<p><strong>ಹುಬ್ಬಳ್ಳಿ:</strong> ರಾಜ್ಯ ಪಾನೀಯ ನಿಗಮದ(ಕೆಎಸ್ಬಿಸಿಎಲ್) ವಿವಿಧ ಡಿಪೊಗಳಲ್ಲಿ 2019–20ನೇ ಸಾಲಿನಲ್ಲಿ ಅವಧಿ ಮುಗಿದ 1,27,814 ಕೇಸ್ ಬಿಯರ್ ಹಾಳಾಗಿವೆ. ಇದರಿಂದ ಬಿಯರ್ ತಯಾರಿಕಾ ಕಂಪನಿಗಳಿಗೆ ಅಂದಾಜು ₹25 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ. ಲಾಕ್ಡೌನ್ ಅವಧಿಯಲ್ಲೇ (ಮಾರ್ಚ್, ಏಪ್ರಿಲ್)ಅಂದಾಜು ₹8 ಕೋಟಿ ಮೌಲ್ಯದ 42 ಸಾವಿರ ಕೇಸ್ ಬಿಯರ್ನ ಅವಧಿ ಮುಗಿದಿವೆ.</p>.<p>ರಾಜ್ಯದಲ್ಲಿರುವ 71 ಪಾನೀಯ ನಿಗಮದ ಡಿಪೊಗಳಿಗೆ ಬಿಯರ್ ತಯಾರಿಕಾ ಕಂಪನಿಗಳು ಮಾರುಕಟ್ಟೆ ಬೇಡಿಕೆ ಆಧರಿಸಿ ಶೇ 30 ರಷ್ಟು ಮೂಲ ಬೆಲೆಗೆ ಬಿಯರ್ ಪೂರೈಸುತ್ತವೆ. ದಾಸ್ತಾನು ಪೂರೈಸುವ ಪೂರ್ವದಲ್ಲಿ ಅಬಕಾರಿ ಸುಂಕ ಹಾಗೂ ಹೆಚ್ಚುವರಿ ಅಬಕಾರಿ ಸುಂಕವನ್ನು ಸರ್ಕಾರಕ್ಕೆ ಪಾವತಿಸಿರುತ್ತವೆ.</p>.<p>ಪಾನೀಯ ನಿಗಮಕ್ಕೆ 6 ಬಿಯರ್ ತಯಾರಿಕಾ ಕಂಪನಿಗಳು ದಾಸ್ತಾನು ಪೂರೈಸುತ್ತವೆ. ಬಿಯರ್ ಬಳಕೆಗೆ ಆರು ತಿಂಗಳು ವಾಯಿದೆ ಇರುತ್ತದೆ. ಈ ಬಾರಿ ಬೇಸಿಗೆಯಲ್ಲಿ ಬೇಡಿಕೆ ಅಧಿಕವಾಗುವ ನಿರೀಕ್ಷೆಯಿಂದ ಉತ್ಪಾದನೆ ಹೆಚ್ಚಿಸಲಾಗಿತ್ತು. ಆದರೆ, ಲಾಕ್ಡೌನ್ ಪರಿಣಾಮ ಬೇಡಿಕೆ ತಗ್ಗಿತು.</p>.<p>ಕೊರೊನಾ ಸೋಂಕು ಹರಡುವ ಭೀತಿಯಿಂದ ಸರ್ಕಾರ ಮದ್ಯ ಮಾರಾಟ ನಿರ್ಬಂಧಿಸಿತು. ಕಳೆದ ವರ್ಷ ಹಾಗೂ ಈಗಿನ ಲಾಕ್ಡೌನ್ ಸಂದರ್ಭದಲ್ಲಿ ಮಾರಾಟವಾಗದೇ ಉಳಿದ ಬಿಯರ್ ಈಗ ವ್ಯರ್ಥವಾಗಿದೆ.</p>.<p>‘ಹುಬ್ಬಳ್ಳಿಯ ಕೆಎಸ್ಬಿಸಿಎಲ್ ಡಿಪೊ ಒಂದರಲ್ಲೇ 775 ಬಿಯರ್ ಕೇಸ್ಗಳ ಅವಧಿ ಮುಗಿದಿವೆ. ಇದರಿಂದ ಅಂದಾಜು ₹15.50 ಲಕ್ಷ ನಷ್ಟವಾಗಿದೆ’ ಎಂದು ಡಿಪೊ ವ್ಯವಸ್ಥಾಪಕ ಮಹೇಶ್ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="Subhead"><strong>ಕೊರೊನಾ ಭೀತಿಯೂ ಕಾರಣ:</strong></p>.<p>ಬಿಯರ್ ಬಳಕೆ ಕಡಿಮೆಯಾಗಲು ಕೊರೊನಾ ಭೀತಿಯೂ ಕಾರಣವಾಗಿದೆ. ತಣ್ಣನೆಯ ಬಿಯರ್ ಕುಡಿಯುವುದರಿಂದ ಕೊರೊನಾ ಸೋಂಕು ಹರಡಲಿದೆ ಎಂಬ ವದಂತಿ ಹಬ್ಬಿ ಬೇಡಿಕೆ ತಗ್ಗಿದೆ ಎನ್ನಲಾಗಿದೆ.</p>.<p>ಲಾಕ್ಡೌನ್ ಸಡಿಲಿಕೆ ಬಳಿಕವೂ ಬೆಂಗಳೂರಿನಿಂದ 15–20 ಲಕ್ಷ ವಲಸೆ ಕಾರ್ಮಿಕರು ಊರುಗಳಿಗೆ ವಾಪಸ್ ಆಗಿರುವುದರಿಂದ ಬಿಯರ್ ಹಾಗೂ ಇತರೆ ಐಎಂಎಲ್ ಮದ್ಯದ ಬಳಕೆ ಪ್ರಮಾಣ ತಗ್ಗಬಹುದು ಎಂದು ಕರ್ನಾಟಕ ಬ್ರೇವರೀಸ್ ಮತ್ತು ಡಿಸ್ಟಿಲರಿ ಅಸೋಸಿಯೇಷನ್ ಅಂದಾಜಿಸಿದೆ.</p>.<p>ರಾಜ್ಯ ಪಾನೀಯ ನಿಗಮದಲ್ಲಿ ಎಲ್ಲ ವಹಿವಾಟು ಸಂಪೂರ್ಣ ಆನ್ಲೈನ್ನಲ್ಲಿ ನಡೆಯುವುದರಿಂದ ಅವಧಿ ಮುಗಿಯುವ ಮದ್ಯವನ್ನು 15 ದಿನಕ್ಕೆ ಮುಂಚೆಯೇ ವಿಲೇವಾರಿ ಮಾಡಲಾಗುವುದು. ಆದರೆ, ಈ ಬಾರಿ ಲಾಕ್ಡೌನ್ ನಿರ್ಬಂಧದಿಂದ ಮಾರಾಟ ಸ್ಥಗಿತವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ರಾಜ್ಯ ಪಾನೀಯ ನಿಗಮದ(ಕೆಎಸ್ಬಿಸಿಎಲ್) ವಿವಿಧ ಡಿಪೊಗಳಲ್ಲಿ 2019–20ನೇ ಸಾಲಿನಲ್ಲಿ ಅವಧಿ ಮುಗಿದ 1,27,814 ಕೇಸ್ ಬಿಯರ್ ಹಾಳಾಗಿವೆ. ಇದರಿಂದ ಬಿಯರ್ ತಯಾರಿಕಾ ಕಂಪನಿಗಳಿಗೆ ಅಂದಾಜು ₹25 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ. ಲಾಕ್ಡೌನ್ ಅವಧಿಯಲ್ಲೇ (ಮಾರ್ಚ್, ಏಪ್ರಿಲ್)ಅಂದಾಜು ₹8 ಕೋಟಿ ಮೌಲ್ಯದ 42 ಸಾವಿರ ಕೇಸ್ ಬಿಯರ್ನ ಅವಧಿ ಮುಗಿದಿವೆ.</p>.<p>ರಾಜ್ಯದಲ್ಲಿರುವ 71 ಪಾನೀಯ ನಿಗಮದ ಡಿಪೊಗಳಿಗೆ ಬಿಯರ್ ತಯಾರಿಕಾ ಕಂಪನಿಗಳು ಮಾರುಕಟ್ಟೆ ಬೇಡಿಕೆ ಆಧರಿಸಿ ಶೇ 30 ರಷ್ಟು ಮೂಲ ಬೆಲೆಗೆ ಬಿಯರ್ ಪೂರೈಸುತ್ತವೆ. ದಾಸ್ತಾನು ಪೂರೈಸುವ ಪೂರ್ವದಲ್ಲಿ ಅಬಕಾರಿ ಸುಂಕ ಹಾಗೂ ಹೆಚ್ಚುವರಿ ಅಬಕಾರಿ ಸುಂಕವನ್ನು ಸರ್ಕಾರಕ್ಕೆ ಪಾವತಿಸಿರುತ್ತವೆ.</p>.<p>ಪಾನೀಯ ನಿಗಮಕ್ಕೆ 6 ಬಿಯರ್ ತಯಾರಿಕಾ ಕಂಪನಿಗಳು ದಾಸ್ತಾನು ಪೂರೈಸುತ್ತವೆ. ಬಿಯರ್ ಬಳಕೆಗೆ ಆರು ತಿಂಗಳು ವಾಯಿದೆ ಇರುತ್ತದೆ. ಈ ಬಾರಿ ಬೇಸಿಗೆಯಲ್ಲಿ ಬೇಡಿಕೆ ಅಧಿಕವಾಗುವ ನಿರೀಕ್ಷೆಯಿಂದ ಉತ್ಪಾದನೆ ಹೆಚ್ಚಿಸಲಾಗಿತ್ತು. ಆದರೆ, ಲಾಕ್ಡೌನ್ ಪರಿಣಾಮ ಬೇಡಿಕೆ ತಗ್ಗಿತು.</p>.<p>ಕೊರೊನಾ ಸೋಂಕು ಹರಡುವ ಭೀತಿಯಿಂದ ಸರ್ಕಾರ ಮದ್ಯ ಮಾರಾಟ ನಿರ್ಬಂಧಿಸಿತು. ಕಳೆದ ವರ್ಷ ಹಾಗೂ ಈಗಿನ ಲಾಕ್ಡೌನ್ ಸಂದರ್ಭದಲ್ಲಿ ಮಾರಾಟವಾಗದೇ ಉಳಿದ ಬಿಯರ್ ಈಗ ವ್ಯರ್ಥವಾಗಿದೆ.</p>.<p>‘ಹುಬ್ಬಳ್ಳಿಯ ಕೆಎಸ್ಬಿಸಿಎಲ್ ಡಿಪೊ ಒಂದರಲ್ಲೇ 775 ಬಿಯರ್ ಕೇಸ್ಗಳ ಅವಧಿ ಮುಗಿದಿವೆ. ಇದರಿಂದ ಅಂದಾಜು ₹15.50 ಲಕ್ಷ ನಷ್ಟವಾಗಿದೆ’ ಎಂದು ಡಿಪೊ ವ್ಯವಸ್ಥಾಪಕ ಮಹೇಶ್ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="Subhead"><strong>ಕೊರೊನಾ ಭೀತಿಯೂ ಕಾರಣ:</strong></p>.<p>ಬಿಯರ್ ಬಳಕೆ ಕಡಿಮೆಯಾಗಲು ಕೊರೊನಾ ಭೀತಿಯೂ ಕಾರಣವಾಗಿದೆ. ತಣ್ಣನೆಯ ಬಿಯರ್ ಕುಡಿಯುವುದರಿಂದ ಕೊರೊನಾ ಸೋಂಕು ಹರಡಲಿದೆ ಎಂಬ ವದಂತಿ ಹಬ್ಬಿ ಬೇಡಿಕೆ ತಗ್ಗಿದೆ ಎನ್ನಲಾಗಿದೆ.</p>.<p>ಲಾಕ್ಡೌನ್ ಸಡಿಲಿಕೆ ಬಳಿಕವೂ ಬೆಂಗಳೂರಿನಿಂದ 15–20 ಲಕ್ಷ ವಲಸೆ ಕಾರ್ಮಿಕರು ಊರುಗಳಿಗೆ ವಾಪಸ್ ಆಗಿರುವುದರಿಂದ ಬಿಯರ್ ಹಾಗೂ ಇತರೆ ಐಎಂಎಲ್ ಮದ್ಯದ ಬಳಕೆ ಪ್ರಮಾಣ ತಗ್ಗಬಹುದು ಎಂದು ಕರ್ನಾಟಕ ಬ್ರೇವರೀಸ್ ಮತ್ತು ಡಿಸ್ಟಿಲರಿ ಅಸೋಸಿಯೇಷನ್ ಅಂದಾಜಿಸಿದೆ.</p>.<p>ರಾಜ್ಯ ಪಾನೀಯ ನಿಗಮದಲ್ಲಿ ಎಲ್ಲ ವಹಿವಾಟು ಸಂಪೂರ್ಣ ಆನ್ಲೈನ್ನಲ್ಲಿ ನಡೆಯುವುದರಿಂದ ಅವಧಿ ಮುಗಿಯುವ ಮದ್ಯವನ್ನು 15 ದಿನಕ್ಕೆ ಮುಂಚೆಯೇ ವಿಲೇವಾರಿ ಮಾಡಲಾಗುವುದು. ಆದರೆ, ಈ ಬಾರಿ ಲಾಕ್ಡೌನ್ ನಿರ್ಬಂಧದಿಂದ ಮಾರಾಟ ಸ್ಥಗಿತವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>