರಿಸುತ್ತಿದ್ದೆ.144ನೇ ವಿಧಿಯ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದು ಕಾನೂನು ಬಾಹಿರ ಎಂದು ಕರ್ನಾಟಕ ಹೈಕೋರ್ಟ್ ಈಗಾಗಲೇ ಹೇಳಿದೆ. ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಸಾವಿರಾರು ಜನರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದು, ಅವರಲ್ಲಿ ನಾನೂ ಒಬ್ಬನಾಗಿದ್ದೆ ಎಂಬ ಹೆಮ್ಮೆ ಇದೆ’ ಎಂದು ಗುಹಾ ಅವರು ಹೇಳಿದ್ದಾರೆ.