‘ಕಿಡ್ನಿಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದ ಕೋಡ್ಲಿಯ ವ್ಯಕ್ತಿ, ಚಿಕಿತ್ಸೆಗಾಗಿ ಹೈದರಾಬಾದ್ಗೆ ತೆರಳಿದ್ದರು. ಅವರು ಹಾಗೂ ಅವರ ಪತ್ನಿಯನ್ನು ಏ.30ರಂದು ಲಾರಿ ಚಾಲಕ, ಈರುಳ್ಳಿ ಮೂಟೆಗಳ ಮಧ್ಯೆ ಕೂಡ್ರಿಸಿ ಕರೆತಂದಿದ್ದ. ಸೋಂಕಿತನೇ ಇದನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಈತನಿಗೆ ಸೋಂಕು ಇರುವುದು ಮೇ 4ರಂದು ದೃಢಪಟ್ಟಿತ್ತು’ ಎಂದು ಮೂಲಗಳು ತಿಳಿಸಿವೆ.