‘2009ರ ಲೋಕಸಭೆ ಚುನಾವಣೆಗೆ ಮೊದಲೂ ಕಾಂಗ್ರೆಸ್ ಸಾಲಮನ್ನಾದಂತಹ ಲಾಲಿಪಪ್ ಭರವಸೆ ನೀಡಿತ್ತು’ ಎಂದ ಅವರು, ‘ನಿಮ್ಮ ಸಾಲಮನ್ನಾ ಆಯಿತೇ?. ನಿಮ್ಮ ಖಾತೆಗಳಿಗೆ ಹಣ ಬಂತೇ? ಇಂತಹ ಜನರನ್ನು, ಇಂತಹ ಆಮಿಷಗಳನ್ನು ನಂಬುವಿರಾ?’ ಎಂದು ಪ್ರಶ್ನಿಸಿದರು. ಜೊತೆಗೆಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು, ರೈತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಲಿಲ್ಲ ಎಂದು ಹರಿಹಾಯ್ದರು.