ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ 215 ಕೊರೊನಾ ಸೋಂಕು ಪ್ರಕರಣ: 39 ಮಂದಿ ಗುಣಮುಖ 

Last Updated 11 ಏಪ್ರಿಲ್ 2020, 13:07 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದಲ್ಲಿ ಶನಿವಾರ ಸಂಜೆಯ ವರೆಗೂ ಕೊರೊನಾ ವೈರಸ್‌ ಸೋಂಕು ತಗುಲಿದ ಒಟ್ಟು ಪ್ರಕರಣಗಳು 215 ತಲುಪಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕೋವಿಡ್‌–19 ದೃಢಪಟ್ಟ ಎಂಟು ಹೊಸ ಪ್ರಕರಣಗಳು ದಾಖಲಾಗಿವೆ.

ಕೊರೊನಾ ಸೋಂಕಿತರ ಪೈಕಿ ಈವರೆಗೂ 6 ಮಂದಿ ಸಾವಿಗೀಡಾಗಿದ್ದು, 39 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 170 ಸೋಂಕಿತರು ರಾಜ್ಯದಲ್ಲಿ ಗೊತ್ತು ಪಡಿಸಿದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಮೈಸೂರಿನ 5, ಬೆಂಗಳೂರಿನಲ್ಲಿ 2 ಹಾಗೂ ಬೀದರ್‌ನಲ್ಲಿ ಒಂದು ಹೊಸ ಪ್ರಕರಣ ದಾಖಲಾಗಿದೆ.

ಕರ್ನಾಟಕ–215
ಬೆಂಗಳೂರು 73
ಮೈಸೂರು 47
ಚಿಕ್ಕಬಳ್ಳಾಪುರ 09
ದಕ್ಷಿಣ ಕನ್ನಡ 12
ಕಲಬುರ್ಗಿ 10
ದಾವಣಗೆರೆ 03
ಉಡುಪಿ 03
ಬಳ್ಳಾರಿ 06
ತುಮಕೂರು 01
ಕೊಡಗು 01
ಧಾರವಾಡ 02
ಬೀದರ್‌ 11
ಬಾಗಲಕೋಟೆ 08
ಬೆಳಗಾವಿ 10
ಬೆಂಗಳೂರು ಗ್ರಾಮಾಂತರ 04
ಗದಗ 01
ಮಂಡ್ಯ 05
ಉತ್ತರ ಕನ್ನಡ 09

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT