ಘಟನೆ ವಿವರ:ಆ. 19ರ ರಾತ್ರಿ ರಬಕವಿಯಲ್ಲಿ 24 ಕತ್ತೆಗಳು ಕಳುವಾಗಿದ್ದರ ಬಗ್ಗೆ ಶಾಮ ಮಾರುತಿ ಭಜಂತ್ರಿ ದೂರು ನೀಡಿದ್ದರು. ಇದರ ತನಿಖೆಯ ಜವಾಬ್ದಾರಿ ತೆಗೆದುಕೊಂಡ ತಂಡ ತನಿಖೆ ಆರಂಭಿಸಿ 24 ಕತ್ತೆಗಳ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.
ಕತ್ತೆಗಳನ್ನು ಸಾಗಿಸಲು ಬಳಸಿದ ಅಶೋಕ ಲೈಲೆಂಡ್ ಕಂಪನಿಯ ಗೂಡ್ಸ್ ಹಾಗೂ 3 ಬೈಕ್ಗಳನ್ನು ಜಪ್ತಿ ಮಾಡಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು ಕತ್ತೆಗಳನ್ನು ಅವುಗಳ ಮಾಲೀಕರಿಗೆ ಒಪ್ಪಿಸಿಲಾಗಿದ್ದು, ಆರೋಪಿ ಹಾಗೂ ಜಪ್ತಿ ಮಾಡಿದ ವಸ್ತುಗಳನ್ನು ನ್ಯಾಯಾಂಗದ ವಶಕ್ಕೆ ನೀಡಲಾಗಿದೆ.