‘ಉಪಚುನಾವಣೆಯಲ್ಲಿ ನಾನು ಸ್ಟಾರ್ ಪ್ರಚಾರನಾಗಿರಲಿಲ್ಲ. ಕಾರಿಗೆ ಸ್ಟಾರ್ ಪ್ರಚಾರಕನೆಂದು ಬೋರ್ಡ್ ಹಾಕಿಕೊಂಡು ಹೋದರೆ, ಹತ್ತು ಜನರೂ ಬರುವುದಿಲ್ಲ. ಜನಾನುರಾಗಿ ಇದ್ದವರಿಗೆ ಅವಕಾಶ ಕೊಡಬೇಕು. ರೂಮಿನಲ್ಲಿ ಕುಳಿತು ಸಭೆ ಮಾಡುವವರಿಗೆ ನಾಯಕತ್ವ ಕೊಟ್ಟರೆ, ಠೇವಣಿ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ’ ಎಂದ ಅವರು, ‘ರಾಜ್ಯ ಘಟಕದ ಅಧ್ಯಕ್ಷರು ಬಹಳ ಮುಗ್ಧ ಸ್ವಭಾವದವರು. ಕೆಲವೊಮ್ಮೆ ಅವರ ಒಳ್ಳೆತನ ದುರುಪಯೋಗವಾಗುತ್ತದೆ’ ಎಂದರು.