<p><strong>ತೇರದಾಳ:</strong> ರಬಕವಿಯಲ್ಲಿ 24 ಕತ್ತೆಗಳನ್ನು ಕಳುವು ಮಾಡಿದ್ದ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಕೊಡಲಾಗಿದೆ ಎಂದು ಬನಹಟ್ಟಿ ಸಿಪಿಐ ಅಶೋಕ ಸದಲಗಿ ಹೇಳಿದರು.</p>.<p>ಆನಂದ ಲಕ್ಷ್ಮಣ ಭಜಂತ್ರಿ, ಪರಶುರಾಮ ರಾಮು ಭಜಂತ್ರಿ, ಮುತ್ತಪ್ಪ ಸದಾಶಿವ ಹುದ್ದಾರ, ಪರಶುರಾಮ ಮಹಾದೇವ ಭಜಂತ್ರಿ, ಶ್ರೀಕಾಂತ ಮುರಿಗೆಪ್ಪ ಭಜಂತ್ರಿ, ಪ್ರಭು ಬಾಲಪ್ಪ ಭಜಂತ್ರಿ ಬಂಧಿತ ಆರೋಪಿಗಳು.</p>.<p><strong>ಘಟನೆ ವಿವರ:</strong>ಆ. 19ರ ರಾತ್ರಿ ರಬಕವಿಯಲ್ಲಿ 24 ಕತ್ತೆಗಳು ಕಳುವಾಗಿದ್ದರ ಬಗ್ಗೆ ಶಾಮ ಮಾರುತಿ ಭಜಂತ್ರಿ ದೂರು ನೀಡಿದ್ದರು. ಇದರ ತನಿಖೆಯ ಜವಾಬ್ದಾರಿ ತೆಗೆದುಕೊಂಡ ತಂಡ ತನಿಖೆ ಆರಂಭಿಸಿ 24 ಕತ್ತೆಗಳ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.</p>.<p>ಕತ್ತೆಗಳನ್ನು ಸಾಗಿಸಲು ಬಳಸಿದ ಅಶೋಕ ಲೈಲೆಂಡ್ ಕಂಪನಿಯ ಗೂಡ್ಸ್ ಹಾಗೂ 3 ಬೈಕ್ಗಳನ್ನು ಜಪ್ತಿ ಮಾಡಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು ಕತ್ತೆಗಳನ್ನು ಅವುಗಳ ಮಾಲೀಕರಿಗೆ ಒಪ್ಪಿಸಿಲಾಗಿದ್ದು, ಆರೋಪಿ ಹಾಗೂ ಜಪ್ತಿ ಮಾಡಿದ ವಸ್ತುಗಳನ್ನು ನ್ಯಾಯಾಂಗದ ವಶಕ್ಕೆ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೇರದಾಳ:</strong> ರಬಕವಿಯಲ್ಲಿ 24 ಕತ್ತೆಗಳನ್ನು ಕಳುವು ಮಾಡಿದ್ದ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಕೊಡಲಾಗಿದೆ ಎಂದು ಬನಹಟ್ಟಿ ಸಿಪಿಐ ಅಶೋಕ ಸದಲಗಿ ಹೇಳಿದರು.</p>.<p>ಆನಂದ ಲಕ್ಷ್ಮಣ ಭಜಂತ್ರಿ, ಪರಶುರಾಮ ರಾಮು ಭಜಂತ್ರಿ, ಮುತ್ತಪ್ಪ ಸದಾಶಿವ ಹುದ್ದಾರ, ಪರಶುರಾಮ ಮಹಾದೇವ ಭಜಂತ್ರಿ, ಶ್ರೀಕಾಂತ ಮುರಿಗೆಪ್ಪ ಭಜಂತ್ರಿ, ಪ್ರಭು ಬಾಲಪ್ಪ ಭಜಂತ್ರಿ ಬಂಧಿತ ಆರೋಪಿಗಳು.</p>.<p><strong>ಘಟನೆ ವಿವರ:</strong>ಆ. 19ರ ರಾತ್ರಿ ರಬಕವಿಯಲ್ಲಿ 24 ಕತ್ತೆಗಳು ಕಳುವಾಗಿದ್ದರ ಬಗ್ಗೆ ಶಾಮ ಮಾರುತಿ ಭಜಂತ್ರಿ ದೂರು ನೀಡಿದ್ದರು. ಇದರ ತನಿಖೆಯ ಜವಾಬ್ದಾರಿ ತೆಗೆದುಕೊಂಡ ತಂಡ ತನಿಖೆ ಆರಂಭಿಸಿ 24 ಕತ್ತೆಗಳ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.</p>.<p>ಕತ್ತೆಗಳನ್ನು ಸಾಗಿಸಲು ಬಳಸಿದ ಅಶೋಕ ಲೈಲೆಂಡ್ ಕಂಪನಿಯ ಗೂಡ್ಸ್ ಹಾಗೂ 3 ಬೈಕ್ಗಳನ್ನು ಜಪ್ತಿ ಮಾಡಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು ಕತ್ತೆಗಳನ್ನು ಅವುಗಳ ಮಾಲೀಕರಿಗೆ ಒಪ್ಪಿಸಿಲಾಗಿದ್ದು, ಆರೋಪಿ ಹಾಗೂ ಜಪ್ತಿ ಮಾಡಿದ ವಸ್ತುಗಳನ್ನು ನ್ಯಾಯಾಂಗದ ವಶಕ್ಕೆ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>