ಕೃಷಿ ಸಚಿವನಾದ ನಂತರ ಹಿರೇಕೆರೂರಿಗೆ ಪ್ರಥಮ ಬಾರಿಗೆ ಬರುವ ಮಾರ್ಗ ಮಧ್ಯೆ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ರಾಹುಲ್ ಗಾಂಧಿ ಹೇಳಿಕೆಅವರ ಪ್ರಬುದ್ಧತೆ ಎಷ್ಟು ಎಂಬುದನ್ನು ತೋರಿಸುತ್ತದೆ. ಯಾರೂ ಸಾವಿನ ಜೊತೆ ಸರಸವಾಡುವುದಿಲ್ಲ. ಸೈನಿಕರ ಸಮಾಧಿ ಮೇಲೆ ರಾಜಕಾರಣ ಮಾಡುವ ಉದ್ದೇಶ ಯಾರಿಗೂ ಇರುವುದಿಲ್ಲ. ಹಾಗೆ ರಾಹುಲ್ ಗಾಂಧಿ ಭಾವಿಸಿದ್ದರೆ, ಅವರ ಮೂರ್ಖತನದ ಪರಮಾವಧಿ ಎಂದು ತಿರುಗೇಟು ನೀಡಿದರು.