‘ಪಶ್ಚಿಮ ಬಂಗಾಳದಲ್ಲಿ ಅತಿಥಿ ಉಪನ್ಯಾಸಕರಿಗೆ ಅತ್ಯುತ್ತಮ ಕೊಡುಗೆ ನೀಡುವ ಯೋಜನೆ ರೂಪಿಸಿದ್ದಾರೆ. ನೆಟ್, ಪಿಎಚ್.ಡಿ. ಆದ ಉಪನ್ಯಾಸಕರಿಗೆ ತಿಂಗಳಿಗೆ ₹ 35 ಸಾವಿರ ಗೌರವಧನ, ₹ 5 ಲಕ್ಷದವರೆಗೆ ಗುಂಪು ವಿಮಾ ಸೌಲಭ್ಯ, ನೇಮಕಾತಿಯಲ್ಲಿ ಮೀಸಲಾತಿ ಸಹಿತ ಹಲವು ಸೌಲಭ್ಯ ಕಲ್ಪಿಸಿದ್ದಾರೆ. ರಾಜ್ಯ ಸರ್ಕಾರ ಅದನ್ನು ಅನುಸರಿಸಬೇಕು’ ಎಂದು ಶಿವಮೊಗ್ಗದ ಅತಿಥಿ ಉಪನ್ಯಾಸಕ ಆರ್.ಬಿ.ಅರುಣ್ ಕುಮಾರ್ ಆಗ್ರಹಿಸಿದರು.