ಹುಬ್ಬಳ್ಳಿ: ಬಾಲ್ಯದ ದಿನಗಳಲ್ಲಿ ಪಠ್ಯ ಚಟುವಟಿಕೆಗಳಲ್ಲಿ ಅನಂತು ಸಕ್ರಿಯನಾಗಿದ್ದ. ಸದಾ ಚಟುವಟಿಕೆಯಿಂದ ಇರುತ್ತಿದ್ದ. ಕ್ರೀಡಾ ಸ್ಪರ್ಧೆಗಳಲ್ಲಿ ಯಾವಾಗಲೂ ಮೊದಲಿಗನಾಗಿರುತ್ತಿದ್ದ. ಸಣ್ಣ ವಯಸ್ಸಿಗೆ ನಮ್ಮನ್ನೆಲ್ಲ ಬಿಟ್ಟು ಹೋಗುತ್ತಾನೆಂದು ಅಂದುಕೊಂಡಿರಲಿಲ್ಲ. ಸ್ವಂತ ಮಗನನ್ನೇ ಕಳೆದುಕೊಂಡಷ್ಟು ದುಃಖವಾಗಿದೆ ಎಂದು ಕೆಂದ್ರ ಸಚಿವ ಅನಂತ್ ಕುಮಾರ್ ಅವರು ಕಲಿತ ಎಂಟಿಎಸ್ ಕಾಲೋನಿಯ ರೈಲ್ವೆ ಪ್ರಾಥಮಿಕ ಶಾಲೆಯ ಶಿಕ್ಷಕಿ ಪಿ.ಡಿ. ನಡುಗಡ್ಡಿ ಬೇಸರ ವ್ಯಕ್ತಪಡಿಸಿದರು.
ಮೂರು ವರ್ಷಗಳ ಹಿಂದೆ ಭೇಟಿಯಾಗಿದ್ದಾಗ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ನನಗೆ ಹೇಳಿದ್ದ. ದಕ್ಷಿಣ ವಲಯದ ಯಾವುದೇ ಶಾಲಾ ಕ್ರೀಡಾಕೂಟಗಳಿದ್ದರೂ ಅನಂತ್, ಪ್ರಹ್ಲಾದ (ಸಂಸದ ಪ್ರಹ್ಲಾದ ಜೋಶಿ) ಮುಂಚೂಣಿಯಲ್ಲಿ ಇರುತ್ತಿದ್ದರು. ಅನಂತು ತನ್ನ ಮಗಳ ಮದುವೆಗೂ ಕರೆದಿದ್ದ ಎಂದು ನೆನಪುಗಳನ್ನು ಹಂಚಿಕೊಂಡರು.