ಈ ಬೇಡಿಕೆಗೆ ಮತ್ತೊಬ್ಬ ಹಿರಿಯಮುಖಂಡ ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ‘ಕಲ್ಯಾಣ ಕರ್ನಾಟಕ ಭಾಗಕ್ಕೆ ಸೇರಿದ ಒಬ್ಬರು ಕಾರ್ಯಾಧ್ಯಕ್ಷರು ಇದ್ದು, ಅವರ ಜತೆಗೆ ಮತ್ತೊಬ್ಬರನ್ನು ನೇಮಿಸಿದರೆ ಸಾಕು. ವಿಧಾನಸಭೆ ವಿರೋಧ ಪಕ್ಷದ ನಾಯಕ ದಕ್ಷಿಣ ಭಾಗದವರೇ ಇದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೂ ಅದೇ ಪ್ರದೇಶದವರಿಗೆ ಕೊಟ್ಟರೆ ಮತ್ತಷ್ಟು ಮಂದಿಗೆ ಅವಕಾಶ ಕೊಡುವ ಅಗತ್ಯ ಕಾಣುವುದಿಲ್ಲ.ಇನ್ನು ಮುಂಬೈ ಕರ್ನಾಟಕದ ಒಬ್ಬರಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಿದರೆ ಸಾಕು’ ಎಂಬ ಸಲಹೆಗಳನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.