‘ಸರ್ವೆ ನಂ.: 337/1ರಲ್ಲಿ ಸುಮಾರು 37 ಎಕರೆಯಷ್ಟು ಸರ್ಕಾರಿ ಭೂಮಿಯಿದೆ. ಉಳ್ಳವರು ಒತ್ತುವರಿ ಮಾಡಿಕೊಂಡಿದ್ದು 2 ಎಕರೆಯಷ್ಟು ಮಾತ್ರ ಉಳಿದಿದೆ. ಶ್ರೀಮಂತರು ಒತ್ತುವರಿ ಮಾಡುವಾಗ ಮೌನವಹಿಸಿದ್ದ ಅಧಿಕಾರಿಗಳು, ಬಡವರು ಗುಡಿಸಲು ಕಟ್ಟಿಕೊಳ್ಳುಲು ಬಂದಾಗ ತಡೆ ಒಡ್ಡುತ್ತಿದ್ದಾರೆ. ಈ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಪ್ರಕಾಶ್ ಎಚ್ಚರಿಸಿದರು.
ಸರ್ಕಾರಿ ಭೂಮಿಯಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದೆ ಗುಡಿಸಲುಗಳು ತಲೆಯೆತ್ತಲು ಆರಂಭವಾಗಿದ್ದವು. ಮಾಹಿತಿ ಪಡೆದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇವೆ. ಸರ್ಕಾರಿ ಜಾಗ ಒತ್ತುವರಿ ಮಾಡಿಕೊಳ್ಳುವುದು ಸರಿಯಲ್ಲ. ಈ ಜಾಗವನ್ನು ಬೇರೆ ಉದ್ದೇಶಕ್ಕೆ ಮೀಸಲು ಇರಿಸಲಾಗಿದೆಯೆಂದು ಪ್ರತಿಭಟನಕಾರರಿಗೆ ತಿಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಆದರೂ, ಪ್ರತಿಭಟನಕಾರರು ಸ್ಥಳ ಬಿಟ್ಟು ಕದಲಿಲ್ಲ.