ಈ ಸಂಬಂಧ ‘ಫೇಸ್ಬುಕ್’ ಮೂಲಕ ಸಚಿವ ಸುರೇಶ್ ಕುಮಾರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆ ಶಿಕ್ಷಕ ಇವತ್ತು ನನ್ನನ್ನು ಭೇಟಿಯಾಗಲು ಬಂದಿದ್ದರು. ಆದರೆ, ಅವರಲ್ಲಿ ತಾವು ಮಾಡಿದ ಕೃತ್ಯದ ಬಗ್ಗೆ ಪಶ್ಚಾತಾಪದ ಲವಲೇಶವೂ ಕಂಡುಬರಲಿಲ್ಲ. ಅಮಾನತು ಆದೇಶ ರದ್ದು ಎಂಬ ಕಾರಣಕ್ಕೆ ತಪ್ಪಾಗಿದೆ ಎಂದು ಔಪಚಾರಿಕವಾಗಿ ಹೇಳಿದರು. ಅವರಲ್ಲಿ ಪ್ರಾಮಾಣಿಕತೆ ಕಂಡುಬರಲಿಲ್ಲ ಎಂದು ತಿಳಿಸಿದ್ದಾರೆ.