ನಗರದ ತಮ್ಮ ಮನೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ‘ಬಳ್ಳಾರಿ ಜಿಲ್ಲೆ ಒಂದು. ನಾವೆಲ್ಲ ಒಂದಾಗಿರಬೇಕು. ಬಳ್ಳಾರಿ ಅಖಂಡವಾಗಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಈಗಾಗಲೇ ಹೊಸ ಜಿಲ್ಲೆಗಳಾಗಿರೋದನ್ನ ನೋಡಿದ್ದೇವೆ. ವಿಭಜನೆಯಾದರೆ ಅಭಿವೃದ್ಧಿ ಕುಂಠಿತವಾಗುತ್ತದೆ. ಈಗ ಈ ಬಗ್ಗೆ ಹೆಚ್ಚು ಮಾತನಾಡಿ, ಮುಖ್ಯಮಂತ್ರಿಯವರಿಗೆ ಮುಜುಗರ ಉಂಟುಮಾಡಲ್ಲ’ ಎಂದರು.